ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ BRTS ಚಿಗರಿ ಬಸ್ ಡಿಕ್ಕಿಯಾಗಿ ವೃದ್ಧರೊಬ್ಬರೂ ಸಾವನ್ನಪ್ಪಿದ್ದಾರೆ. ರಸ್ತೆದಾಟುವಾಗ ಬಿ ಆರ್ ಟಿ ಎಸ್ ಬಸ್ ಗುದ್ದಿ ವೃದ್ಧ ದಾರುಣವಾಗಿ ಸಾವನಪ್ಪಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಬಳಿ ಈ ಒಂದು ಅಪಘಾತ ನಡೆದಿದೆ. ಮಂಜುನಾಥ್ ನಗರದ ನಿವಾಸಿ ಗಂಗಾಧರ್ ಎನ್ನುವ ವೃದ್ಧರು ಸಾವನಪ್ಪಿದ್ದಾರೆ.

ಘಟನೆ ನಂತರ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಬಿ ಆರ್ ಟಿ ಎಸ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.ಈ ವೇಳೆ ಪೊಲೀಸರು ಹಾಗೂ ಬಿ ಆರ್ ಟಿ ಎಸ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆದಿದೆ.ಸ್ಥಳೀಯರು ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

Share.
Exit mobile version