ನವದೆಹಲಿ: ಜಾಗತಿಕ ಬೆಲೆ ಇಳಿಕೆಯ ಲಾಭವನ್ನು ಸಾಮಾನ್ಯ ಜನರಿಗೂ ವರ್ಗಾಯಿಸಲು ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ಸಭೆ ನಡೆಸಿದೆ. ಈ ವೇಳೆ ಅಡುಗೆ ಎಣ್ಣೆಯ ಬೆಲೆಯನ್ನು 10-12 ರೂ. ವರೆಗೆ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

BIGG NEWS: ಆಗುಂಬೆ ಘಾಟಿಯಲ್ಲಿ ತಪ್ಪಿದ ಭಾರಿ ದುರಂತ; ಚಲಿಸುತ್ತಿದ್ದ ಟಾಟಾ ಏಸ್‌ ವಾಹನದ ಮೇಲೆ ಬಿದ್ದ ಮರ

 

ಖಾದ್ಯ ತೈಲಗಳ ಬೆಲೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಬಹುದು. ಜಾಗತಿಕ ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಖಾದ್ಯ ತೈಲ ಸಂಸ್ಕರಣಾಕಾರರು ಮತ್ತು ತಯಾರಕರು ಬೆಲೆಗಳನ್ನು ₹ 10-12 ರಷ್ಟು ಕಡಿತಗೊಳಿಸಲು ಒಪ್ಪಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಏಕೆಂದರೆ ಅಡುಗೆ ಎಣ್ಣೆ ತಯಾರಕ ಕಂಪನಿಗಳು ಜಾಗತಿಕ ಬೆಲೆಗಳೊಂದಿಗೆ ಸರಿದೂಗಿಸಿ, ಸಾಮಾನ್ಯ ಜನರು ಬಳಸುವ ಅಡುಗೆ ಎಣ್ಣೆಯ ದರವನ್ನು ಕಡಿತಗೊಳಿಸಲು ಒಪ್ಪಿಕೊಂಡಿವೆ.

BIGG NEWS: ಆಗುಂಬೆ ಘಾಟಿಯಲ್ಲಿ ತಪ್ಪಿದ ಭಾರಿ ದುರಂತ; ಚಲಿಸುತ್ತಿದ್ದ ಟಾಟಾ ಏಸ್‌ ವಾಹನದ ಮೇಲೆ ಬಿದ್ದ ಮರ

 

ಅಡುಗೆ ಎಣ್ಣೆ ತಯಾರಕರು ಜಾಗತಿಕ ಬೆಲೆಗಳನ್ನು ತಗ್ಗಿಸುವ ದೃಷ್ಟಿಯಿಂದ ಖಾದ್ಯ ತೈಲ ಬೆಲೆಯನ್ನು ₹ 10-12 ರಷ್ಟು ಕಡಿತಗೊಳಿಸಲು ಒಪ್ಪಿದ್ದಾರೆ. ನಾವು ಅವರೊಂದಿಗೆ ಉತ್ತಮ ಸಭೆ ನಡೆಸಿದ್ದೇವೆ, ಅಲ್ಲಿ ನಾವು ದತ್ತಾಂಶಗಳೊಂದಿಗೆ ವಿವರವಾದ ಪ್ರಸ್ತುತಿಯನ್ನು ನೀಡಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share.
Exit mobile version