ಭುವನೇಶ್ವರ್: ಸ್ನೇಹಿತರೆಲ್ಲರೂ ಸೇರಿ ಒಟ್ಟಾಗಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಇದೇ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಮಾಡಿದ್ದು ಮಾತ್ರ.. ಭಯ ಹುಟ್ಟಿಸುವಂತದ್ದು. ಅಲ್ಲದೇ ಈ ಕಾರಣದಿಂದಾಗಿಯೇ ಎರಡು ದಿನ ಮಲವಿಸರ್ಜನೆ ಮಾಡಲಾಗದೇ ಕಷ್ಟ ಅನುಭವಿಸುವಂತಾಗಿತ್ತು. ಹಾಗಾದ್ರೇ ಅಷ್ಟಕ್ಕು ಸ್ನೇಹಿತರಿಂದಲೇ, ಸ್ನೇಹಿತನಿಗೆ ಏನ್ ಮಾಡಿದ್ರು ಅಂತ ಮುಂದೆ ಓದಿ..

ಭುವನೇಶ್ವರದ ಒಡಿಶಾದ ಬೆಹ್ರಾಂಪುರದಲ್ಲಿ ಕೃಷ್ಣ ರೌತ್, ತನ್ನ ಸ್ನೇಹಿತರ ಜೊತೆಗೆ ಸೇರಿಕೊಂಡು ಕೆಲ ದಿನಗಳ ಹಿಂದೆ ಸೂರತ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಸ್ನೇಹಿತರು ಕೃಷ್ಣ ರೌತ್ ಗುದದ್ವಾರದೊಳಗೆ ಸ್ಟೀಲ್ ಗ್ಲಾಸ್ ತುರುಕಿದ್ದಾರೆ.

ಇದ್ಯಾವುದು ತಿಳಿಯದಂತೆ ಕುಡಿದಿದ್ದಂತ ಕೃಷ್ಣರೌತ್ ಗೆ, ಮರುದಿನ ಕರುಳಿನಲ್ಲಿ ನೋವು ಕಾಣಿಸಿಕೊಂಡಿದೆ. ಆಗ ಕುಟುಂಬಸ್ಥರಿಗೆ ಹೇಳಲಾಗದೇ, ಸೂರತ್ ನಿಂದ ತನ್ನ ಸ್ವಂತ ಗ್ರಾಮ ಗಂಜಾಂಗೆ ತೆರಳಿದ್ದಾನೆ. ಊರಿಗೆ ಹೋಗುವಷ್ಟರಲ್ಲಿ ನೋವು ಹೆಚ್ಚಾಗಿ ಮಲವಿಸರ್ಜನೆ ಮಾಡೋದಕ್ಕೂ ಸಾಧ್ಯವಾಗದೇ ವಿಧಿಯಿಲ್ಲದೇ ಕುಟುಂಬಸ್ಥರಿಗೆ ಆಗುತ್ತಿರುವಂತ ತೊಂದ್ರೇ ಹೇಳಿದ್ದಾನೆ.

ಆಗ ಕೂಡಲೇ ಆತನನ್ನು ಬೆಹಾರಾಂಪುರದಲ್ಲಿನ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದ್ದಾರೆ. ಎಕ್ ರೇ ತೆಗೆದಂತ ವೈದ್ಯರೇ ಅಚ್ಚರಿ ಪಟ್ಟಿದ್ದಾರೆ. ಯಾಕೆಂದ್ರೇ ಆತನ ಗುದದ್ವಾರದ ಕರುಳಿನಲ್ಲಿ ಸ್ಟೀಲ್ ಲೋಟ ಇರೋದು ಪತ್ತೆಯಾಗಿದೆ.

ಗುದದ್ವಾರದ ಮೂಲಕ ಲೋಟವನ್ನು ತೆಗೆಯೋದಕ್ಕೆ ಸಾಧ್ಯವಾಗದೇ, ಕರುಳಿನ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು 10 ದಿನಗಳ ಬಳಿಕ ಹೊರ ತೆಗಿದ್ದಾರೆ. ಇದೀಗ ಕೃಷ್ಣ ರೌತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಿಂದ ಇರೋದಾಗಿ ತಿಳಿದು ಬಂದಿದೆ.

 

 

 

Share.
Exit mobile version