ನವದೆಹಲಿ: ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮು, ಶೀತದ ಸಿರಪ್‌ ಸೇವಿಸಿದ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದಾರೆ. ಈ ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದ್ದು, ಈ ಕುರಿತು ತನಿಖೆ ನಡೆಸಲು ಕೇಂದ್ರ ಔಷಧ ನಿಯಂತ್ರಕ ಮಂಡಳಿ(ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್-CDSCO)ಗೆ ಸೂಚಿಸಿದೆ.

ಸರ್ಕಾರಿ ಮೂಲಗಳ ಪ್ರಕಾರ, WHO ಹಂಚಿಕೊಂಡ ಲಭ್ಯವಿರುವ ಮಾಹಿತಿಯ ಆಧಾರದ CDSCO ಈಗಾಗಲೇ ಹರಿಯಾಣದ ಸೋನೆಪತ್‌ನಲ್ಲಿರುವ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಉತ್ಪಾದಿಸಿ ಗ್ಯಾಂಬಿಯಾಕ್ಕೆ ರಫ್ತು ಮಾಡಿದ ಕೆಮ್ಮು ಮತ್ತು ಶೀತ ಸಿರಪ್‌ಗಳ ವಿರುದ್ಧ ವಿವರವಾದ ತನಿಖೆ ಪ್ರಾರಂಭಿಸಿದೆ.

ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಭಾರತ ನಿರ್ಮಿತ ಕೆಮ್ಮು ಮತ್ತು ಶೀತ ಸಿರಪ್‌ಗಳ ಬಗ್ಗೆ WHO ಬುಧವಾರ ಎಚ್ಚರಿಕೆ ನೀಡಿದ್ದು, ಅದೇ ಕೆಮ್ಮು ಮತ್ತು ಶೀತ ಸಿರಪ್‌ಗಳು ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಸಂಬಂಧಿಸಿರಬಹುದು ಎಂದು WHO ಅನುಮಾನಿಸಿದೆ.

“ಈ ನಾಲ್ಕು ಸಿರಪ್‌ ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯದ ವಿಶ್ಲೇಷಣೆಯು ಅವುಗಳಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥೈಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಅನ್ನು ಮಾಲಿನ್ಯಕಾರಕಗಳಾಗಿ ಹೊಂದಿವೆ ಎಂದು ದೃಢಪಡಿಸುತ್ತದೆ” ಎಂದು ಡಬ್ಲ್ಯುಎಚ್ಒ ವೈದ್ಯಕೀಯ ಉತ್ಪನ್ನದ ಎಚ್ಚರಿಕೆಯಲ್ಲಿ ತಿಳಿಸಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, M/s Maiden Pharmaceutical Limited ಒಂದು ಔಷಧ ತಯಾರಕರಾಗಿದ್ದು, ರಾಜ್ಯ ಔಷಧ ನಿಯಂತ್ರಕರಿಂದ ಪರವಾನಗಿ ಪಡೆದ ಉತ್ಪನ್ನಗಳಿಗೆ ಉಲ್ಲೇಖಿತ ಉತ್ಪನ್ನವಾಗಿದೆ ಮತ್ತು ಉತ್ಪನ್ನಗಳಿಗೆ ಉತ್ಪಾದನಾ ಅನುಮತಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಕಂಪನಿಯು ಈ ಉತ್ಪನ್ನಗಳನ್ನು ಗ್ಯಾಂಬಿಯಾಕ್ಕೆ ಮಾತ್ರ ತಯಾರಿಸಿ ರಫ್ತು ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಮದು ಮಾಡಿಕೊಳ್ಳುವ ದೇಶವು ಈ ಉತ್ಪನ್ನಗಳನ್ನು ಗುಣಮಟ್ಟವನ್ನು ಪರಿಶೀಲಿಸದ ಬಳಿಕವೇ ಪಡೆಯುತ್ತವೆ. ಇದೇ ರೀತಿಯಲ್ಲಿ ಗ್ಯಾಂಬಿಯಾದಲ್ಲೂ ಕೂಡ ಈ ಔಷಧವನ್ನು ಬಳಕೆ ಮಾಡುವ ಮೊದಲು ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸಿ ಆಮದು ಮಾಡಿಕೊಂಡಿದೆ. ಆದ್ರೆ, ಔಷಧಿಯ ಬಗ್ಗೆ ಆ ದೇಶ ತೃಪ್ತಿ ವ್ಯಕ್ತಪಡಿಸಿತ್ತು ಎಂದು ಕಂಪನಿಯ ಮೂಲವೊಂದು ತಿಳಿಸಿದೆ.

BIG NEWS : ಹಾಸ್ಯಲೋಕಕ್ಕೆ ಮತ್ತೊಂದು ಆಘಾತ: ಕಾಮಿಡಿಯನ್ ʻಪರಾಗ್ ಕನ್ಸಾರಾʼ ಇನ್ನಿಲ್ಲ | Parag Kansara passes away

BREAKING NEWS : ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳ ತಾತ್ಕಾಲಿಕ ದಿನಾಂಕ ಬಿಡುಗಡೆ : ಇಲ್ಲಿದೆ ಡಿಟೇಲ್ಸ್ |‌ CBSE Board Exams 2023

BIGG NEWS: ಭಾರತ್‌ ಜೋಡೋ ಯಾತ್ರೆ ವೇಳೆ ʼಅಮ್ಮನ ಶೂ ಲೇಸ್ʼ ಕಟ್ಟಿದ ರಾಹುಲ್ ಗಾಂಧಿ|Bharat Jodo Yatra

Share.
Exit mobile version