ಬೆಂಗಳೂರು:  ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿತ್ತು, ಆ ವೇಳೆಯಲ್ಲಿ, ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಮಾಡಲಾಗಿತ್ತು.ಈಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ ಎನ್ನುವುದರ ವಿವರ ಇಲ್ಲಿದೆ.

  • ಗುತ್ತಿಗನೂರು ವಿ, ಗೌಡ-ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮ
  • ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ-ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ
  • ಚಂಗಾವರ ಮಾರಣ್ಣ-ಕಾಡುಗೊಲ್ಲ ಅಭಿವೃದ್ದಿ ನಿಗಮ
  • ದೇವೇಂದ್ರನಾಥ ಕೆ ನಾದ್‌-ಅಲೆಮಾರಿ/ಅರೆ ಅಲೆ ಮಾರಿ ಅಭಿವೃದ್ದಿ ನಿಗಮ
  • ಕೆ.ಪಿ ವೆಂಕಟೇಶ್‌-ಕರ್ನಾಟಕ ಸಪಾಯಿ ಕರ್ಮಚಾರಿ ಅಭಿವೃದ್ದಿ ನಿಗಮ
  • ಧರ್ಮಣ್ಣ ದೊಡ್ಡಮನಿ- ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ
  • ರಘು ಕೌಟಿಲ್ಯ- ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಶ್‌
  • ಕೊಲ್ಲಾ ಶೇಶಗಿರಿ ರಾವು-ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ತುಂಗ ಭದ್ರ ಯೋಜನೆ ಮುನಿರಬಾದ್‌
  • ಜಿ.ನಿಜಗುಣರಾಜು-ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ಕಾವೇರಿ ಜಲಾಯನ ಪ್ರದೇಶ ಮೈಸೂರು
  • ಎಂ ಸರವಣ-ಅಲ್ಪಸಂಖ್ಯಾತರ ನಿಗಮ
  • ಕೆ.ವಿ ನಾಗರಾಜ್‌- ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
  • ಮಾರುತಿ-ಕರಕುಶಲ ಅಭಿವೃದ್ದಿ ನಿಗಮ
  • ಎಂ ಎಸ್‌ ಕರಿಗೌಡ್ರ- ಮಾರ್ಕೆಟಿಂಗ್‌ ಕಮ್ಯೂನಿಕೇಶನ್‌ ಅಂಡ್‌ ಅಡ್ವಟ್ರೈಸಿಂಗ್‌ ಲಿಮಿಟೆಡ್‌
  • ಎ.ವಿ ತೀರ್ಥರಾಮ- ಮೀನುಗಾರಿಕೆ ಅಭಿವೃದ್ದಿ ನಿಗಮ
  • ಎನ್‌.ಎಂ ರವಿ ಕಾಳಪ್ಪ-ಕರ್ನಾಟಕ ಜೈವಿಕ ವೈವಿದ್ಯ ಮಂಡಳಿ

 

Share.
Exit mobile version