ಬೆಳಗಾವಿ: ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ ( Covid19 Case ) ಸಂಖ್ಯೆ ಹೆಚ್ಚಳದ ನಂತ್ರ, ಕೇಂದ್ರ, ರಾಜ್ಯ ಸರ್ಕಾರ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಒಳಾಂಗಣ ಪ್ರದೇಶಗಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಇದಲ್ಲದೇ ನಾಳೆ ತುರ್ತು ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಹೊಸ ವರ್ಷಾಚರಣೆಗೆ ( New Year 2023 ) ಬ್ರೇಕ್ ಹಾಕಲಿದ್ಯಾ ಎನ್ನುವ ಕುತೂಹಲವನ್ನು ಹುಟ್ಟಿಸಿದೆ.

BIGG NEWS : ಹೊಸ ವರ್ಷದಲ್ಲಿ ‘ಹಲೋ’ ಅನ್ಬೇಕಂದ್ರೆ ಹೆಚ್ಚು ಪಾವತಿಸ್ಬೇಕು, ಮೊಬೈಲ್ ಸುಂಕ ಹೆಚ್ಚಳ |Mobile Tariff Hike

ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್ ( Minister R Ashok ) ಅವರು, ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕು ಹೆಚ್ಚಳ ಭೀತಿಯ ಹಿನ್ನೆಲೆಯಲ್ಲಿ ನಾಳೆ ತುರ್ತು ಆರೋಗ್ಯ ಇಲಾಖೆಯ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

BREAKING NEWS: ಗಂಗಾ ಕಲ್ಯಾಣ ಯೋಜನೆ ಟೆಂಡರ್ ಬಗ್ಗೆ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಆರೋಗ್ಯ ಇಲಾಖೆ ಅಲ್ಲದೇ ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ನಾಳಿನ ತುರ್ತು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಕೋವಿಡ್ ಹೆಚ್ಚಳದ ಸಂದರ್ಭದಲ್ಲಿಯೂ ನಿಯಂತ್ರಣ ಕ್ರಮಗಳೊಂದಿಗೆ ಹೊಸ ವರ್ಷ ಆಚರಣೆ ಹೇಗೆ ಮಾಡಲು ಅನುಮತಿಸೋ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. ಅಲ್ಲದೇ ಬೆಂಗಳೂರು ನಗರ, ರಾಜ್ಯಕ್ಕೆ ನ್ಯೂ ಇಯರ್ ಸೆಲಬ್ರೇಷನ್ ಗಾಗಿ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಲಾಗುತ್ತಿದೆ ಎನ್ನಲಾಗಿದೆ. ಆ ಬಗ್ಗೆ ನಾಳೆಯವರೆಗೂ ಕಾದು ನೋಡಬೇಕಿದೆ.

Share.
Exit mobile version