ಕಾರವಾರದಲ್ಲಿ ಮನೆಗೆ ಆಕಸ್ಮಿಕ ಬಂಕಿ ತಗುಲಿ ವೃದ್ಧೆ ಸಜೀವ ದಹನ

ಉತ್ತರ ಕನ್ನಡ: ಜಿಲ್ಲೆಯಲ್ಲಿ ಮನೆಗೆ ಆಕಸ್ಮಿಕವಾಗಿ ಬಂಕಿ ಬಿದ್ದ ಪರಿಣಾಮ, ಮನೆಯೊಳಗೆ ಇದ್ದಂತ ವೃದ್ದೆಯೊಬ್ಬರು ಸಜೀವವಾಗಿ ದಹನವಾಗಿರುವಂತ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಹನಮಾಪುರದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಪಕೀರವ್ವ ರಾಮಣ್ಣ ಆಲೂರು(70) ಸಜೀವವಾಗಿ ದಹನವಾಗಿದ್ದಾರೆ. ಪಕೀರವ್ವ ಏಕಾಂಗಿಯಾಗಿ ಮನೆಯಲ್ಲಿ ವಾಸವಾಗಿದ್ದರು. ಬೆಂಕಿ ಮನೆಗೆ ತಗುಲಿದ್ದರಿಂದ ವೃದ್ಧೆ ಪಕೀರವ್ವ ಹೊರಗೆ ಬರಲಾಗದೇ ಮನೆಯಲ್ಲೇ ಸಜೀವವಾಗಿ ದಹನವಾಗಿದ್ದಾರೆ. ಈ ಸಂಬಂಧ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಂತ ಅನುಸರಿಸಿ, ಮನೆಯಲ್ಲೇ ‘ಬಕೆಟ್’ನಲ್ಲಿ ‘ಅಣಬೆ’ … Continue reading ಕಾರವಾರದಲ್ಲಿ ಮನೆಗೆ ಆಕಸ್ಮಿಕ ಬಂಕಿ ತಗುಲಿ ವೃದ್ಧೆ ಸಜೀವ ದಹನ