ಅಧಿವೇಶನಕ್ಕೆ ಗೈರಾಗದೇ, ಖುದ್ದಾಗಿ ಹಾಜರು ಇರಬೇಕು: ಎಲ್ಲಾ ಸಚಿವರಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದ ವೇಳೆಯಲ್ಲೇ ಕೆಲ ಸಚಿವರು ಗೈರು ಹಾಜರಾಗಿದ್ದರ ಬಗ್ಗೆ ವಿಪಕ್ಷಗಳ ಸದಸ್ಯರು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಅಧಿವೇಶನದಕ್ಕೆ ಎಲ್ಲರೂ ಹಾಜರಿರಬೇಕು. ಯಾವುದೇ ಕಾರಣಕ್ಕೂ ಗೈರಾಗದಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಮಂಡಲದ ಅಧಿವೇಶನಕ್ಕೆ ಸಚಿವರೇ ಗೈರು ಹಾಜರಾಗುವುದರಿಂದ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ವಿವಿಧ ಕಾರಣಗಳನ್ನು ನೀಡಿ ಸದನಕ್ಕೆ ಸಚಿವರು ಗೈರ ಹಾಜರಾಗಬಾರದು. ಖುದ್ದು ಹಾಜರಿರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. … Continue reading ಅಧಿವೇಶನಕ್ಕೆ ಗೈರಾಗದೇ, ಖುದ್ದಾಗಿ ಹಾಜರು ಇರಬೇಕು: ಎಲ್ಲಾ ಸಚಿವರಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ