ಹುಬ್ಬಳ್ಳಿ : ರಾಹುಲ್ ಗಾಂಧಿ ಮತ್ತುಕಾಂಗ್ರೆಸ್ ಪಕ್ಷದ ಅವಧಿಯಲ್ಲಿಆಗಿರುವ ಭಯೋತ್ಪಾದನೆ ಹಾಗೂ ಇತರ ದುಷ್ಕೃತ್ಯಗಳನ್ನು ಮುಚ್ಚಿಕೊಳ್ಳಲು ಮನವೊಲಿಕೆಯ ರಾಜಕಾರಣವನ್ನು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಕುಕ್ಕೆ ಸುಬ್ರಹ್ಮಣ್ಯ’ಕ್ಕೆ ತೆರಳುವ ಭಕ್ತರ ಗಮನಕ್ಕೆ: ಅ.25ರಂದು ಯಾವುದೇ ಸೇವೆಯಿಲ್ಲ, ದೇವರ ದರ್ಶನಕ್ಕೆ ಮಾತ್ರ ಅವಕಾಶ

ಅವರು ಇಂದು ಹುಬಳ್ಳಿ ವಿಮಾನ ನಿಲ್ದಾಣದಕ್ಕೆ ಬಂದಿಳಿದು, ಆನಂದ ಮಾಮನಿಯವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸವದತ್ತಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಆರ್ ಎಸ್ ಎಸ್ ಮತ್ತು ಭಾಜಪ ಪಕ್ಷ ಭಾರತದಲ್ಲಿ ಹಿಂಸೆಯನ್ನು ಹಬ್ಬಿಸುತ್ತಿದೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, , ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮನವೊಲಿಕೆಯ ರಾಜಕಾರಣ ಮಾಡುತ್ತಾ ಆರ್ ಎಸ್ ಎಸ್ ನ್ನು ದೂಷಿಸುತ್ತಿದ್ದಾರೆ ಎಂದರು.

‘ನನ್ನ ಬಿಟ್ರೆ ಯಾವನೂ ಮುಖ್ಯಮಂತ್ರಿ ಆಗೋಕೆ ಸಾಧ್ಯವಿಲ್ಲ’ : H.D ಕುಮಾರಸ್ವಾಮಿ ಓಪನ್ ಚಾಲೆಂಜ್

ಆರ್ ಎಸ್ ಎಸ್ ರಾಷ್ಟ್ರಪ್ರೇಮ ಹೊಂದಿರುವ ಸಂಘಟನೆ 

ಆರ್ ಎಸ್ ಎಸ್ ರಾಷ್ಟ್ರಪ್ರೇಮ ಹೊಂದಿರುವ ಸಂಘಟನೆ ವಿನಾಕಾರಣ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ದೇಶದ ಜನರಿಗೆ ಇದರ ಬಗ್ಗೆ ಅರಿವಿದೆ. ಕಾಂಗ್ರೆಸ್ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಂಬೈ, ಬೆಂಗಳೂರು,ಹೈದ್ರಾಬಾದ್ ಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳು ನಡೆಯಿತು. ಅವರ ಕಾಲದಲ್ಲಿ ಏನೇನಾಗಿದೆ ಎಂಬುದನ್ನು ಅವರು ಅವಲೋಕನ ಮಾಡಿಕೊಳ್ಳಬೇಕು. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಆಂತರಿಕ ಭದ್ರತೆ, ಬಾಹ್ಯ ಭದ್ರತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿರುವುದನ್ನು ಎಲ್ಲರೂ ಗ್ರಹಿಸಬೇಕು. ಅವರ ನೀತಿಗಳನ್ನು ವಿವಿಧ ರಾಷ್ಟ್ರಗಳು ಹಾಗೂ ಮುಸ್ಲಿಂ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ಹೀಗಾಗಿ ರಾಹುಲ್ ಗಾಂಧಿಯವರ ಮಾತು ಅಸತ್ಯದಿಂದ ಕೂಡಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದರು.

BIGG NEWS : ‘ಜೋಡೋ ಪಾದಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ನಟಿಗೆ ಬಿಗ್ ಶಾಕ್ : ವೇದಿಕೆ ಮೇಲೆ ಅವಕಾಶ ಸಿಗದೇ ‘ರಮ್ಯಾ’ ರಂಪಾಟ |Actor Ramya

ಎಲ್ಲ ವಿಚಾರಗಳನ್ನು ಹಳದಿ ಕಣ್ಣಿನಿಂದ ನೋಡುವುದು ಕಾಂಗ್ರೆಸ್ ಅಭ್ಯಾಸ 

ರಾಜ್ಯದಲ್ಲಿ ಕೋಮುವಾದವನ್ನು ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿರುವುದಕ್ಕೆ ಪ್ರತಿಕ್ರಯಿಸಿ, ಕಾಂಗ್ರೆಸ್ ನವರು ಎಲ್ಲ ವಿಷಯವನ್ನು ಹಳದಿ ಕಣ್ಣಿನಿಂದ ನೋಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ರಾಜಸ್ತಾನದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಯಾರು ಕೋಮುವಾದ, ಮನವೊಲಿಕೆಯ ರಾಜಕಾರಣದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಮೊದಲಿಗೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಆಗುತ್ತಿರುವ ಕೋಮು ಚಟುವಟಿಕೆಗಳನ್ನು ನಿಯಂತ್ರಿಸಲಿ ಎಂದರು.

BIGG NEWS : ಖಾಸಗಿ ಬಸ್ ಗಳಿಗೆ ಬಿಗ್ ಶಾಕ್ : ‘RTO’ ಅಧಿಕಾರಿಗಳಿಂದ ‘ದಂಡಾಸ್ತ್ರ’ ; ಮೂರು ದಿನಗಳಲ್ಲಿ 1.90 ಲಕ್ಷ ರೂ. ವಸೂಲಿ

Share.
Exit mobile version