ಬೆಂಗಳೂರು: ವೈಫಲ್ಯ ಮರೆಮಾಚಲು ಹಿಜಾಬ್, ಹಲಾಲ್, ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ #TroubleEngineSarkara ಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ ನರೇಂದ್ರ ಮೋದಿ ( Narendra Modi ) ಅವರೇ, ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರು ಆಕ್ಷನ್‌ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡ್ತಿದಾರೆ. ಅವರಿಗೆ ಬುದ್ದಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿಯನ್ನು ಪ್ರಶ್ನಿಸಿದೆ.

ಪ್ರಧಾನಿಗೆ ಪತ್ರ ಬರೆದರೆ ಪರಿಹಾರ ಸಿಗಬಹುದೆಂಬ ಭ್ರಷ್ಟಾಚಾರದಿಂದ ಬೇಸತ್ತ ಜನರ ನಿರೀಕ್ಷೆ ಹುಸಿಯಾಗಿದೆ, ಅಧಿಕಾರಿಗಳ ಲಂಚವತಾರಕ್ಕೆ ಬೇಸತ್ತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಟುಂಬ ಈಗ ರಾಷ್ಟ್ರಪತಿಯವರಲ್ಲಿ ದಯಾಮರಣಕ್ಕೆ ಕೋರಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇದೇನಾ ನಿಮ್ಮ #TroubleEngineSarkara ದ ಹೆಗ್ಗಳಿಕೆ? ಎಂದು ಕೇಳಿದೆ.

ಕಟುಕನೊಬ್ಬ ಕರುಣೆಯ ಪ್ರವಚನ ಕೊಟ್ಟಂತಿದೆ ನರೇಂದ್ರ ಮೋದಿ ಅವರು ಕನಕದಾಸರ ಕೀರ್ತನೆ ಹೇಳಿದ್ದು! ಕುಲದ ಹೆಸರಲ್ಲಿ ಯುವಕರನ್ನು ಹೊಡೆದಾಟಕ್ಕಿಳಿಸಿ ಬೀದಿ ಹೆಣವಾಗಿಸುವ ಬಿಜೆಪಿ ನಾಯಕರಿಗೆ ಈ ಮಾತು ಅನ್ವಯಿಸುತ್ತದೆ. ಪ್ರವೀಣ್ ನೆಟ್ಟಾರು, ಹರ್ಷ ಮುಂತಾದವರನ್ನು ಕುಲದ ಕಲಹದಲ್ಲಿ ಬಲಿ ಪಡೆದಿದ್ದು #TroubleEngineSarkara ಅಲ್ಲವೇ ಎಂದಿದೆ.

Share.
Exit mobile version