ಕೆಎನ್ಎನ್ ಡಿಜಿಟಲ್ ಡೆಸ್ಕ್ : ತುಂಬಾ ಕಹಿಯಾಗಿ ಇರುವಂತಹ ಮೆಂತ್ಯೆ ಕಾಳನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ನಾಲಗೆಗೆ ರುಚಿಸದೆ ಇರುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಯಾವಾಗಲೂ ನಾವು ರುಚಿಕರವಾದ ಆಹಾರವನ್ನೇ ಸೇವಿಸುತ್ತೇವೆ. ಆದರೆ ಇದು ನಮ್ಮ ಹೊಟ್ಟೆಗೂ ಒಳ್ಳೆಯದಲ್ಲ. ಹೊಟ್ಟೆಗೆ ಒಳ್ಳೆಯದಲ್ಲದಿರುವುದು ನಮ್ಮ ಆರೋಗ್ಯಕ್ಕೂ ಕೆಟ್ಟದು. ನಾವು ಹಲವಾರು ರೀತಿಯ ಸಾಂಬಾರ ಪದಾರ್ಥಗಳನ್ನು ಬಳಸಿಕೊಳ್ಳುತ್ತೇವೆ. ಇದರಲ್ಲಿ ಮೆಂತ್ಯೆ ಕಾಳು ಕೂಡ ಒಂದಾಗಿದೆ. ಪ್ರತಿಯೊಂದು ಸಾಂಬಾರ ಪದಾರ್ಥದಲ್ಲಿ ಏನಾದರೊಂದು ಒಳ್ಳೆಯ ಆರೋಗ್ಯ ಗುಣಗಳು ಇರುವುದು. ಹೀಗಾಗಿ ನಾವು ಇದನ್ನು ಪ್ರತಿನಿತ್ಯವೂ ಬಳಸಿಕೊಂಡರೆ ಆಗ ಹೆಚ್ಚಿನ ಲಾಭ ಸಿಗುವುದು.ಮೆಂತ್ಯೆ ಕಾಳಿನಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ಪ್ರತಿರೋಧಕ ಶಕ್ತಿ ವೃದ್ಧಿಸುವ ಜತೆಗೆ ತೂಕ ಇಳಿಸಲು ಸಹಕಾರಿ ಆಗಿದೆ. ನೀವು ಖಾಲಿ ಹೊಟ್ಟೆಯಲ್ಲಿ ದಿನನಿತ್ಯವೂ ಮೆಂತ್ಯೆ ಕಾಳಿನ ನೀರು ಕುಡಿದರೆ ಆಗ ಹಲವಾರು ಸಮಸ್ಯೆ ನಿವಾರಣೆ ಮಾಡಬಹುದು. ಒಂದು ಚಮಚ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಬಿಸಿ ನೀರನ್ನು ನೀವು ಇದಕ್ಕೆ ಬಳಸಬಹುದು. ಮೆಂತ್ಯೆ ಕಾಳಿನ ನೀರಿನಿಂದ ಸಿಗುವ ಲಾಭಗಳ ಬಗ್ಗೆ ನಾವು ಇಲ್ಲಿ ತಿಳಿಯಬಹುದು….
HEALTH TIPS : ಎಚ್ಚರವಿರಲಿ, ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್..! ಸ್ವಲ್ಪ ಯಾಮಾರಿದ್ರೆ ಜೀವಕ್ಕೆ ಹಾನಿ..!
ತಯಾರಿಸುವ ವಿಧಾನ
ಮೆಂತ್ಯೆ ಕಾಳಿನ ನೀರು ತಯಾರಿಸಿಕೊಳ್ಳಲು ಒಂದು ಚಮಚ ಮೆಂತ್ಯೆ ಕಾಳು ತೆಗೆದುಕೊಳ್ಳಿ ಮತ್ತು ಅದನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ನೀವು ಎದ್ದ ಬಳಿಕ ಆ ನೀರನ್ನು ಕುಡಿಯಿರಿ. ಇದು ಹಲವಾರು ರೀತಿಯ ಲಾಭಗಳನ್ನು ನೀಡುವುದು.
ಮುಖದ ಸೌಂದರ್ಯ ಹೆಚ್ಚಿಸಲು ಬಳಸಿ ‘ಮೆಂತ್ಯ ಕಾಳು’
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವುದು
ಮೆಂತ್ಯೆ ಕಾಳಿನಲ್ಲಿ ಗ್ಯಾಲಕ್ಟೋಮನ್ನನ್ ಎನ್ನುವ ನಾರಿನಾಂಶವಿದೆ. ಇದು ರಕ್ತದಲ್ಲಿನ ಸಕ್ಕರೆ ಹೀರುವಿಕೆಯನ್ನು ತಗ್ಗಿಸುವುದು. ಇದರಿಂದ ಮಧುಮೇಹ ತಡೆಯಲಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು. ಮೆಂತ್ಯೆ ಕಾಳಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆಗ ಚಯಾಪಚಯ ಕ್ರಿಯೆ ಉತ್ತಮವಾಗುವುದು. ಇದನ್ನು ಸೇವಿಸಿದರೆ ಶಾಖ ಉತ್ಪತ್ತಿಯಾಗಿ ತೂಕ ಕಳೆದುಕೊಳ್ಳಲು ಸಹಕಾರಿ ಆಗಿರಲಿದೆ. ಮೆಂತ್ಯೆ ಕಾಳಿನ ನೀರು ಸೇವಿಸಿದರೆ ಅದರಿಂದ ಬಯಕೆ ಕಡಿಮೆ ಮಾಡಬಹುದು. ಇದರಿಂದ ತೂಕ ಇಳಿಸಲು ಸಹಕಾರಿ ಆಗಲಿದೆ.
ಜೀರ್ಣಕ್ರಿಯೆ ಉತ್ತಮವಾಗುವುದು
ಮೆಂತ್ಯೆಕಾಳಿನ ನೀರು ಆಮ್ಲೀಯ ವಿರೋಧವಾಗಿದೆ. ಇದನ್ನು ನಿತ್ಯವು ಸೆವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಬಲಗೊಳ್ಳುವುದು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆ ನಿವಾರಣೆ ಮಾಡಬಹುದು. ಮೆಂತ್ಯೆಕಾಳಿನಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಹೊಟ್ಟೆಗೆ ಆರಾಮ ನೀಡುವುದು.
ದೇಹದ ಉಷ್ಣತೆ ತಗ್ಗಿಸುವುದು
ಮೆಂತ್ಯೆಕಾಳು ದೇಹದಲ್ಲಿನ ಉಷ್ಣತೆ ತಗ್ಗಿಸುವುದು. ಇದರಿಂದ ಒಂದು ಚಮಚ ಮೆಂತ್ಯೆಕಾಳನ್ನು ನೀರಿನಲ್ಲಿ ರಾತ್ರಿ ವೇಳೆ ನೆನೆಸಲು ಹಾಕಿ, ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಮೆಂತ್ಯೆಯ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿಕೊಳ್ಳಬಹುದು.
Whatsapp update : ಡೆಸ್ಕ್ಟಾಪ್ ಮತ್ತು ವೆಬ್ ಆವೃತ್ತಿಗೆ ಎರಡು ಹಂತದ ಪರಿಶೀಲನೆ ತರಲು ವಾಟ್ಸಪ್ ಚಿಂತನೆ
ಮೆಂತೆ ಕಾಳು- ಮೂರ್ತಿ ಸಣ್ಣದಾದರೂ, ಕಾರುಬಾರು ದೊಡ್ಡದು!
ಮಧುಮೇಹಿಗಳಿಗೆ ತುಂಬಾ ಒಳ್ಳೆಯದು
ಮೆಂತ್ಯೆ ಕಾಳು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ತುಂಬಾ ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುವುದು ಮಾತ್ರವಲ್ಲದೆ, ಇನ್ಸುಲಿನ್ ಉತ್ತೇಜಿಸುವುದು. ಮಧುಮೇಹ ಮತ್ತು ಮಧುಮೇಹ ಬರುವ ಸಾಧ್ಯತೆ ಇರುವಂತಹ ಜನರು ಮೆಂತ್ಯೆಕಾಳಿನ ಬಿಸಿ ನೀರು ಕುಡಿಯುವುದು ತುಂಬಾ ಒಳ್ಳೆಯದು. ಮೆಂತ್ಯೆ ಕಾಳನ್ನು ಹುಡಿ ಮಾಡಿಟ್ಟುಕೊಂಡು ಅದನ್ನು ಇಡ್ಲಿ ಮತ್ತು ದೋಸೆ ಜತೆಗೆ
ಸೇವಿಸಬಹುದು.
ಜೀರ್ಣಕ್ರಿಯೆ ವೃದ್ಧಿಸುವುದು
ಮೆಂತ್ಯೆಕಾಳು ಗೋಂದು ಹೊಂದಿರುವುದು ಮತ್ತು ಇದನ್ನು ನೀರಿನಲ್ಲಿ ನೆನೆಯಲು ಹಾಕಿದರೆ ಅದು ಗೋಂದು ಆಗುವುದು. ಇದು ಹೊಟ್ಟೆ ಮತ್ತು ಕರುಳಿನಲ್ಲಿ ಪದರ ನಿರ್ಮಾಣ ಮಾಡುವುದು ಮತ್ತು ಶಮನ ನೀಡುವುದು. ಆಮ್ಲೀಯ ಹಿಮ್ಮುಖ ಹರಿವು ಹೊಂದಿರುವಂತಹ ಜನರು ಇದನ್ನು ಸೇವಿಸಿದರೆ ಅದು ತುಂಬಾ ಒಳ್ಳೆಯದು.