ವಿಜಯಪುರ: ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರು ತಮ್ಮ ಬೆಂಬಲಿಗರ ಜೊತೆಗೆ ಹಲ್ಲೆ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್​​ಗೆ ಸೂಪರ್ ಮಾರ್ಕೆಟ್​ಗೆ ಬಂದಿದ್ದ ರಾಜೇಶ್ವರಿ ಗಾಯಕ್ವಾಡ್ ಆಗಮಿಸಿದ್ದಾಗ ರಾಜೇಶ್ವರಿಯವರು ಕಾಸ್ಮೆಟಿಕ್ ವಸ್ತುಗಳ ಕ್ಯಾಪ್‌ ಓಪನ್‌ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಸ್ಥಳದಲ್ಲಿದ್ದ ಸಿಬ್ಬಂದಿಗಳು ಪ್ರಶ್ನೆ ಮಾಡಿದ ವೇಳೆಯಲ್ಲಿ ರಾಜೇಶ್ವರಿ ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೇ ಕೈ ಕೈ ಮಿಲಾಯಿಸಿದ ಗಲಾಟೆ ನಡೆದಿದೆ ಎನ್ನಲಾಗಿದೆ.

ಇದೇ ವೇಳೇ ರಾಜೇಶ್ವರಿ ಗಾಯಕ್ವಾಡ್‌ ಜನರನ್ನು ಕರೆಸಿ ನನ್ನ ಹಲ್ಲೆ ಮಾಡಿದ್ದಾರೆ ಅಂತ ಅಂಗಡಿ ಮಾಲೀಕರು ಪೋಲಿಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜಿಲ್ಲಾ ಎಸ್‌ಪಿ ಇದೊಂದು ಗಂಭಿರವಲ್ಲದ ಘಟನೆಯಾಗಿದ್ದು, ಅವರು ಕ್ರಿಕೆಟ್‌ ತಾರೆಯಾಗಿರುವ ಕಾರಣಕ್ಕೆ ಇದು ದೊಡ್ಡಮಟ್ಟಿನ ಸುದ್ದಿಯಾಗಿದೆ ಅಂತ ರಾಜೇಶ್ವರಿ ಪರವಾಗಿ ಹೇಳಿಕೆ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Share.
Exit mobile version