ಛಲವಾದಿ ನಾರಾಯಣಸ್ವಾಮಿ ನೀವು ಕೈಗಾರಿಕಾ ನಿವೇಶನ ಯಾವ ಕೋಟಾದಲ್ಲಿ ಪಡೆದಿದ್ದೀರಿ?: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ನಾರಾಯಣಸ್ವಾಮಿಯವರೇ, ನೀವೂ ಕೈಗಾರಿಕಾ ನಿವೇಶನವನ್ನು ಪಡೆದಿದ್ದೀರಿ ಅಲ್ಲವೇ? ಯಾವ ಕೋಟಾದಲ್ಲಿ ಪಡೆದಿದ್ದೀರಿ? ಪ್ರಭಾವ ಬಳಸಿ ಪಡೆದಿದ್ದಾ? ಬಕೆಟ್ ಹಿಡಿದು ಪಡೆದಿದ್ದಾ? ಚಡ್ಡಿ ಹೊತ್ತು ಪಡೆದಿದ್ದಾ? ನಾಡಿನ ಜನರಿಗೆ ಉತ್ತರಿಸುವಿರಾ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಚಲವಾದಿ ನಾರಾಯಣಸ್ವಾಮಿಯವರು ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಕೃಪೆಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡವರು, ಅದೇ ಚಲವಾದಿ ನಾರಾಯಣಸ್ವಾಮಿಯವರನ್ನು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಮುಂದೆ ಬಿಟ್ಟ ಬಿಜೆಪಿ ಆಟ ನೋಡುತ್ತಿದೆ ಎಂದಿದೆ. ಅಸ್ತಿತ್ವ … Continue reading ಛಲವಾದಿ ನಾರಾಯಣಸ್ವಾಮಿ ನೀವು ಕೈಗಾರಿಕಾ ನಿವೇಶನ ಯಾವ ಕೋಟಾದಲ್ಲಿ ಪಡೆದಿದ್ದೀರಿ?: ಕಾಂಗ್ರೆಸ್ ಪ್ರಶ್ನೆ