ಬೆಂಗಳೂರು: ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದ್ದರೂ , ಬೇರೆಯವರಲ್ಲಿ ನೋಣ ಹುಡುಕುತ್ತಿದ್ದಾರೆ. ಹೀಗೆ ತಪ್ಪು ಸುದ್ದಿ ಹೇಳಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಚಾಳಿ. ಕಾಂಗ್ರೆಸ್ ಸರ್ಕಾರ 100% ಅಕ್ರಮದ ಸರ್ಕಾರ. ಕೆಲಸವೇ ಮಾಡದೇ ಬಿಲ್ ಮಾಡಿಕೊಂಡಿರೋದು ಕಾಂಗ್ರೆಸ್ ಅವರು. ಕಾಂಗ್ರೆಸ್ ಸರ್ಕಾರ 100% ಅಕ್ರಮ ಸರ್ಕಾರ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಕಿಡಿಕಾರಿದರು.

HEALTH TIPS: ಸನ್‌ ಟ್ಯಾನ್‌ ನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ಇದನ್ನ ಫಾಲೋ ಮಾಡಿ…!

 

ಸಿದ್ದರಾಮಯ್ಯ ಮತ್ತು ಡಿಕೆಶಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಸದಸ್ಯರು, ಸಿದ್ದರಾಮಯ್ಯ ಕಾಲದ ಹಗರಣಗಳ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅಕ್ರಮಗಳ ಸರದಾರರು ಅಂತ ಕಿಡಿಕಾರಿದರು. ಕಾಂಗ್ರೆಸ್ ತಲೆ ಮಾರಿನಿಂದ ಭ್ರಷ್ಟಾಚಾರ ಮಾಡ್ತಿದೆ ಅಂತ ಘೋಷಣೆ ಕೂಗಿದರು. ರಿಡೂ, ಕೆಪಿಎಸ್‍ಸಿ ಹಗರಣ, ಇಂಧನ ಹಗರಣದ ಪಿತಾಮಹ ಅಂತ ಲೇವಡಿ ಮಾಡಿದರು.

HEALTH TIPS: ಸನ್‌ ಟ್ಯಾನ್‌ ನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ಇದನ್ನ ಫಾಲೋ ಮಾಡಿ…!

 

ಮಾತನಾಡಿ ಲಕ್ಷ್ಮಣ ಸವದಿ, ಪೇ ಸಿಎಂ ಅಂತ ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಬೊಮ್ಮಾಯಿ 13 ತಿಂಗಳಿಂದ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅವರು ಸಿಎಂ, ಬಿಜೆಪಿ ಹೆಸರು ಕೆಡಿಸೋಕೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share.
Exit mobile version