ದಾವಣಗೆರೆ: ಒಂದೆಡೆ ಬಿಜೆಪಿಗೆ ರೌಡಿಗಳ ಸೇರ್ಪಡೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರಾಜಕಾರಣದಿಂದ ಹಣ ಸಂಪಾದಿಸೋದಕ್ಕಾಗಿ ಐಎಎಸ್ ಅಧಿಕಾರಿಗಳು, ರೌಡಿಗಳು, ಗೂಂಡಾಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ.

9 ಸಾವಿರ ಅಲ್ಲ, 18 ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಸೀಟು ರದ್ದುಪಡಿಸಿ ಎಂಜಿನಿಯರಿಂಗ್ ಸೀಟು ಮರು ಬಯಸಿದ್ದಾರೆ – ಕೆಇಎ ಸ್ಪಷ್ಟನೆ

ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ರಾಜಯಕೀಯಕ್ಕೆ ಈಗ ಸೇರುವವರ ಸಂಖ್ಯೆ ಹಚ್ಚಾಗಿದೆ. ಇದಕ್ಕಾಗಿ ಅನೇಕರು ಸಾಲುಗಟ್ಟಿ ಕೂಡ ನಿಂತಿದ್ದಾರೆ. ಎಲ್ಲಿಯೂ ಇಲ್ಲದಂತ ಸಂಪಾದನೇ ರಾಜಕೀಯದಿಂದ ಬರುತ್ತಿದೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದರು.

ಮಂಡ್ಯ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೋಲೀಸರೇ ಶಾಮೀಲು – ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷೆ ಕೆ.ಎಚ್.ಇಂದಿರಾ ಆರೋಪ

ಇದೇ ವೇಳೆ ಬೆಂಗಳೂರಿನ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಕುರಿತಂತೆ ಮಾತನಾಡಿದಂತ ವರು, ಇದು ಸಂವಿಧಾನ ವಿರುದ್ಧವಾದ್ದಾಗಿದೆ. ಇದನ್ನು ಯಾರೂ ಸರಿ ಅಂತ ಒಪ್ಪುವುದಿಲ್ಲ. ಚುನಾವಣಾ ಆಯೋಗವು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಎಲ್ಲಾ ಘಟನೆ ನೋಡ್ತಾ ಇದ್ದರೇ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆಯೋ ಅರ್ಥವೇ ಆಗುತ್ತಿಲ್ಲ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದರು.

Share.
Exit mobile version