ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ( Congress ) ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಷಯವನ್ನರಿತ ಬಿಜೆಪಿ ಕನಲಿಹೋಗಿದೆ. ಸಿದ್ದರಾಮಯ್ಯನವರು ರಾಜ್ಯದ ಯಾವುದೇ ಕ್ಷೇತ್ರದಿಂದ ಬೇಕಿದ್ದರೂ ಗೆದ್ದು ಬರುವ ಶಕ್ತಿ ಹೊಂದಿದ್ದಾರೆ. ತಮ್ಮಲ್ಲಿ ಅಂತಹ ಒಬ್ಬ ನಾಯಕರಿರುವರೇ ಬಿಜೆಪಿ ( BJP Leaders ) ? ಹಾಗೆಯೇ ಮೂಲೆಗುಂಪಾದ BSY ಅವರ ಬಗ್ಗೆ ಸ್ವಲ್ಪವಾದರೂ ಅನುಕಂಪ ಉಳಿಸಿಕೊಳ್ಳಿ ಎಂಬುದಾಗಿ ಕಾಂಗ್ರೆಸ್ ಹೇಳಿದೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ( Karnataka Congress ) ◆ಉದಯಪುರದ ಹಂತಕರು ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು ◆ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ ಇರ್ಷಾದ್ ಚೈನ್‌ವಾಲಾ ಜೊತೆಗೆ ನಿಕಟ ಸಂಪರ್ಕದಲ್ಲಿದ್ದರು ◆ಬಿಜೆಪಿ ಕಾರ್ಯಕ್ರಮಗಳಿಗೆ ಕಾಯಂ ಆಗಿ ಹಾಜರಿರುತ್ತಿದ್ದರು ಈ ವಿಷಯಗಳು ಬಿಜೆಪಿಯ ಷಡ್ಯಂತ್ರದ #Toolkit ಕೊಲೆ ಎಂಬ ಸಂಶಯಕ್ಕೆ ಪುರಾವೆ ಒದಗಿಸುತ್ತಿವೆ ಎಂದಿದೆ.

ಕೊಳಕುಬಾಯಿ ಈಶ್ವರಪ್ಪನವರು ಕರ್ನಾಟಕದ ನೂಪುರ್ ಶರ್ಮಾ. 40% ಕಮಿಷನ್, ಸಂತೋಷ್ ಆತ್ಮಹತ್ಯೆ, ತಿರಂಗಾ ಬದಲಾವಣೆ, ಹಿಂಸೆಗೆ ಪ್ರಚೋದನೆ ಸೇರಿದಂತೆ ಈಶ್ವರಪ್ಪನವರನ್ನು ಬಂಧಿಸಲು ಹಲವು ಪ್ರಕರಣಗಳಿವೆ. ಹೀಗಿದ್ದೂ ಬಂಧಿಸದಿರುವುದೇಕೆ? ಹೆಣ ಬಿದ್ದಷ್ಟೂ ಓಟು ಬೀಳುತ್ತವೆ ಎಂಬ ನೀಚ ಚಿಂತನೆಯ ಬಿಜೆಪಿಯಿಂದ ದೇಶದ ಸ್ವಾಸ್ತ್ಯಕ್ಕೆ ಉಳಿಗಾಲವಿಲ್ಲ ಎಂದು ವಾಗ್ದಾಳಿ ನಡೆಸಿದೆ.

Share.
Exit mobile version