ಬೆಂಗಳೂರು: ಪಿಎಸ್‌ ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಐಪಿಎಸ್‌ ಅಧಿಕಾರಿ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

BIGG NEWS: ಕಾಂಗ್ರೆಸ್‌ ಪೇ ಸಿಎಂ ಅಭಿಯಾನಕ್ಕೆ ಸಿಎಂ ಕೌಂಟರ್‌ ; ಕೊನೆಗೂ ಸತ್ಯಕ್ಕೆ ಜಯ ಸಿಗುತ್ತೆ ಎಂದ CM ಬೊಮ್ಮಾಯಿ

 

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಆರ್​ಪಿಸಿ 164ರ ನಿಯಮಗಳನ್ನು ಅನ್ವಯಿಸಿ ಮ್ಯಾಜಿಸ್ಟ್ರೇಟ್ ಮುಂದೆ ಅವರಿಂದ ಹೇಳಿಕೆ ಕೊಡಿಸಬೇಕು ಎಂದು ಒತ್ತಾಯಿಸಿದರು.
ಹಗರಣದಕ್ಕೆ ಸಂಬಂಧಿಸಿದಂತೆ ಕನಕಗಿರಿ ಶಾಸಕ ದಡೇಸಗೂರು ಆಡಿಯೊ ಹೊಬಂದಿದೆ. ಅವರ ವಿಚಾರಣೆಯೂ ಈವರೆಗೆ ನಡೆದಿಲ್ಲ.

BIGG NEWS: ಕಾಂಗ್ರೆಸ್‌ ಪೇ ಸಿಎಂ ಅಭಿಯಾನಕ್ಕೆ ಸಿಎಂ ಕೌಂಟರ್‌ ; ಕೊನೆಗೂ ಸತ್ಯಕ್ಕೆ ಜಯ ಸಿಗುತ್ತೆ ಎಂದ CM ಬೊಮ್ಮಾಯಿ

 

ಬಿಜೆಪಿ ನಾಯಕ ಯತ್ನಾಳ್ ಅವರು ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬ ಮಗ ಇರುವುದಾಗಿ ಹೇಳಿದ್ದಾರೆ. ಆ ವ್ಯಕ್ತಿ ಯಾರು ಎಂಬುದನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು. ಮಾಜಿ ಸಿಎಂ ಮಗ ಎಂದರೆ ಅದು ದೇವೇಗೌಡರ ಮಗನಾ? ಯಡಿಯೂರಪ್ಪ ಮಗನಾ? ಸಿದ್ದರಾಮಯ್ಯ ಮಗನಾ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

Share.
Exit mobile version