ತುಮಕೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯೇ ಇಲ್ಲ ಎನ್ನುವ ಬಿಜೆಪಿ ನಾಯಕರ ( BJP Leader ) ಹೇಳಿಕೆಯ ನಡುವೆಯೂ, ಸಿಎಂ ಬದಲಾವಣೆ ಆಗಲಿದ್ದಾರೆ ಎಂಬುದಾಗಿ ಬಿಜೆಪಿ ಶಾಸಕ ( BJP MLA ) ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಾಡಿದ ಪಾಪಕ್ಕೆ ಕಾಂಗ್ರೆಸ್ ಶಾಸ್ತಿ ಅನುಭವಿಸುತ್ತಿದೆ – HD ಕುಮಾರಸ್ವಾಮಿ

ಈ ಕುರಿತಂತೆ ಮಾತನಾಡಿರುವಂತ ಬಿಜೆಪಿ ಶಾಸಕ ಸುರೇಶ್ ಗೌಡ ( MLA Suresh Gowdha ) ಅವರು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2023 ) ಪಕ್ಷದ ಗೆಲುವಿಗಾಗಿ ಕೆಲ ಬದಲಾವಣೆ ಆಗಲಿದ್ದಾವೆ. ಆಗಸ್ಟ್ 15ರೊಳಗೆ ಎಲ್ಲವೂ ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಈ ಹಿಂದೆ 6, 2 ತಿಂಗಳಿನಲ್ಲಿಯೇ ಸಿಎಂ ಬದಲಾವಣೆ ಮಾಡಿದಂತ ಉದಾಹರಣೆಗಳಿವೆ ಎಂದು ಹೇಳಿದ್ದಾರೆ.

BIGG NEWS : ಉತ್ತರಕನ್ನಡ ಜಿಲ್ಲೆಯಲ್ಲೂ ʻ ಮಳೆಯ ಆರ್ಭಟ ʼ: ಅಣಶಿ ಘಾಟ್‌ನಲ್ಲಿ ʻ ಗುಡ್ಡ ಕುಸಿತ ʼ , ವಾಹನ ಸವಾರರು ಪರದಾಟ

ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಉತ್ತಮ ರೀತಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅವರು ಸಿಎಂ ಆದ ನಂತ್ರ ಕೆರೆ-ಕಟ್ಟೆಗಳು ತುಂಬಿದ್ದಾವೆ. ಆದ್ರೇ.. ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ಏನ್ ನಿರ್ಧಾರ ಕೈಗೊಳ್ಳಲಿದೆಯೋ ಗೊತ್ತಿಲ್ಲ. ಅದಕ್ಕೆ ಎಲ್ಲರೂ ಬದ್ಧರಾಗಿ ಇರಲೇ ಬೇಕು ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಸಿಎಂ ಬದಲಾವಣೆಯ ಬಗ್ಗೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ.

Share.
Exit mobile version