ಮಂಡ್ಯ: ಜುಲೈ.1ರಂದು ವಿದ್ಯುತ್ ಶಾಕ್ ನಿಂದ ( Electric Shock ), ಶೇ.80ರಷ್ಟು ಸುಟ್ಟಗಾಯವಾಗಿ ತೀವ್ರ ಗಾಯಗೊಂಡಿದ್ದಂತ ರಾಜ್ಯಮಟ್ಟದ ಪುಟ್ಬಾಲ್ ಆಟಗಾರ ಎಂ.ಎನ್ ವಿಶ್ವಾಸ್ (21) ಚಿಕಿತ್ಸೆ ಫಲಿಸದೇ, ಇಂದು ಸಾವನ್ನಪ್ಪಿದ್ದಾರೆ.

ಮಂಡ್ಯದಲ್ಲಿನ ವಿಶ್ವಾಸ ನಗರದ ಗುತ್ತಲ ಬಡಾವಣೆಯಲ್ಲಿ ಹೊಸದಾಗಿ ಕಟ್ಟುತ್ತಿದ್ದಂತ ಮನೆಯ ಗೋಡೆಗೆ ನೀರು ಹಾಕುತ್ತಿದ್ದಂತ ಸಂದರ್ಭದಲ್ಲಿ ಜುಲೈ.1ರಂದು ರಾಜ್ಯಮಟ್ಟದ ಪುಟ್ಬಾಲ್ ಆಟಗಾರ ಎಂ ಎನ್ ವಿಶ್ವಾಸ್ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅವರನ್ನು ಕೂಡಲೇ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು.

Karnataka Rains Updates: ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಕಳೆದ ಒಂದು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಿಶ್ವಾಸ್ ಚಿಕಿತ್ಸೆಗೆ ತಂದೆ ನರಸಿಂಹಮೂರ್ತಿ ಹಾಗೂ ಶಾಮಲಾ ಹಣಹೊಂದಿಸಲು ಕಷ್ಟಪಡುತ್ತಿದ್ದನ್ನು ಗಮನಿಸಿ, ವಿಶ್ವಾಸ್ ಸ್ನೇಹಿತರು, ಕ್ರೀಡಾ ಪ್ರೇಮಿಗಳು, ಸಾರ್ವಜನಿಕರು ಚಿಕಿತ್ಸೆಗಾಗಿ ಹಣ ನೀಡಿದ್ದರು.

ಶೇ.80ರಷ್ಟು ಗಾಯಗೊಂಡಿದ್ದಂತ ಎಂ.ಎನ್ ವಿಶ್ವಾಸ್ ಕೋಮಾ ಸ್ಥಿತಿಗೆ ತಲುಪಿ, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೇ ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯಮಟ್ಟದ ಪುಟ್ಬಾಲ್ ಆಟಗಾರ ಇನ್ನಿಲ್ಲವಾಗಿದ್ದಾರೆ.

‘ವಿದ್ಯುತ್ ಕಳ್ಳತನ’ ಮಾಡುತ್ತಿದ್ದವರಿಗೆ ಶಾಕ್ ಕೊಟ್ಟ ‘ಬೆಸ್ಕಾಂ’: ಎಷ್ಟು ‘ದಂಡ ವಸೂಲಿ’ ಗೊತ್ತಾ.? | BESCOM

Share.
Exit mobile version