ಬಾಗಲಕೋಟೆ: ಸಿದ್ದರಾಮಯ್ಯ ಹೇಳಲಿ, ಜವಾಬ್ದಾರಿಯ ನಾಯಕರಿದ್ದಾರೆ. ಅವರು ಏನ್ ಹೇಳಬೇಕಾಗಿದೆಯೋ ಅದನ್ನು ಹೇಳಲಿ, ಜನರಿಗೆ ಏನು ಸಂದೇಶ ಕೊಡ್ತಾರೆ ಕೊಡಲಿ ಎಂದು ಆರೋಪಕ್ಕೆ ಕಾರಜೋಳ ಪ್ರತಿಕ್ರಿಯಿಸಿದರು.
BIGG NEWS: ಕೇತುಗ್ರಸ್ಥ ಸೂರ್ಯ ಗ್ರಹಣ; ಅ. 25ರಂದು ಶ್ರೀ ಕ್ಷೇತ್ರ ಘಾಟಿ ದೇಗುಲ ಬಂದ್
ಎಐಸಿಸಿಗೆ ಖರ್ಗೆ ಅಧ್ಯಕ್ಷರಾಗೋ ವಿಚಾರವಾಗಿ ಮಾತನಾಡಿದ ಕಾರಜೋಳ, ಇನ್ನು ಆಯ್ಕೆ ಇಂದು ಮತದಾನ ಆಗಿದೆ. 19ಕ್ಕೆ ರಿಸಲ್ಟ್ ಬರುತ್ತೆ, ಬಂದ ಮೇಲೆ ಹೇಳ್ತೀನಿ. ಖರ್ಗೆ ಎಐಸಿಸಿ ಅಧ್ಯಕ್ಷರಾಗೋದರಿಂದ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಳುಗುವ ಹಡಗಾಗಿದ್ದು, ಮುಳುಗುವ ಹಡಗಿನಲ್ಲಿ ನಾವಿಕನನ್ನಾಗಿ ಖರ್ಗೆ ಅವರನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು 10 ವರ್ಷ ಯುಪಿಎ ಸರ್ಕಾರ ಇತ್ತು. ಅವಾಗಲೇ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು.
BIGG NEWS: ಕೇತುಗ್ರಸ್ಥ ಸೂರ್ಯ ಗ್ರಹಣ; ಅ. 25ರಂದು ಶ್ರೀ ಕ್ಷೇತ್ರ ಘಾಟಿ ದೇಗುಲ ಬಂದ್
ಅವಾಗ ಯಾಕೆ ಮಾಡಲಿಲ್ಲ. ಮಾಡಬೇಕಿತ್ತಲ್ಲ ಎಂದು ಪ್ರಶ್ನಿಸಿದರು.ಸರ್ಕಾರ ಎಲ್ಲ ವರ್ಗದವರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೆ. ಯಾವುದೇ ಸಮಾಜಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.ದೇಶದಲ್ಲಿ ಅಧಿಕಾರ ನಡೆಸುವಾಗ ಮಾಡಿದ್ರೆ ಅದಕ್ಕೊಂದು ಅರ್ಥ ಇತ್ತು. ರಾಜ್ಯದಲ್ಲಿ 9 ಬಾರಿನೋ 11 ಬಾರಿನೋ ಆಯ್ಕೆ ಆಗಿರುವ ಖರ್ಗೆ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ?. ಅಂತಾ ಕಾಂಗ್ರೆಸ್ ಹೈಕಮಾಂಡ್ಗೆ ಕಾರಜೋಳ ಪ್ರಶ್ನಿಸಿದರು.