ಬೆಂಗಳೂರು : ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.ಬೆಂಗಳೂರಿನ ಫ್ರೆಜರ್‌ ಟೌನ್‌ ನ ಪಿಎಫ್‌ ಐ ಕೇಚರಿ ಮೇಲೂ ಎನ್‌ ಐಎ ದಾಳಿ ನಡೆಸಿದೆ. ಇದೀಗ ಮೂವರು ಪಿಎಫ್‌ ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

BIGG NEWS: ಶಿವಮೊಗ್ಗದಲ್ಲೂ NIA ದಾಳಿ; PFI ರಾಜ್ಯ ವಲಯ ಅಧ್ಯಕ್ಷ ಶಾಹೀದ್ ಖಾನ್ ವಶಕ್ಕೆ

ಪಿ ಎಫ್‌ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ.ಕೆ ಆಶ್ರಫ್‌ , ಮೊಹುದ್ದೀನ್‌ ಹಳೆಯಂಗಡಿ ಹಾಗೂ ನವಾಜ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಪಿಎಫ್‌ ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಬೆಂಗಳೂರಿನ ಫ್ರೆಜರ್‌ ಟೌನ್‌ ಪಿಎಫ್‌ ಐ ಸಂಫಟನೆ ಕಚೇರಿ ಮೇಲೆ ಎನ್‌ ಐಎ ದಾಳಿ ನಡೆಸಿದೆ. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share.
Exit mobile version