ಬೆಂಗಳೂರು: ಬಿಜೆಪಿಗೆ ರೌಡಿಗಳ ಸೇರ್ಪಡೆ ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಇಂದು ಬಿಜೆಪಿ ಸೇರಲು ಮುಂದಾಗಿರುವಂತ ರೌಡಿ ಶೀಟರ್ ಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಕುರಿತಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಸೇರಲು ಮುಂದಾಗಿರುವ ರೌಡಿ ಶೀಟರ್ ಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕಳೆದ ವಾರ ಹೇಳಿದ್ದೆವು. ಅದರಂತೆ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ದತ್ತಜಯಂತಿ ಗೆ ಅಡ್ಡಿಪಡಿಸುವ ಹುನ್ನಾರ : ರಸ್ತೆಯುದ್ದಕ್ಕೂ ‘ಮೊಳೆ’ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು |Datta Jayanthi

2018ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022 ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರ ಆಗಿದೆ. 2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಆ ಸಂಖ್ಯೆ 6620ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 188 ಠಾಣೆಗಳ 6620 ರೌಡಿಗಳಿದ್ದಾರೆ. ಇನ್ನು ಆಕ್ಟಿವ್ ರೌಡಿ ಸಂಖ್ಯೆ ಬೆಂಗಳೂರಿನಲ್ಲಿ 1 ಸಾವಿರ ರಾಜ್ಯದಲ್ಲಿ 8 ಸಾವಿರ ಇದೆ ಎಂದು ತಿಳಿಸಿದರು.

ಬಿಜೆಪಿ ಈಗ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಅದರ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ. 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿಯನರು ಪಟ್ಟಿ ಮಾಡಿದ್ದಾರೆ ಎಂದರು.

BIGG NEWS: ರಾಜ್ಯದಲ್ಲಿ ಸಿದ್ದರಾಮಯ್ಯಗೆ ಯಾವ ಕ್ಷೇತ್ರವೇ ಇಲ್ಲದಂತಾಗಿದೆ; ಕೆ.ಎಸ್.ಈಶ್ವರಪ್ಪ ವ್ಯಂಗ್ಯ

36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್ ಹಾಗೂ 9 ಇತರರು. ವಿಲ್ಸನ್ ಗಾರ್ಡನ್ ನಾಗ ಹಾಗೂ 6 ಇತರರು, ನಾಗಮಂಗಲದ ಫೈಟರ್ ರವಿ ಹಾಗೂ 5 ಇತರರು, ಬೆತ್ತನಗೆರೆ ಶಂಕರ ಹಾಗೂ 8 ಇತರರು, ಈತ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂದು ಪಕ್ಷ ಸೇರ್ಪಡೆ ಆಗಿದ್ದಾನೆ. ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾನೆ. ಒಂಟೆ ರೋಹಿತ್ ಹಾಗೂ ಇತರರು, ಕುಣಿಗಲ್ ಗಿರಿ ಈತ ಜೈಲಿನಲ್ಲಿದ್ದು, ಅಲ್ಲಿಂದಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ಉಪ್ಪಿ, ಸೈತಾನ್ ರವಿ (ಸಿ.ಟಿ ರವಿ), ಈತ ಹಾಲಿ ಶಾಸಕರು, ಇನ್ನು ಪ್ರತಾಪ್ ಸಿಂಹ, ಇವರನ್ನು ಸುಮಲತಾ ಅವರು ಪೇಟೆ ರೌಡಿ ಎಂದು ಕರೆದಿದ್ದಾರೆ. ಕೊನೆಯದಾಗಿ ಕಿರಣ್ ಗೌಡ, ಈತ ಯುವ ದಸರಾಗೆ ಅಧ್ಯಕ್ಷರಾಗಿದ್ದು, ಪ್ರತಾಪ್ ಸಿಂಹ ಅವರ ಹಿಂಬಾಲಕ. ಮುಂದಿನ ಹಂತದಲ್ಲಿ ಉಳಿದ 24 ರೌಡಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಬಿಜೆಪಿ ಸ್ನೇಹಿತರ ಬಳಿ ಈ ಬಗ್ಗೆ ಚರ್ಚೆ ಮಾಡಿದಾಗ, ನಮಗೆ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಕಡೆಯಿಂದ ನಿರ್ದೇಶನವಿದೆ. ಈ ವಿಚಾರವಾಗಿ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರಯೇಗ ಮಾಡಿದ್ದಾರೆ. ಎಲ್ಲಿ ಮತ ಸಿಗುವುದಿಲ್ಲವೋ ಅಲ್ಲಿ ರೌಡಿಗಳನ್ನು ಕಳಿಸಿ ಪ್ರಚಾರ ಮಾಡಿಸಿ ಯಶಸ್ವಿಯಾಹಗಿದ್ದಾವೆ. ಈಗ ಅದನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

BIGG NEWS : ಡಿ.11ರಂದು ‘ಪ್ರಧಾನಿ ಮೋದಿ’ಯಿಂದ ಮೂರು ‘ರಾಷ್ಟ್ರೀಯ ಆಯುಷ್ ಸಂಸ್ಥೆ’ ದೇಶಕ್ಕೆ ಸಮರ್ಪಣೆ |National Ayush institutes

ಈ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಹಾಗೂ ಅಶೋಕ್ ಅವರು ಹೇಳಿದ್ದು, ಇದು ಕೇವಲ ಗಮನ ತಣ್ಣಗೆ ಮಾಡುವ ಪ್ರಯತ್ನ. ಸಿ.ಟಿ ರವಿ ಹತಾಶರಾಗಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೌಡಿಗಳ ಪೈಕಿ 10 ಮಂದಿಗೆ ವಿಧಾನಸಭೆ ಚುನಾವಣೆ ಟಿಕೆಟ್, 26 ಜನರಿಗೆ ಬಿಬಿಎಂಪಿ ಚುನಾವಣೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ರೌಡಿಗಳಿಂದ ರೌಡಿಗಳಿಗಾಗಿ, ರೌಡಿಗಳಿಗೋಸ್ಕರ ಇದು ಬಿಜೆಪಿ ರೌಡಿ ಮೋರ್ಚಾದ ಘೋಷವಾಕ್ಯವಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಇವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಕಟೀಲ್ ಅವರು ಹೇಳಿರುವುದು ಸುಳ್ಳು. ರೌಡಿಶೀಟರ್ ಗಳೆಲ್ಲಾ ರೌಡಿಗಳಲ್ಲ ಎಂದು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ರೌಡಿ ಎಂದರೆ ಕೊಲೆಗಡುಕರು, ರೇಪಾ ಮಾಡಲು ಸಂಚು ರೂಪಿಸುವವರು, ಡಕಾಯತಿ, ಹಫ್ತಾ ವಸೂಲಿ, ಬೆದರಿಸುವವರಾಗಿದ್ದಾರೆ. ಬಿಜೆಪಿ ಸೇರುವ ರೌಡಿಗಳ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಹೊರತೆಗೆಯಲು ಗೃಹ ಸಚಿವರಿಂದ ಪೊಲೀಸ್ ಇಲಾಖೆಗೆ ಮೌಕಿಕ ಆದೇಶ ನೀಡಲಾಗಿದೆ ಎಂದರು.

ಸಿ.ಟಿ ರವಿ ಅವರು ನನ್ನ ಮೇಲೂ ರೌಡಿ ಶೀಟರ್ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಸಿ.ಟಿ ರವಿ ಅವರ ಮೇಲೆ 8 ಜೂನ್ 2012ರಲ್ಲಿ ಐಟಿ ರೈಡ್ ಆಗಿತ್ತು. ಆರ್ ಟಿಐ ಕಾರ್ಯಕರ್ತ ಎ.ಸಿ ಕುಮಾರ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿ, 2004ರಲ್ಲಿ ಚುನಾವಣಾ ಆಯೋಗಕ್ಕೆ ರವಿ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಒಟ್ಟು ಆಸ್ತಿ 10.1 ಲಕ್ಷ ಹಾಗೂ 1.2 ಲಕ್ಷ ವಾರ್ಷಿಕ ಆದಾಯ ಎಂದು ನಮೂದಿಸಲಾಗಿತ್ತು. ಆದರೆ 2012ರ ಅಫಿಡವಿಟ್ ನಲ್ಲಿ ಇವರ ಆದಾಯ 50 ಕೋಟಿ ಘೋಷಣೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಗ ಐಟಿ ದಾಳಿ ಆಗಿತ್ತು. ಈಗ ನಮ್ಮ ಪ್ರಕಾರ ಸಿ.ಟಿ ರವಿ ಅವರು ಬೇನಾಮಿ ಹೇಸರಲ್ಲಿ 3 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಹೇಳಿದರು.

ಇವರು ಮಾತೆತ್ತಿದರೆ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುತ್ತಾರೆಶಿವಕುಮಾರ್ ಅವರು ಉದ್ಯಮಿಗಳು, ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅವರು ತಮ್ಮ ಆದಾಯ ಎಲ್ಲವನ್ನು ಐಟಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುವ ಸೈತಾನ್ ರವಿ ಅವರೇ, ನಿಮ್ಮ ಆದಾಯದ ಮೂಲವೇನು? ಎಂದು ಪ್ರಶ್ನಿಸಿದರು.

ಇವರು ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಎಂದು ಕರೆಯತ್ತಿದ್ದೀರಿ. ಇದಕ್ಕೆ ಕಾಂಗ್ರೆಸ್ ಪಕ್ಷದವರು ಬೇಸರ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಎಲ್ಲ ವರ್ಗದ ಜನ ಇಷ್ಟಪಡುವ ವ್ಯಕ್ತಿ. ನೀವು ಯಾವುದೇ ಹಂತಕ್ಕೆ ಬೇಕಾದರೂ ಇಳಿದು ಮಾತನಾಡಿ. ನೀವು ರಾಜ್ಯದಲ್ಲಿ ಕೋಮು ಬೆಂಕಿ ಹಚ್ಚುವುದರಲ್ಲಿ ಮೊದಲಿಗರು. ಬೊಮ್ಮಾಯಿ ಅವರು ಕಳೆದ 16 ತಿಂಗಳಿಂದ 9 ಖಾತೆ ಖಾಲಿ ಇದ್ದು, ಇದನ್ನು ನಿಮ್ಮ ಬಳಿ ಇಟ್ಟುಕೊಂಡು ಲೂಟಿ ಮಾಡುತ್ತಿದ್ದೀರಿ ನಿಮಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.

ಇನ್ನು ಇಂದು ಪತ್ರಿಕೆಗಳಲ್ಲಿ ಸರ್ಕಾರ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಎಂದು ಜಾಹೀರಾತು ನೀಡಿದ್ದಾರೆ. ಇದರಲ್ಲಿ ಎಸ್ ಸಿಪಿ ಹಾಗೂ ಟಿಎಸ್ ಪಿ ಯೋಜನೆಗೆ 29 ಸಾವಿರ ಕೋಟಿ ನೀಡಿರುವುದಾಗಿ ಜಾಹೀರಾತಿನಲ್ಲಿ ಹೇಳಿದ್ದೀರಿ. 2018ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಆಗಿನ ರಾಜ್ಯದ ಬಜೆಟ್ ಮೊತ್ತ 2.07 ಲಕ್ಷ ಕೋಟಿ ಆಗಿತ್ತು. ಆಗ ಪರಿಶಿಷ್ಟರ ಕಲ್ಯಾಣಕ್ಕಾಗಿ ಈ ಕಾಯ್ದೆ ಪ್ರಕಾರ 33 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಈಗ 2022ರಲ್ಲಿ ನಿಮ್ಮ ಬಜೆಟ್ ಮೊತ್ತ 2.72 ಲಕ್ಷ ಕೋಟಿ, ನೀವು ಪರಿಶಿಷ್ಟರಿಗೆ ನೀಡಿರುವ ಅನುದಾನ 29 ಸಾವಿರ ಕೋಟಿ. ಆಮೂಲಕ ರಾಜ್ಯ ಸರ್ಕಾರ 12 ಸಾವಿರ ಕೋಟಿ ಅನುದಾನ ಕಡಿಮೆ ಮಾಡಿದ್ದೀರಿ. ನಿಮಗೆ ಯೋಗ್ಯತೆ, ಧಮ್ಮು ತಾಕತ್ತು ಇದ್ದರೆ ಈ ಅನುದಾನದಲ್ಲಿ ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂದು ಹೇಳಬೇಕು. ಈ ಆರ್ಥಿಕ ವರ್ಷದಲ್ಲಿ 9 ತಿಂಗಳು ಕಳೆದಿದ್ದು ಕೇವಲ 3 ತಿಗಳು ಬಾಕಿ ಇದೆ ಎಂದರು.

ರಾಜ್ಯ ಸರ್ಕಾರ ಎಸ್ ಸಿಎಸ್ ಪಿಗೆ 20,843 ಕೋಟಿ, ಖರ್ಚು ಮಾಡಿರುವುದು 3102 ಕೋಟಿ. ಅಂದರೆ ಶೇ.15ರಷ್ಟು ಖರ್ಚು ಮಾಡಿದ್ದಾರೆ. ಎಸ್ ಟಿಪಿಗೆ 8322 ಕೋಟಿ ಖರ್ಚಾಗಿರುವುದು 1500 ಕೋಟಿ ಮಾತ್ರ. ಅಂದರೆ ಶೇ.14.5ರಷ್ಟು ಮಾತ್ರ. ಇನ್ನು ಇಲಾಖೆವಾರು ನೋಡುವುದಾದರೆ ಉನ್ನತ ಶಿಕ್ಷಣ ಇಲಾಖೆಗೆ ನೀಡಿದ್ದು 282 ಕೋಟಿ ಆದರೆ ಖರ್ಚು ಮಾಡಿರುವುದು 6.34 ಕೋಟಿ ಮಾತ್ರ. ಅದರೆ ಶೇ. 2.21ರಷ್ಟು ಮಾತ್ರ. ಇನ್ನು ಕೌಶಲ್ಯಭಿವೃದ್ಧಿ ಇಲಾಖೆಗೆ ನೀಡಿದ್ದು 147 ಕೋಟಿ, ಖರ್ಚು ಮಾಡಿದ್ದು 6.53 ಕೋಟಿ. ಆಮೂಲಕ ಖರ್ಚಾಗಿದ್ದು ಶೇ.4.65 ಮಾತ್ರ. ಪ್ರಾಥಮಿಕ ಹಾಗೂ ಮಧ್ಯಮ ಶಿಕ್ಷಣ ಇಲಾಖೆಗೆ ನೀಡಿದ್ದು 984 ಕೋಟಿ, ಖರ್ಚು ಮಾಡಿದ್ದು 159 ಕೋಟಿ. ಆಮೂಲಕ ಖರ್ಚಾಗಿದ್ದು ಶೇ.16 ಮಾತ್ರ. ಈ ವರ್ಷ ಸರ್ಕಾರ ಘೋಷಿಸಿರುವ 29 ಸಾವಿರ ಕೋಟಿ ಅನುದಾನದಲ್ಲಿ ಇದುವರೆಗೂ ಶೇ.70 ರಷ್ಟು (21 ಸಾವಿರ ಕೋಟಿ) ಖರ್ಚಾಗಬೇಕಿತ್ತು. ಆದರೆ ಇದುವರೆಗೂ ಖರ್ಚಾಗಿರುವುದು ಕೇವಲ ಶೇ.15ರಷ್ಟು (4302 ಕೋಟಿ) ಮಾತ್ರ ಖರ್ಚು ಮಾಡಿದ್ದೀರಿ. ನಿಮ್ಮ ಸಾಧನೆ ಏನು? ಎಂದು ಕೇಳಿದರು.

ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದರೆ ಅವರ ಅಭಿವೃದ್ಧಿ ಆಗುತ್ತದೆಯೇ? 2 ತಿಂಗಳ ಹಿಂದೆ 11 ಸಾವಿರ ಪೌರ ಕಾರ್ಮಿಕರ ಹುದ್ದೆ ಶಾಶ್ವತ ಮಾಡುವುದಾಗಿ ಆದೇಶ ನೀಡಿದ್ದಿರಿ ಈಗ ಅದು ಏನಾಯ್ತು? ಈಗ ಅವರು 30ರಂದು ಮತ್ತೆ ಪ್ರತಿಭಟನೆ ಮಾಡುತ್ತಿದ್ದಾರೆ. ನೀವು ಕೇವಲ ಪ್ರಚಾರಕ್ಕೆ ಘೋಷಣೆಗಳನ್ನು ಮಾಡುತ್ತೀರಿ. ಚುನಾವಣೆಗೆ ನಿಮ್ಮ ಬಿಜೆಪಿ ಪಡೆಯೇ ರಾಜ್ಯಕ್ಕೆ ಬರುತ್ತದೆಯಂತೆ. ಬರಲಿ, ನಾವು ನಿಮ್ಮ ಬಂಡವಾಳವನ್ನು ಮನೆ ಮನೆಗೂ ತಿಳಿಸುತ್ತೇವೆ ಎಂದರು.

Share.
Exit mobile version