ಕಲಬುರಗಿ: ಬಿಜೆಪಿಯವರಿಗೆ ಅಭಿವೃದ್ಧಿ ಮುಖ್ಯವಲ್ಲ, ಬೇರೆ ಪಕ್ಷ ದುರ್ಬಲಗೊಳಿಸುವುದು, ಮುಗಿಸುವುದೇ ಮುಖ್ಯವಾಗಿದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

BIGG NEWS: ಬಿಜೆಪಿಯವರು ಮೊದಲು PFI ಸಂಘಟನೆ ನಿಷೇಧಿಸಲಿ; ದಿನೇಶ್ ಗುಂಡೂರಾವ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಕಾಂಗ್ರೆಸ್ ಮುಗಿಸಬೇಕು ಅಂತಾ 8 ಜನರನ್ನ ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಮುಗಿಸಬೇಕು ಅನ್ನೋ ದೃಷ್ಟಿಯಿಂದ ಹೀಗೆ ಮಾಡ್ತಿದ್ದಾರೆ. ಕೇಂದ್ರದ ನಡೆಯಿಂದ ಜನ ಬೇಸತ್ತಿದ್ದಾರೆ. ಡಾಲರ್ ಎದರು ರೂಪಾಯಿ ದಿನದಿನಕ್ಕೆ ಮೌಲ್ಯ ಕಳೆದಿಕೊಳ್ಳುತ್ತಿದೆ. ಜಿಡಿಪಿ ಕೂಡಾ ಇಳಿಯುವ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ ದೇಶದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲು ಬೇರೆ ಪಕ್ಷ ದುರ್ಬಲಗೊಳಿಸಲು ಮುಂದಾಗಿದೆ.

Share.
Exit mobile version