ನವದೆಹಲಿ: ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿನ್ಹ್ ಅವರು ತಮ್ಮ ಮಗ ಮತ್ತು ಸೊಸೆ ರಿವಾಬಾ ಜಡೇಜಾ ಅವ್ರ ವಿರುದ್ಧ ಹರಿಹಾಯ್ದಿದ್ದು, ತಮ್ಮ ಮಗನಿಗೆ ಮದುವೆ ಮಾಡಬಾರದಿತ್ತು ಎಂದು ನೋವು ಹೊರ ಹಾಕಿದ್ದಾರೆ.

ಅಂದ್ಹಾಗೆ, ಫೆಬ್ರವರಿ 2016 ರಲ್ಲಿ, ಜಡೇಜಾ ಮೆಕ್ಯಾನಿಕಲ್ ಎಂಜಿನಿಯರ್ ರಿವಾಬಾ ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಎರಡು ತಿಂಗಳ ನಂತರ, ದಂಪತಿಗಳು ರಾಜ್ಕೋಟ್ನಲ್ಲಿ ಅದ್ದೂರಿಯಾಗಿ ವಿವಾಹವಾದರು.

ಜಡೇಜಾ ಅವರ ತಂದೆ ಅವರು ಮದುವೆಯಾದ ನಂತರ ಅವರೊಂದಿಗಿನ ಸಂಬಂಧವು ಹದಗೆಡಲು ಪ್ರಾರಂಭಿಸಿತು ಎಂದು ಆರೋಪಿಸಿದರು.

“ನಾನು ನಿಮಗೆ ಒಂದು ಸತ್ಯವನ್ನ ಹೇಳಬೇಕು ಅಂದುಕೊಂಡಿದ್ದೇನೆ. ರವೀಂದ್ರ ಮತ್ತು ಅವರ ಪತ್ನಿ ರಿವಾಬಾ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾವು ಅವರನ್ನ ಕರೆಯುವುದಿಲ್ಲ ಮತ್ತು ಅವ್ರು ನಮ್ಮನ್ನು ಕರೆಯುವುದಿಲ್ಲ. ಮದುವೆಯಾದ ಎರಡು ಅಥವಾ ಮೂರು ತಿಂಗಳ ನಂತರ ಸಮಸ್ಯೆಗಳು ಪ್ರಾರಂಭವಾದವು” ಎಂದಿದ್ದಾರೆ.

“ನಾನು ಪ್ರಸ್ತುತ ಜಾಮ್ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರೆ, ರವೀಂದ್ರ ತಮ್ಮದೇ ಆದ ಪ್ರತ್ಯೇಕ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇಬ್ಬರು ಒಂದೇ ನಗರದಲ್ಲಿ ವಾಸಿವಿದ್ರು, ನಾನು ಅವ್ರನ್ನ ನೋಡುವುದಿಲ್ಲ. ಅವರ ಪತ್ನಿ ಅವರ ಮೇಲೆ ಏನು ಮ್ಯಾಜಿಕ್ ಮಾಡಿದ್ದಾರೆಂದು ನನಗೆ ತಿಳಿದಿಲ್ಲ” ಎಂದು ಜಡೇಜಾ ಅವರ ತಂದೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಆಕೆ ನಮ್ಮ ಕುಟುಂಬದಲ್ಲಿ ಬಿರುಕು ಸೃಷ್ಟಿಸಿದಳು’
“ಅವನು ನನ್ನ ಮಗ, ಮತ್ತು ಅದು ನನ್ನ ಹೃದಯವನ್ನ ಸುಡುತ್ತದೆ. ನಾನು ಅವನಿಗೆ ಮದುವೆಯಾಗಬಾರದಿತ್ತು ಎಂದು ನಾನು ಬಯಸುತ್ತೇನೆ ಮತ್ತು ಕ್ರಿಕೆಟಿಗನಾಗಿರದಿದ್ದರೆ ಚೆನ್ನಾಗಿರುತ್ತಿತ್ತು. ಆ ಸಂದರ್ಭದಲ್ಲಿ ನಾವು ಇದೆಲ್ಲವನ್ನೂ ಎದುರಿಸಬೇಕಾಗುತ್ತಿರಲಿಲ್ಲ” ಎಂದು ಜಡೇಜಾ ಅವರ ತಂದೆ ಹೇಳಿದರು.

 

2008 ರಲ್ಲಿ ‘ಜಾಗತಿಕ ಆರ್ಥಿಕ ಬಿಕ್ಕಟ್ಟು’ ಕೋವಿಡ್-19 ನಷ್ಟು ಗಂಭೀರವಾಗಿರಲಿಲ್ಲ: ನಿರ್ಮಲಾ ಸೀತಾರಾಮನ್

BIG NEWS: ಚಿಕ್ಕಮಗಳೂರಲ್ಲಿ ಮತ್ತೆ ಲವ್ ಜಿಹಾದ್ ಪ್ರಕರಣ: ಯುವಕನನ್ನು ರೂಮಲ್ಲಿ ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿತ

‘IPS’ ಹುದ್ದೆಗೆ ‘ಪ್ರತಾಪ್ ರೆಡ್ಡಿ’ ರಾಜೀನಾಮೆ: ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ ‘ಗುಡ್ ಬೈ’

Share.
Exit mobile version