ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕು ಮುಷ್ಟೂರ ಬಳಿ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.ಬೆಂಗಳೂರು, ಚಿಕ್ಕಜಾಲ ಪೊಲೀಸರಿಂದ ಆರೋಪಿಗಳ ಕಾಲಿಗೆ ಗುಂಡೇಟು ಹಾಕಿದ್ದಾರೆ.

BREAKING NEWS: ಬೆಳಗಾವಿಯಲ್ಲಿ ಪ್ರೇಯಸಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

 

ಡಕಾಯಿತಿ ಕೇಸ್ ನ ಐವರು ಆರೋಪಿಗಳು ಪರಾರಿಯಾಗಿದ್ದರು. ಆದರೆ ಜಾಲ ಪೊಲೀಸರು ಆರೋಪಗಳನ್ನ ಬೆನ್ನು ಹತ್ತಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದ ಇಬ್ಬರ ಮೇಲೆ ಗುಂಡೇಟು ಹಾಕಿದ್ದಾರೆ. ಅಶೋಕ್, ಶಂಕರ್ ಎನ್ನುವವರಿಗೆ ಗುಂಡು ಹಾರಿಸಿದ್ದಾರೆ.
ಆರೋಪಿಗಳ ಕಾಲಿಗೆ ಗಾಯ, ಪೊಲೀಸರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಗುಂಡೇಟು ತಿಂದು ಆರೋಪಿಗಳು ಅವಿತು ಕುಳಿತಿದ್ದರು.
ನಂತರ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು. ಪೊಲೀಸರು ಒಟ್ಟು ಐದು ಜನರ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬೆಂಗಳೂರು, ಕೊಪ್ಪಳ, ಬೆಳಗಾವಿ ಇನ್ನಿತರ ಕಡೆ ಡಕಾಯತಿ ಮಾಡಿದ ಕೇಸ್ ಗಳಿದ್ದವು.

Share.
Exit mobile version