Other Film – #1 Latest News Updates Portal – 24×7 | Kannada News Now
Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಬೆಂಗಳೂರು: ನಮ್ಮಲ್ಲಿ ಕೆಲವು ಮಂದಿ ಕನ್ನಡವನ್ನು ಉಳಿಸಿ, ಉಳಿಸಿ ಅಂತ ಪ್ರತಿ ದಿನ ಹೇಳುವುದನ್ನು ನೋಡಿದ್ದೀವಿ, ಆದರೆ ಉಳಿಸಿ ಎನ್ನುವ ಪದಕ್ಕೆ ವಿರೋಧ ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎಂದು ಹೇಳಿ ಅಂಥ ಜನತೆ ಬಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಮನಗರ ತಾಲೂಕಿನ ಬಿಡದಿಯಲ್ಲಿ ತಮ್ಮನ್ನು ಭೇಟಿಯಾದ ಅಭಿಮಾನಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತ ಈ ಬಗ್ಗೆ ಹೇಳಿದರು, ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಕನ್ನಡದ ಶಾಲು ಹಾಕಿ ಮನೆಗೆ ಬಂದರೆ ಖುಷಿ ಪಡಬೇಕಾ, ಇಲ್ಲ ಭಯ ಪಡಬೇಕಾ ಎಂದು ಗೊತ್ತಾಗಲ್ಲ ನನಗೆ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದರು.
ಕನ್ನಡ ಉಳಿಸಬೇಕು ಎನ್ನುವುದರಿಂದ ನಾವು ವೀಕ್ ಆಗ್ತಾ ಹೋಗ್ತೀವಿ, ಕನ್ನಡದ ಮೇಲೆ ಅಭಿಮಾನ ಇಲ್ಲದವರನ್ನು ಬಿಟ್ಟು ಬಿಡಿ, ಅದರ ಬದಲೂ ಕೋಟಿ ಸಂಖ್ಯೆಯಲ್ಲಿರುವ ಕನ್ನಡಿಗರನ್ನು ಗಮನಿಸೋಣ, ಕನ್ನಡ ಕಿತ್ತುಕೊಳ್ಳುವ ಧೈರ್ಯ ಯಾರಿಗೆ ಇದೇ ಹೇಳಿ ನೋಡೋಣ ಅಂತ ಹೇಳಿದರು.
ನವದೆಹಲಿ: ಟಿವಿ ನಟಿ ರುಬಿನಾ ದಿಲಿಕ್ ಬಿಗ್ ಬಾಸ್ 14ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.ಈ ಮೂಲಕ ಹಿಂದಿಯ ಬಿಗ್ ಬಾಸ್ ಸೀಸನ್ 14ನ 140 ದಿನಗಳ ತಾಳ್ಮೆ, ತಾಳ್ಮೆ ಮತ್ತು ದೈಹಿಕ ಮತ್ತು ಮಾನಸಿಕ ಶಕ್ತಿಗಳ ಪಯಣ ಭಾನುವಾರ ಕೊನೆಯಾಗಿದೆ.
ಹೈದರಾಬಾದ್ : ಪುಷ್ಫ’ ಸಿನಿಮಾದ ಶೂಟಿಂಗ್ ಮುಗಿಸಿ ಬರುವ ವೇಳೆ ನಟ ಅಲ್ಲು ಅರ್ಜುನ್ ಅವರ ಕ್ಯಾರವಾನ್ಗೆ ಅಪಘಾತ ಆಗಿದೆ. ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ರಂಪಚೋದವರಂನಿಂದ ಹೈದರಾಬಾದ್ನ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಕ್ಯಾರವಾನ್ನಲ್ಲಿ ಅಲ್ಲು ಅರ್ಜುನ್ ಅವರ ಮೇಕಪ್ ಟೀಂ ಇತ್ತು ಎನ್ನಲಾಗಿದೆ. ಅಲ್ಲು ಅರ್ಜುನ್ ಅವರು ಗಾಡಿಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಕ್ಯಾರವಾನ್ ಫಾಲ್ಕನ್ನಲ್ಲಿ ಅಲ್ಲು ಅರ್ಜುನ್ ಟೀಂ ಶೂಟಿಂಗ್ ಮುಗಿಸಿ ಮನೆಗೆ ಬರುತ್ತಿದ್ದರು. ಡ್ರೈವರ್ ಬ್ರೇಕ್ ಹಾಕಿದ ಕೂಡಲೇ ಹಿಂದಿನಿಂದ ಬಂದ ಲಾರಿ ಗುದ್ದಿದೆ. ಆದರೆ ಯಾರಿಗೂ ಏನೂ ಆಗಿಲ್ಲ ಎಂದು ಹೇಳಲಾಗಿದೆ. ಖಮ್ಮಂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ವರ್ಷ ಕ್ಯಾರವನ್ ಖರೀದಿಸಿದ್ದ ಅಲ್ಲು ಅರ್ಜುನ್ ಅವರ ಐಷಾರಾಮಿ ವ್ಯಾನಿಟಿ ವ್ಯಾನ್ನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು ಅದಕ್ಕೆ ಫಾಲ್ಕನ್ ಎಂದು ಹೆಸರಿಡಲಾಗಿದೆ. ಈ ವ್ಯಾನಿಟಿ ವ್ಯಾನ್ ಬೆಲೆ ಸುಮಾರು ₹ 7 ಕೋಟಿ ಎನ್ನಲಾಗಿದೆ. ರೆಡ್ಡಿ ಕಸ್ಟಮ್ಸ್ ಎಂಬ ಕಂಪನಿ ಈ ವಾಹವನ್ನು ಡಿಸೈನ್ ಮಾಡಿದೆ.
ಕೆಎನ್ಎನ್ಡಿಜಿಟಲ್ ನ್ಯೂಸ್ಡೆಸ್ಕ್: ಲಾಸ್ ಏಂಜಲೀಸ್ ನಲ್ಲಿ ಸೋಮವಾರ ಐಕಾನಿಕ್ ಹಾಲಿವುಡ್ ಸೈನ್ ಅನ್ನು ‘ಹೋಲಿಬೂಬ್’ ಎಂದು ಬದಲಾಯಿಸಲಾಯಿಗಿದ್ದು ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಎಲ್ ಎ ಟೈಮ್ಸ್ ಪ್ರಕಾರ, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ವನ್ನು ಕೈಗೊಳ್ಳಲಾಯಿತು ಎನ್ನಲಾಗಿದ್ದು, ಈ ಬಗೆಗಿನ ವೈರಲ್ ಫೋಟೋಗಳು ಗಮನಿಸಿದ ವೇಳೆಯಲ್ಲಿ “W” ಅಕ್ಷರವನ್ನು “B” ಎಂದು ಟಾರ್ಪ್ ನಿಂದ ಮುಚ್ಚಿಲಗಿತ್ತು. , ಇದೇ ವೇಳೆ “D” ಒಂದು ಪುಟ್ಟ ಡ್ಯಾಶ್ ಅನ್ನು ಸೇರಿಸಿ, ಅದು ಮತ್ತೊಂದು “B” ನಂತೆ ಕಾಣಿಸುವಂತೆ ಮಾಡಲಾಗಿದೆ.
ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಭದ್ರತಾ ಸಿಬ್ಬಂದಿ ಮಧ್ಯಾಹ್ನ 1:15ರ ಸುಮಾರಿಗೆ ಐವರು ಪುರುಷರು ಮತ್ತು ಒಬ್ಬ ಮಹಿಳೆಯನ್ನು ಕಣ್ಗಾವಲಿನಲ್ಲಿ ವೀಕ್ಷಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸ್ ಹೆಲಿಕಾಪ್ಟರ್ ಗೆ ಎಚ್ಚರಿಕೆ ನೀಡಿ, ದುಷ್ಕರ್ಮಿಗಳು ಮುಲ್ಲೊಲ್ಯಾಂಡ್ ಡ್ರೈವ್ ನ ಒಂದು ಸ್ಥಳಕ್ಕೆ ತೆರಳಿ ಅಲ್ಲಿ ಅವರನ್ನು ವಶಕ್ಕೆ ಪಡೆದಿರುವುದಾಗಿ ಲಾಸ್ ಏಂಜಲೀಸ್ ಸಿಬಿಎಸ್ ವರದಿ ಮಾಡಿದೆ.
ಕುಂದಾಪುರ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಕ್ಕಳು ಜಿಂಗ್ರ್ ಪೊಂಕ್ ಎನ್ನುವ ಹೆಸರಿನ ಸಸ್ಪೆನ್ಸ್ ವೆಬ್ ಸಿರೀಸ್ ನಿರ್ಮಿಸಿದ್ದು, ಇದರ ಟ್ರೈಲರ್ ರಿಲಿಸ್ ಆಗಿದೆ. ಟ್ರೈಲ್ ನೋಡಿರುವ ಮಂದಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಮಾತನಾಡಿದ್ದು, ಹೊಸ ಟ್ರೆಂಡ್ ಆಗುತ್ತಿದದೆ. ಅಂದ ಹಾಗೇ ಬರೀ ಮಕ್ಕಳೇ ಈ ವೆಬ್ ಸೀರಿಸ್ನಲ್ಲಿ ಅಭಿನಯ ಮಾಡಿರೋದು ಇದರ ಮತ್ತೊಂದು ವಿಶೇಷಯಾಗಿದ್ದು, ದೊಡ್ಡವರ ಅಭಿನಯವನ್ನು ಕೂಡ ಈ ಮಕ್ಕಳು ಮೀರಿಸುತ್ತಾರೆ.
ಜಿಂಗ್ರ್ ಪೊಂಕ್ ಅಂದರೆ ಏನು? ಅನ್ನೊಂದು ನಿಮ್ಮ ಮುಂದೆ ನಾಲ್ಕು ಕಂತುಗಳಲ್ಲಿ ಬರಲಿದ್ದು, ಚಿಕ್ಕ ಮಕ್ಕಳ ಈ ವಿಭಿನ್ನ ಪ್ರಯತ್ನಕ್ಕೆ ನಿಮ್ಮ ಬೆಂಬಲವೂ ಕೂಡ ಇರಲಿ. ಅಂದ ಹಾಗೇ ವೆಬ್ಸೀರಿಸ್ಗೆ ಕಥೆ ಬರೆದು ಡೈರೆಕ್ಟ್ ಮಾಡಿರೋದು ಎನ್ ಎಮ್ ನಿಖಿಲ್ ಆಗಿದ್ದು, ಗೋಪಾಲ್ ಎನ್ ಅವರು ಚಿತ್ರಕಥೆ, ಮಣಿಕಂಠ ಖಾರ್ವಿ ಸಂಕಲನ ನಾಗರಾಜ್ ನಾಯಕ್ & ನಿತಿನ್ ಪಟೇಲ್ ಅವರ ಕ್ಯಾಮಾರ ವರ್ಕ್ ಕೂಡ ಇದ್ದು, ನಮನ ಅಶೋಕ್ ಅಶೋಕ್ ಅವರು ಡಿಸೈನ್ಸ್ ಮಾಡಿದ್ದಾರೆ. ಪತ್ರಕರ್ತ ಅವಿನಾಶ್ ಆರ್ ಭೀಮಸಂದ್ರ ಅವರು ಈ ವೆಬ್ಸೀರಿಸ್ಗೆ ಸಹಕಾರವನ್ನು ನೀಡಿದ್ದು, ಸದ್ಯದಲ್ಲೇ ನಿಮ್ಮ ಮುಂದೆ ಮೊದಲ ಕಂತು ಬಿಡುಗಡೆಯಾಗಲಿದೆ.
ಚೆನ್ನೈ : ಕಳೆದ ವರ್ಷ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾದ ಜನ ಮನ ಗೆದ್ದ ಸಿನಿಮಾ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಇದೀಗ ಈ ಸಿನಿಮಾ ಆಸ್ಕರ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ.
2021 ರಲ್ಲಿ ನಡೆಯಲಿರುವ ಆಸ್ಕರ್ ಸ್ಪರ್ಧೆಯಲ್ಲಿ ಭಾಗವಹಿಸಲು ಈ ಸಿನಿಮಾ ಎಂಟ್ರಿ ನೀಡಿರುವ ವಿಚಾರವನ್ನು 2 ಡಿ ಎಂಟರ್ಟೈನ್ಮೆಂಟ್ ಸಿಇಒ ರಾಜಶೇಖರ್ ಪಾಂಡಿಯನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.
“ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ, ಉತ್ತಮ ಸಂಗೀತ ನಿರ್ದೇಶನ ಹಾಗೂ ಇನ್ನಿತರ ವಿಭಾಗಗಳಲ್ಲಿ ನಮ್ಮ ಸಿನಿಮಾ ಸ್ಪರ್ಧಿಸುತ್ತಿದೆ. ಸೂರ್ಯ, ಅಪರ್ಣಾ ಬಾಲಮುರಳಿ, ಸುಧಾ ಕೊಂಗರ, ಜಿ.ವಿ ಪ್ರಕಾಶ್ ಕುಮಾರ್ ಈ ಸಿನಿಮಾದ ಆಧಾರಸ್ತಂಭಗಳು. ನಮ್ಮ ಸಿನಿಮಾ ವಿಶ್ವದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲಬಹುದೆಂಬ ವಿಶ್ವಾಸವಿದೆ” ಎಂದು ರಾಜಶೇಖರ್ ಪಾಂಡಿಯನ್ ಹೇಳಿಕೊಂಡಿದ್ದಾರೆ.
2 ಡಿ ಎಂಟರ್ಟೈನ್ಮೆಂಟ್ , ಶಿಖ್ಯಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ‘ಸೂರರೈ ಪೊಟ್ರು’ ಚಿತ್ರವನ್ನು ಸೂರ್ಯ ಹಾಗೂ ಗುಣಿತ್ ಮೊಂಗಾ ನಿರ್ಮಿಸಿದ್ದಾರೆ. ಸುಧಾಕೊಂಗರ ನಿರ್ದೇಶನ ಮಾಡಿದ್ದು, ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಸೂರ್ಯ, ಅಪರ್ಣಾ ಬಾಲಮುರಳಿ ಜೊತೆಗೆ ಊರ್ವಶಿ, ಕಾಳಿ ವೆಂಕಟ್, ಪರೇಶ್ ರಾವಲ್ ಹಾಗೂ ಮೋಹನ್ ಬಾಬು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಕೆಎನ್ಎನ್ಸಿನಿಮಾಡೆಸ್ಕ್: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಕಂ ನಟ ರಿಷಭ್ ಶೆಟ್ಟಿ, ಗಾನವಿ ಲಕ್ಷಣ್ ಜೋಡಿ ಅಭಿನಯದ ‘ಹೀರೋ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿರೋ ‘ಹೀರೋ’ ಟ್ರೈಲರ್ ರಿಷಭ್ ಅಭಿಮಾನಿ ಬಳಗಕ್ಕೆ ಸಖತ್ ಸಂತಸ ನೀಡಿದೆ.
‘ಹೀರೋ’ ಸಿನಿಮಾ ಮೂಲಕ ನವ ಪ್ರತಿಭೆ ಭರತ್ ರಾಜ್ ಎಂ. ಸ್ಯಾಂಡಲ್ವುಡ್ಗೆ ನಿರ್ದೇಶಕನಾಗಿ ಪರಿಚಿತರಾಗುತ್ತಿದ್ದಾರೆ. ಕೊರೋನಾ ಲಾಕ್ಡೌನ್ ಅವಧಿಯಲ್ಲಿ 45 ದಿನಗಳ ಯಶಸ್ವಿ ಚಿತ್ರೀಕರಣ ಮಾಡಿ ಸದ್ದು ಮಾಡಿದ್ದ ‘ಹೀರೋ’ ಚಿತ್ರ ಈಗ ಬಿಡುಗಡೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಸದ್ಯ ಸೆನ್ಸಾರ್ ಅಂಗಳದಲ್ಲಿರುವ ಸಿನಿಮಾ ಟ್ರೈಲರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಪಕ್ಕಾ ಕಮರ್ಶಿಯಲ್ ಎಳೆ ಒಳಗೊಂಡಿರುವ ಈ ಚಿತ್ರದಲ್ಲಿ ರಿಷಭ್ ಬಾರ್ಬರ್ ಪಾತ್ರದಲ್ಲಿ ಕಾಣಸಿಗಲಿದ್ದು, ಪ್ರಮೋದ್ ಶೆಟ್ಟಿ ಖಳನಟನಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ಸಂ ಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ವಿಕ್ರಂ ಮೋರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.ರಿಷಭ್ ಶೆಟ್ಟಿ ಫಿಲಂಸ್ ಬ್ಯಾನರ್ನಡಿ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿರುವ ‘ಹೀರೋ’ ಸಿನಿಮಾ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಸಿನಿಮಾಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಕೆಜಿಎಫ್ ಚಾಪ್ಟರ್ – 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಿನಿಮಾದ ಟೀಸರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೆಳಕಂಡ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ. ಅ) ಅದ್ಭುತ
ಆ) ಸಾಧಾರಣ
ಇ) ಚೆನ್ನಾಗಿ ಇಲ್ಲ
ಈ) ಇನ್ನೂ ನೋಡಿಲ್ಲ
ಹೈದರಾಬಾದ್ : ತೆಲುಗು ಚಿತ್ರರಂಗದ ಜನಪ್ರಿಯ ಗೀತ ರಚನಕಾರ ವೆನ್ನೆಲಕಂಟಿ ರಾಜೇಶ್ವರ ಪ್ರಸಾದ್ ಅವರು ಮಂಗಳವಾರ (ಜ.5) ಹೃದಯಾಘಾತದಿಂದ ಮೃತರಾದರು.
ಚೆನ್ನೈನಲ್ಲಿ ಬುಧವಾರ ಅವರ ಅಂತ್ಯಕ್ರಿಯೆ ನಡೆಯಲಿದೆ. ವೆನ್ನೆಲಕಂಟಿ ಎಂದೇ ಖ್ಯಾತರಾಗಿದ್ದ ಅವರು 2 ಸಾವಿರಕ್ಕೂ ಅಧಿಕ ಸಿನಿಮಾ ಗೀತೆಗಳನ್ನು ಬರೆಯುವ ಮೂಲಕ ಜನಪ್ರಿಯರಾಗಿದ್ದರು.
ವೆನ್ನೆಲಕಂಟಿ ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
1986ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರ ತಂದೆ ಕೂಡ ಸಿನಿಮಾ ಕ್ಷೇತ್ರದ ಜೊತೆ ನಂಟು ಹೊಂದಿದ್ದರು. 1986ರಲ್ಲಿ ತೆರೆಕಂಡ ‘ಶ್ರೀರಾಮಚಂದ್ರುಡು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ವೆನ್ನೆಲಕಂಟಿ ಪರಿಚಯವಾದರು. ಗೀತರಚನಾಕಾರನಾಗಿ ಮಾತ್ರವಲ್ಲದೆ, 300ಕ್ಕೂ ಅಧಿಕ ಸಿನಿಮಾಗಳಿಗೆ ಸಂಭಾಷಣಾಕಾರನಾಗಿಯೂ ಅವರು ಕೆಲಸ ಮಾಡಿದ್ದರು.
ಹೈದ್ರಬಾದ್ : ಮೆಗಾಸ್ಟಾರ್ ರಜನಿಕಾಂತ್ ಅವರನ್ನು ಭಾನುವಾರ ಹೈದರಾಬಾದ ಅಪೊಲೊ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ತೀವ್ರ ರಕ್ತದೊತ್ತಡದ ಏರುಪೇರಿನಿಂದ ಬಳಲುತ್ತಿದ್ದ ಅವರು ಡಿಸೆಂಬರ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬಿಡುಗಡೆಯಾದ ಆಸ್ಪತ್ರೆಯ ಬುಲೆಟಿನ್ ಈ ಸುದ್ದಿಯನ್ನು ಖಚಿತಪಡಿಸಿದೆ. “ತೀವ್ರ ರಕ್ತದೊತ್ತಡ ಮತ್ತು ಬಳಲಿಕೆಯಿಂದ 2020ರ ಡಿಸೆಂಬರ್ 25ರಂದು ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಹದ ನೋಡಿ, ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ತಿಳಿಸಿದೆ.
ಈ ಹೇಳಿಕೆಯಲ್ಲಿ, “ಅವರ ರಕ್ತದೊತ್ತಡವನ್ನು ಸ್ಥಿರಗೊಳಿಸಲಾಗಿದೆ ಮತ್ತು ಅವರು ತುಂಬಾ ಉತ್ತಮ ಭಾವನೆಹೊಂದಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿರುವುದರಿಂದ ಇಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಟ್ರಾನ್ಸ್ ಪ್ಲಾಂಟ್ ನಂತರದ ಸ್ಥಿತಿ, ಅಧಿಕ ರಕ್ತದೊತ್ತಡ ಮತ್ತು ವಯಸ್ಸಿನ ಹಿನ್ನೆಲೆಯಲ್ಲಿ ಔಷಧೋಪಚಾರಗಳು ಮತ್ತು ಆಹಾರಕ್ರಮದ ಜೊತೆಗೆ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ ಅಂತ ತಿಳಿಸಿದೆ. ರಕ್ತದೊತ್ತದೊತ್ತಡದ ನಿಯಮಿತ ಮೇಲ್ವಿಚಾರಣೆಯೊಂದಿಗೆ ಒಂದು ವಾರ ಕಾಲ ಸಂಪೂರ್ಣ ಬೆಡ್ ರೆಸ್ಟ್ ಗೆ ರಜನಿಕಾಂತ್ ಅವರಿಗೆ ಸೂಚಿಸಲಾಗಿದೆ. ದೈಹಿಕ ಚಟುವಟಿಕೆಗಳಿಂದ ದೂರವಿರಲು ಹಾಗೂ ಒತ್ತಡದ ಸನ್ನಿವೇಶಗಳಿಂದ ದೂರಇರುವಂತೆ ಯೂ ಸಹ ಅವರಿಗೆ ಸೂಚಿಸಲಾಗಿದೆ.
ಕೊಚ್ಚಿನ್: ಮಲಯಾಳಂ ಚಿತ್ರರಂಗದ ಖ್ಯಾತ ಪೋಷಕ ನಟ ಅನಿಲ್ ನೆಡುಮಂಗಾಡ್ (48) ತೊಡುಪುಳ ಮಾಲಂಕಾರ ಡ್ಯಾಮ್ ನಲ್ಲಿ ಗೆಳೆಯರ ಜೊತೆ ಸ್ನಾನ ಮಾಡಲು ಇಳಿದಾಗ, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ಸಂಜೆ ನಟ ಮತ್ತು ಇತರ ಇಬ್ಬರು ಸ್ನಾನಕ್ಕಾಗಿ ಡ್ಯಾಮ್ ಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರು ತೊಡುಪುಳದಲ್ಲಿದ್ದರೆಂದು ತಿಳಿದು ಬಂದಿದೆ.
ನಟ ಮತ್ತು ಅವರ ಸ್ನೇಹಿತರು ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್ ಗೆ ಹೋಗಿದ್ದಾಗ ನೀರಿನ ಸೆಳೆತಕ್ಕೆ ಅವರು ಮುಳುಗಿದ್ದಾರೆ, ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅನಿಲ್ ‘ಕಮ್ಮಟ್ಟಿ ಪಾಡಮ್’, ‘ಎನ್ಜನ್ ಸ್ಟೀವ್ ಲೋಪೆಜ್’ ಮತ್ತು ‘ಪೊರಿಂಜು ಮರಿಯಮ್ ಜೋಸ್’ “ಅಯ್ಯಪ್ಪನುಂಕೊಶಿಯಮ್” ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು.
ಚೆನ್ನೈ : ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್ (40) ಅವರು ಶೂಟಿಂಗ್ ವೇಳೆ ಹೃದಯಾಘಾತ ಉಂಟಾಗಿ, ಆಸ್ಪತ್ರೆ ಸೇರಿದ್ದು ಬಳಿಕ ಬ್ರೈನ್ ಡೆಡ್ ಆಗಿ ಬುಧವಾರ (ಡಿ.23) ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
‘ಗಾಂಧಿರಾಜನ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದ ವೇಳೆ, ಚಿತ್ರೀಕರಣದ ಸೆಟ್ನಲ್ಲೇ ಅವರಿಗೆ ಮಂಗಳವಾರ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಅವರ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಲಾಗಿತ್ತು. ಬುಧವಾರ ರಾತ್ರಿ 10.20ರ ಸುಮಾರಿಗೆ ನಿಧನರಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ವರ್ಷ ತೆರೆಕಂಡ ‘ಸೂಫಿಯುಂ ಸುಜಾತಯುಂ’ ಜನಮನ್ನಣೆ ಗಳಿಸಿತ್ತು, ಆ ಮೂಲಕ ನಿರ್ದೇಶಕರಿಗೂ ಹೆಸರು ತಂದು ಕೊಟ್ಟಿತ್ತು. ವಿಭಿನ್ನ ಪ್ರೇಮಕಥೆ ಹೊಂದಿದ್ದ ಆ ಚಿತ್ರದಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ, ಜಯಸೂರ್ಯ, ದೇವ್ ಮೋಹನ್ ಮುಖ್ಯಭೂಮಿಕೆ ನಿಭಾಯಿಸಿದ್ದರು. ಶಾನವಾಸ್ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಚನ್ನೈ: ಸ್ಟರ್ಲೈಟ್ ವೇದಾಂತ್ ಸ್ಥಾವರಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ರಜನಿಕಾಂತ್ಗೆ ಹೊಸ ತೊಂದರೆಯೊಂದು ಎದುರಾಗಿದ್ದು, ಸ್ಟರ್ಲೈಟ್ ವೇದಾಂತ್ ಸ್ಥಾವರ ವಿವಾದ ಸಂಬಂಧ ನಡೆದ ಗೋಲಿಬಾರ್ ಘಟನೆಗೆ ಸಂಬಂಧಿಸಿದ ತನಿಖೆ ನಡೆಸುತ್ತಿರುವ ಏಕ ನ್ಯಾಯಾಧೀಶ ಆಯೋಗ ರಜನಿಕಾಂತ್ ಅವರಿಗೆ ಸಮನ್ಸ್ ಜಾರಿ ಗೊಳಿಸಿದೆ ಅಂತ ತಿಳಿದು ಬಂದಿದೆ. ಸ್ಟರ್ಲೈಟ್ ಹೋರಾಟದ ಸಮಯದಲ್ಲಿ ರಜನಿಕಾಂತ್ “ಸಮಾಜವಿರೋಧಿ ಅಂಶಗಳು ಪ್ರತಿಭಟನೆಗಳಲ್ಲಿ ನುಸುಳಿದ್ದಾವೆ’ ಹಾಗಾಗಿ ಚಳುವಳಿ ಹಿಂಸಾತ್ಮಕವಾಗಿ ಪರಿವರ್ತನೆಗೊಂಡಿದೆ ಎಂದು ಅವರು ಹೇಳಿದ್ದರು. ಹೀಗಾಗಿ ಅವರಿಗೆ ತಮ್ಮ ಹೇಳಿಕೆಗೆ ಸಂಬಂಧಪಟ್ಟಂತೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
2018ರಲ್ಲಿ ವೇದಾಂತ ಕಂಪೆನಿಗೆ ಸೇರಿದ ಸ್ಟೆರ್ಲೈಟ್ ಕಾಪರ್ ಫ್ಯಾಕ್ಟರಿಗೆ ಬೀಗ ಜಡಿಯುವಂತೆ ಆಗ್ರಹಿಸಿ ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಪ್ರತಿಭಟನೆ ವೇಳೇಯಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ಗೆ 13 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಕೊಚ್ಚಿ: ಇಲ್ಲಿನ ಲುಲು ಮಾಲ್ ನಲ್ಲಿ ಮಲಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾರೆ ಎನ್ನಲಾಗಿದೆ. ನಟಿ ತಮಗೆ ಆದ ಅನುಭವ ಹಾಗೂ ತಮ್ಮ ದುಃಖವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಆಕೆಯ ಮತ್ತು ಆಕೆಯ ಸಹೋದರಿಯನ್ನು ಹಿಂಬಾಲಿಸಿ ಅನುಚಿತವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.
ತನ್ನ ಕುಟುಂಬದೊಂದಿಗೆ ಮಾಲ್ವೊಂದಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಘಟನೆ ನಡೆದ ನಂತರವೂ ಆಕೆಯ ಮೇಲೆ ದೌರ್ಜನ್ಯ ನಡೆಸಿದ ಇಬ್ಬರು ವ್ಯಕ್ತಿಗಳು, ನನ್ನ ಜತೆ ಮಾತಿನ ಚಕಮಕಿ ಗೆ ಯತ್ನಿಸಿದ್ದರು ಅಂತ ಅವರು ಹೇಳಿದ್ದಾರೆ. ಈ ನಟಿಯ ಸಾಮಾಜಿಕ ಜಾಲತಾಣ ಪೋಸ್ಟ್ ಆಧರಿಸಿ ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಪ್ರಕರಣ ಸುಮೋಟೋ ದಾಖಲಿಸಿಕೊಂಡಿದೆಶನಿವಾರ (ಡಿಸೆಂಬರ್ 19) ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಿದೆ. ಈ ಬಗ್ಗೆ ನಟಿ ಇನ್ನೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎನ್ನಲಾಗಿದೆ.
ಚೆನ್ನೈ : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಇಂದು 70ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಕಾಮನ್ ಡಿಪಿ ಮೂಲಕ ಅಭಿಮಾನಿಗಳು ಸಂಭ್ರಮದಿಂದ ಶುಭ ಹಾರೈಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾ ಮೂಲಕ ತಲೈವಾ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಸೆಲಬ್ರಿಟಿಗಳು ಹಾಗೂ ಅಭಿಮಾನಿಗಳು ಕಾಮನ್ ಡಿಪಿಯನ್ನು ತಮ್ಮ ಫೇಸ್ಬುಕ್, ವಾಟ್ಸಾಪ್ ಸೇರಿ ಇತರ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ರಜಿನಿಗೆ ಹಾರೈಸಿದ್ದಾರೆ.
ರಜಿನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಮುಂಬರಲಿರುವ ‘ಅಣ್ಣಾತೆ’ ಸಿನಿಮಾದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.
ರಜಿನಿಕಾಂತ್12 ಡಿಸೆಂಬರ್1950 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಶಿವಾಜಿರಾವ್ ಗಾಯಕ್ವಾಡ್. ಬೆಂಗಳೂರಿನ ಹನುಮಂತನಗರದಲ್ಲಿ ನೆಲೆಸಿದ್ದ ರಜಿನಿ ಕಾಲೇಜು ಶಿಕ್ಷಣ ಮುಗಿಸಿ ಕಂಡಕ್ಟರ್ ವೃತ್ತಿಗೆ ಸೇರಿದರು. ಬಾಲ್ಯದಿಂದಲೇ ಸಿನಿಮಾ ಹುಚ್ಚಿದ್ದ ರಜಿನಿ ಮದ್ರಾಸ್ಗೆ ತೆರಳಿ ಅಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದರು.
ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ರಜಿನಿಕಾಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. 1975 ರಲ್ಲಿ ಬಿಡುಗಡೆಯಾದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ಆ್ಯಕ್ಟಿಂಗ್ ಆರಂಭಿಸಿದ ರಜಿನಿಕಾಂತ್ ಕನ್ನಡ. ತಮಿಳು, ತೆಲುಗು, ಹಿಂದಿ ಸೇರಿ ನೂರಾರು ಜನಪ್ರಿಯ ಚಿತ್ರಗಳಲ್ಲಿ ನಟಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಚನ್ನೈ: ಖ್ಯಾತ ಕಿರುತೆರೆ ನಟಿ ವಿಜೆ ಚೈತ್ರಾ ನಿಧನ ಖ್ಯಾತ ಕಿರುತೆರೆ ನಟಿ ವಿ.ಜೆ.ಚೈತ್ರಾ ಅವರು ಡಿಸೆಂಬರ್ 9ರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಆಕೆಗೆ 28 ವರ್ಷ. ಚೆನ್ನೈನ ಹೋಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿರುವ ುದಾಗಿ ತಿಳಿದುಬಂದಿದೆ. ವರದಿಗಳ ಪ್ರಕಾರ, ನಿನ್ನೆ ತಮಿಳು ಸೀರಿಯಲ್ ಪಾಂಡಿಯನ್ ಸ್ಟೋರ್ಸ್ ನ ಚಿತ್ರೀಕರಣ ವನ್ನು ಮುಗಿಸಿದ್ದ ಚಿತ್ರಾ, 2.30ರ ಸುಮಾರಿಗೆ ಹೋಟೆಲ್ ರೂಮಿಗೆ ಹಿಂದಿರುಗಿದ್ದರು. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಿಲ್ಪಾಕ್ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದೆ.
ನಜ್ರತ್ ಪೇಟೆ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಜ್ರತ್ ಪೇಟೆ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಟಿಯ ಸಾವಿನ ಸುದ್ದಿಯನ್ನು ತಿಳಿಯುತ್ತಿದ್ದಂತೆ, ಆಕೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ.
ಮುಂಬೈ : ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಸನ್ನಿ ಡಿಯೋಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಕುರಿತಂತೆ ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಸನ್ನಿ ಡಿಯೋಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಕೆಲ ದಿನಗಳ ಕಾಲ ಕುಲ್ಲು ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ ಎಂದು ಹೇಳಿದ್ದಾರೆ.
ಡಿಜಿಟಲ್ ಡೆಸ್ಕ್ : ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ತಮ್ಮ ಮಧುಚಂದ್ರಕ್ಕಾಗಿ ಮಾಲ್ಡೀವ್ಸ್ ಸ್ಥಳಕ್ಕೆ ತೆರಳಿದ್ದಾರೆ.
ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಮಾಲ್ಡೀವ್ಸ್ನಲ್ಲಿ ತಮ್ಮ ಮಧುಚಂದ್ರವನ್ನು ಆನಂದಿಸುತ್ತಿದ್ದಾರೆ. ತಮ್ಮ ಮಧುಚಂದ್ರದಿಂದ ಪತಿ ಗೌತಮ್ ಅವರೊಂದಿಗೆ ಕೆಲವು ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಅಕ್ಟೋಬರ್ 30 ರಂದು ಮುಂಬೈನ ತಾಜ್ ಕೊಲಾಬಾದಲ್ಲಿ ವಿವಾಹವಾಗಿದ್ದರು. ಕಾಜಲ್ ಅಗರ್ವಾಲ್ ಅವರು ತಮ್ಮ ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಅವರನ್ನು ಅಕ್ಟೋಬರ್ 30 ರಂದು ಮದುವೆಯಾಗಿದ್ದರು.
ಡಿಜಿಟಲ್ ಡೆಸ್ಕ್ : ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ತಮ್ಮ ಮಧುಚಂದ್ರಕ್ಕಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ನವೆಂಬರ್ 7 ರಂದು ನಟಿ ಕಾಜಲ್ ಅಗರವಾಲ್ ಈ ಬಗ್ಗೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಅವರು ತಮ್ಮ ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಅವರನ್ನು ಅಕ್ಟೋಬರ್ 30 ರಂದು ಮದುವೆಯಾಗಿದ್ದರು.
ಮುಂಬೈ :ಟಾಲಿವುಡ್ ಬೆಡಗಿ ಕಾಜಲ್ ಅಗರ್ ಆಲ್ ಮುಂಬೈನಲ್ಲಿ ಇಂದುಹಸೆಮಣೆ ಏರಲಿದ್ದಾರೆ. ಉದ್ಯಮಿ ಗೌತಮ್ ಕಿಚ್ಲು ಅವರನ್ನು ಮದುವೆಯಾಗುತ್ತಿರುವ ನಟಿ ಕಾಜಲ್ ಮನೆ ಸಂಭ್ರಮಾಚಣೆಯಿಂದ ಕೂಡಿದೆ.
ವಿವಾಹ ಪೂರ್ವ ಉತ್ಸವಗಳ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರಗಳಲ್ಲಿ, ಕಾಜಲ್ ಹಳದಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಮನೆಯ ಒಳಾಂಗಣ ವಿನ್ಯಾಸ ಕೂಡ ನೋಡುಗರ ಗಮನ ಸೆಳೆಯುತ್ತಿದೆ ಇಂದು ಮುಂಬೈನಲ್ಲಿ ನಟಿ ಕಾಜಲ್ ಮದುವೆ ನಡೆಯಲಿದ್ದು, ಕುಟುಂಬದ ಕೆಲವೇ ಸದಸ್ಯರು ಈ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.
ಮುಂಬೈ :ಟಾಲಿವುಡ್ ಬೆಡಗಿ ಕಾಜಲ್ ಅಗರ್ ಆಲ್ ಮುಂಬೈನಲ್ಲಿ ಶುಕ್ರವಾರ (ಅ.30) ಕಾಜಲ್ ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಆ ಸಂಭ್ರಮದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಜಲ್ ಹಂಚಿಕೊಂಡಿದ್ದಾರೆ.
,ಮಗಧೀರ ನಟಿ ಕಾಜಲ್ ಗೆಳೆಯ ಗೌತಮ್ ಕಿಚಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎರಡೂ ಕೈಗಳಿಗೆ ಮದರಂಗಿ ಹಾಕಿಕೊಂಡಿರುವ ಕಾಜಲ್ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ತಿಳಿ ಹಸಿರು ಬಣ್ಣದ ಪ್ರಿಂಟೆಡ್ ಸಲ್ವಾರ್ ಕಮೀಜ್ ಧರಿಸಿರುವ ಅವರು ಸುಂದರವಾಗಿ ಕಾಣಿಸುತ್ತಿದ್ದಾರೆ. ಕಾಣಿಸುತ್ತಿದ್ದಾರೆ. ಕಾಜಲ್ ಸಹೋದರಿ ನಿಶಾ ಅಗರ್ ವಾಲ್ ಸಹ ಫೊಟೋಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ತಿಂಗಳಷ್ಟೇ ‘ಗೌತಮ್ ಕಿಚಲು ಜೊತೆ ಮದುವೆ ಆಗುತ್ತಿದ್ದೇನೆ ಎಂದು ತಿಳಿಸಲು ನನಗೆ ತುಂಬ ಸಂತೋಷ ಆಗುತ್ತಿದೆ. ಅ.30ರಂದು ನಮ್ಮ ಮದುವೆ ಮುಂಬೈನಲ್ಲಿ ನೆರವೇರಲಿದೆ. ಕುಟುಂಬದ ಕೆಲವೇ ಸದಸ್ಯರು ಈ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಮುಂಬೈ : ನಟಿ ಮಾಲ್ವಿ ಮಲ್ಹೋತ್ರಾ ಮದುವೆಯಾಗಲು ನಿರಾಕರಿಸಿದ್ದರಿಂದ ಫೇಸ್ಬುಕ್ ಸ್ನೇಹಿತ ಸೋಮವಾರ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಮುಂಬೈನ ವರ್ಸೋವಾದ ಫಿಶರೀಸ್ ಯೂನಿವರ್ಸಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಾಲ್ವಿ ಟಿವಿ ಶೋ ಉಡಾನ್ ಮತ್ತು ಹೋಟೆಲ್ ಮಿಲನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಕುಮಾರ್ ಮಹಿಪಾಲ್ ಸಿಂಗ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಆಕೆಗೆ ಇರಿದು ತನ್ನ ಆಡಿ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಇನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ. ದಾಳಿಕೋರನು ಚಲನಚಿತ್ರ ನಿರ್ಮಾಪಕ ಎಂದು ಹೇಳಲಾಗುತ್ತದೆ.
ಅವರು 2019 ರಲ್ಲಿ ಮಾಲ್ವಿಯ ಫೇಸ್ಬುಕ್ ಸ್ನೇಹಿತರಾದರು. ನಂತರ ಅವರು ಕೆಲವು ಬಾರಿ ವೈಯಕ್ತಿಕವಾಗಿ ಭೇಟಿಯಾದರು. ಕುಮಾರ್ ಮಹಿಪಾಲ್ ಸಿಂಗ್ ವಿರುದ್ಧ ಮಾಲ್ವಿ ದೂರು ದಾಖಲಿಸಿದ್ದಾರೆ. ಮಾಲ್ವಿ ತನ್ನ ದೂರಿನಲ್ಲಿ, ಚೋರಿ ಇರ್ದ ವ್ಯಕ್ತಿಯು ಆಕೆಯನ್ನು ಮದುವೆಯಾಗಲು ಬಯಸಿದ್ದ ಎಂದು ಆರೋಪಿಸಿದ್ದಾರೆ. ಮಾಲ್ವಿ ಆತನ ಪ್ರಪೋಸಲ್ ನಿರಾಕರಿಸಿದಾಗ ಮತ್ತು ಅವರೊಂದಿಗೆ ಸಂವಹನ ಮಾಡುವುದನ್ನು ನಿಲ್ಲಿಸಿದಾಗ, ಅವರು ಈ ಕಠಿಣ ಹೆಜ್ಜೆ ಇಡಲು ನಿರ್ಧರಿಸಿದರು.
ಎಫ್ಐಆರ್ ಹೇಳಿಕೆಯಲ್ಲಿ, ಮಾಲ್ವಿ ಅವರು ಅಕ್ಟೋಬರ್ 25 ರಂದು ದುಬೈನಲ್ಲಿ ನಡೆದ ಚಿತ್ರೀಕರಣದಿಂದ ಮರಳಿದ್ದಾರೆ ಎಂದು ಹೇಳಿದರು. ಸೋಮವಾರ ರಾತ್ರಿ, ಕೆಫೆ ಯಿಂದ ಹಿಂದಿರುಗುತ್ತಿದ್ದಾಗ ಆರೋಪಿತನ್ನ ಆಡಿಯಿಂದ ಕೆಳಗಿಳಿದನು, ಅವನು ಅವಳೊಂದಿಗೆ ಮಾತನಾಡಬೇಕೆಂದು ಹೇಳಿದನು. ಮಾಲ್ವಿ ಅವನೊಂದಿಗೆ ಮಾತನಾಡಲು ನಿರಾಕರಿಸಿದಾಗ, ಒಂದು ಚಾಕುವನ್ನು ತೆಗೆದುಕೊಂಡು ಅವಳ ಹೊಟ್ಟೆ, ಬಲ ಮಣಿಕಟ್ಟು ಮತ್ತು ಅವಳ ಎಡಗೈಯ ಬೆರಳಿಗೆ ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ಎಫ್ಐಆರ್ ದಾಖಲಿಸಲಾಗಿದೆ. ಮಾಲ್ವಿ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಅಹಮದಾಬಾದ್: ಗುಜರಾತಿ ಜನಪ್ರಿಯ ನಟ, ರಾಜಕಾರಣಿ ನರೇಶ್ ಕನೋಡಿಯಾ(77) ಅವರು ಕೊರೊನಾದಿಂದಾಗಿ ಮಂಗಳವಾರ ನಿಧನರಾದರು.
ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದದ್ದ ನರೇಶ್ , ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.
ಅ.20 ರಂದು ನರೇಶ್ ಅವರಿಗೆ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದಕ್ಕೂ ಮುನ್ನ ಅವರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೋವಿಡ್ನಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಎರಡು ದಿನಗಳ ಹಿಂದಷ್ಟೇ ನರೇಶ್ ಅವರ ಹಿರಿಯ ಸಹೋದರ, ಗುಜರಾತಿ ಗಾಯಕ ಮಹೇಶ್ ಕನೋಡಿಯಾ ತಮ್ಮ ಗಾಂಧಿನಗರ ನಿವಾಸದಲ್ಲಿ ಮೃತಪಟ್ಟಿದ್ದರು.
ನರೆಶ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ‘ಹಿರಿಯ ನಟ ಮತ್ತು ಮಾಜಿ ಶಾಸಕ ನರೇಶ್ ಕನೋಡಿಯಾ ಅವರ ನಿಧನದಿಂದ ಬೇಸರವಾಗಿದೆ. ಮನರಂಜನೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಣೀಯ’ ಎಂದು ಟ್ವೀಟ್ ಮಾಡಿದ್ದಾರೆ.
ಸಿನಿಮಾ ಡೆಸ್ಕ್ : ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ಇತ್ತೀಚೆಗೆ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ. ಅವರು ಲಕ್ಷಣರಹಿತರಾಗಿದ್ದಾರೆ ಮತ್ತು ಅವರು ಸದ್ಯ ಐಸಲೋಷನ್ ನಲ್ಲಿದ್ದಾರೆ ಎಂದು ಟ್ವಿಟ್ಟರ್ ಮೂಲಕ ನಟ ತಿಳಿಸಿದ್ದಾರೆ.
ಅಯ್ಯಪ್ಪನೂಮ್ ಕೊಶಿಯಮ್ ನಟ ತಮ್ಮ ಮುಂಬರುವ ಚಿತ್ರ ಜನ ಗಣ ಮನ ಚಿತ್ರದ ಚಿತ್ರೀಕರಣದಲ್ಲಿದ್ದರು. ಚಿತ್ರದ ನಿರ್ದೇಶಕ ಡಿಜೊ ಜೋಸ್ ಮತ್ತು ಅನೇಕ ಸಿಬ್ಬಂದಿ ಸದಸ್ಯರು ಕೋವಿಡ್ -19 ಗಾಗಿ ಧನಾತ್ಮಕ ಪರೀಕ್ಷೆ ನಡೆಸಿದ್ದರು. ಆದ್ದರಿಂದ, ಪೃಥ್ವಿರಾಜ್ ಅವರು ಕೋವಿಡ್ -19 ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದರು.
ಅನ್ಲಾಕ್ 5.0 ಸಮಯದಲ್ಲಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸೆಟ್ನಲ್ಲಿ 100 ಜನರೊಂದಿಗೆ ಚಲನಚಿತ್ರ ಶೂಟಿಂಗ್ ನಡೆಸಲು ಸರ್ಕಾರ ಅನುಮತಿ ನೀಡಿದೆ. ಇತ್ತೀಚೆಗೆ, ಪೃಥ್ವಿರಾಜ್ ಅವರು ಕೇರಳದ ಎರ್ನಾಕುಲಂನಲ್ಲಿ ತಮ್ಮ ಮುಂಬರುವ ಚಿತ್ರ ಜನ ಗಣ ಮನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಜನ ಗಣ ಮಾನ ಸಿಬ್ಬಂದಿ ಕೋವಿಡ್ -19 ಗಾಗಿ ಧನಾತ್ಮಕ ಪರೀಕ್ಷೆ ನಡೆಸಿದ ನಂತರ, ಪೃಥ್ವಿರಾಜ್ ಅವರು ಲಕ್ಷಣರಹಿತರಾಗಿದ್ದರೂ ಸ್ವತಃ ಪರೀಕ್ಷಿಸಲು ನಿರ್ಧರಿಸಿದರು. ಇದೀಗ ಕೊರೋನಾ ಪಾಸಿಟಿವ್ ಬಂದಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದಿರುವ ಪೃಥ್ವಿರಾಜ್ , “ನಾನು ಅಕ್ಟೋಬರ್ 7 ರಿಂದ ಡಿಜೊ ಜೋಸ್ ಆಂಥೋನಿ ಅವರ” ಜನ ಗಣ ಮನ “ಚಿತ್ರೀಕರಣದಲ್ಲಿದ್ದೇನೆ. ಕೋವಿಡ್ ನಿಯಮಗಳು ಮತ್ತು ಸಂಬಂಧಿತ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ನಾವು ಕಟ್ಟುನಿಟ್ಟಾದ ಪ್ರೋಟೋಕಾಲ್ಗಳನ್ನು ಹೊಂದಿದ್ದೇವೆ.ಆದರೂ ಕೊರೋನಾ ಟೆಸ್ಟ್ ನಡೆಸಿದಾಗ ಪಾಸಿಟಿವ್ ಎಂದು ಬಂದಿದೆ. ಸದ್ಯ ಐಸಲೂಷನ್ ನಲ್ಲಿದೇನೆ ಎಂದು ಅವರು ತಿಳಿಸಿದ್ದಾರೆ.
ಚೆನ್ನೈ : ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆಯಾದ 800 ಚಿತ್ರದಿಂದ ವಿಜಯ್ ಸೇತುಪತಿ ಹೊರ ಬಂದಿದ್ದಾರೆ.
ತ್ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮುತ್ತಯ್ಯ ಮುರಳೀಧರನ್ ಅವರು ತಮ್ಮ ಜೀವನಚರಿತ್ರೆಯಿಂದ ಹೊರಗುಳಿಯುವಂತೆ ವಿಜಯ್ ಸೇತುಪತಿ ಅವರಿಗೆ ವಿನಂತಿಸಿದ್ದಾರೆ. ಜೀವನಚರಿತ್ರೆ ಘೋಷಿಸಿದಾಗಿನಿಂದಲೂ, ಸೇತುಪತಿ ಮತ್ತು ಇಡೀ 800 ತಂಡದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ಮುರಳೀಧರನ್ ಅವರ ಸ್ಫೋಟಕ ಹೇಳಿಕೆಯ ನಂತರ, ವಿಜಯ್ ಸೇತುಪತಿ ಎಂ.ಎಸ್. ಶ್ರೀಪತಿ ನಿರ್ದೇಶನದ 800 ರಲ್ಲಿ ಈಗ ಹೊರ ಬಂದಿದ್ದಾರೆ.
ಮುತ್ತಯ್ಯ ಮುರಳೀಧರನ್ ತಮ್ಮ ಜೀವನಚರಿತ್ರೆಯ ಚಿತ್ರ 800 ಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 19 ರಂದು ಮತ್ತೊಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದರು. ತಮಿಳುನಾಡಿನಲ್ಲಿ ಅವರ ಬಯೋಪಿಕ್ 800 ವಿರುದ್ಧ ಸಾಕಷ್ಟು ಜನರು ಪ್ರತಿಭಟನೆ ನಡೆಸುತ್ತಿರುವುದರಿಂದ ಅವರು ಹೇಳಿಕೆ ನೀಡಿದ್ದರು. “ವಿಜಯ್ ಸೇತುಪತಿ ಕೆಲವು ಜನರಿಂದ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆಂದು ನನಗೆ ಅರ್ಥವಾಗಿದೆ. ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡ ಜನರಿಂದಾಗಿ ಅವರಂತಹ ಪ್ರಸಿದ್ಧ ನಟ ತೊಂದರೆ ಎದುರಿಸುವುದನ್ನು ನಾನು ಬಯಸುವುದಿಲ್ಲ. ನನಗೆ ವಿಜಯ್ ಸೇತುಪತಿ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದು ಬೇಡ. ಆದ್ದರಿಂದ, ಈ ಜೀವನಚರಿತ್ರೆಯಿಂದ ಹೊರಗುಳಿಯುವಂತೆ ನಾನು ಅವನನ್ನು ಕೇಳುತ್ತಿದ್ದೇನೆ. ” ಎಂದು ಅವರು ಹೇಳಿದ್ದರು.
ವಿಜಯ್ ಸೇತುಪತಿ ತಮ್ಮ ಟ್ವಿಟ್ಟರ್ ಪುಟದಲ್ಲಿ ಮುತ್ತಯ್ಯ ಮುರಳೀಧರನ್ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ ಮತ್ತು ಮಡಿಸಿದ ಕೈಗಳ ಎಮೋಜಿಯಿಂದ ಧನ್ಯವಾದಗಳನ್ನು ಅರ್ಪಿಸಿದರು.
ಹೈದರಾಬಾದ್: ಕೊರೊನಾ ಸೋಂಕಿಗೊಳಗಾಗಿದ್ದ ನಟಿ ತಮನ್ನಾ ಬಾಟಿಯಾ ಇದೀಗ ವೈರಸ್ನಿಂದ ಸಂಪೂರ್ಣವಾಗಿ ಗುಣಮುಖರಾಗಿ, ಮುಂಬೈ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಹೈದರಾಬಾದ್ಗೆ ಜಾಹೀರಾತು ಚಿತ್ರೀಕರಣಕ್ಕಾಗಿ ಬಂದಿದ್ದ ವೇಳೆ ಅವರು ಸೋಂಕಿಗೊಳಗಾಗಿದ್ದರು. ಹೀಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು ಅಕ್ಟೋಬರ್ 6ರಂದು ಡಿಸ್ಚಾರ್ಜ್ ಆಗಿದ್ದರು.
ಇದೀಗ ತಮನ್ನಾ ತನಗೆ ಚಿಕಿತ್ಸೆ ನೀಡಿರುವ ವೈದ್ಯರು ಹಾಗೂ ನರ್ಸ್ಗಳೊಂದಿಗೆ ಫೋಟೋ ಟ್ವಿಟರ್ನಲ್ಲಿ ಹಾಕಿಕೊಂಡಿದ್ದು, ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಬಗ್ಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ನಾನು ತುಂಬಾ ಅನಾರೋಗ್ಯದಿಂದ ಭಯಭೀತಳಾಗಿದ್ದೇನು. ಆದರೆ ಇದೀಗ ಆರೋಗ್ಯವಾಗಿದ್ದು, ದೇವರ ದಯೆ, ವೈದ್ಯರ ಕಾಳಜಿ ನನ್ನನ್ನು ಬಲಿಷ್ಠಗೊಳಿಸಿದೆ ಎಂದಿದ್ದಾರೆ. ಜೊತೆಗೆ ಹಾರೈಸಿದ ಅಭಿಮಾನಿಗಳಿಗೂ ಧನ್ಯವಾದಗಳು ಎಂದಿದ್ದಾರೆ.
ಸಿನಿಮಾಡೆಸ್ಕ್: ಕಂಗನಾ ರಣಾವತ್ ಅವರು ಎ.ಎಲ್ ವಿಜಯ್ ನಿರ್ದೇಶನದ ತಲೈವಿ ಚಿತ್ರದಲ್ಲಿ ಟೈಟಲರ್ ಪಾತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟಿ ಜೆ.ಜಯಲಲಿತಾ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. ದಿವಂಗತ ರಾಜಕೀಯ ನಾಯಕ ಆರು ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದು, ಕಂಗನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಲೈವಿ ಸೆಟ್ ನಲ್ಲಿ ಕೆಲವು ಸುದ್ದಿಗಳನ್ನು ಹಂಚಿಕೊಂಡಿರುವ ನಟಿ, ಜಯಲಲಿತಾ ಅವರನ್ನು ಹೋಲುವಂತಹ ಚಿತ್ರಗಳು ನಿಮ್ಮನ್ನು ಚಕಿತಗೊಳಿಸಲಿದೆ.
ಹೌದು,ತಲೈವಿ ಚಿತ್ರದ ಇತ್ತೀಚಿನ ಶೆಡ್ಯೂಲ್ ಅನ್ನು ಮುಗಿಸಿದ ನಂತರ ಕಂಗನಾ ರನಾವತ್ ಅವರು ಸೆಟ್ ನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಮತ್ತು ಜೆ ಜಯಲಲಿತಾ ಅವರ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಂಗನಾ ಅವರು ಚಿತ್ರದಲ್ಲಿ ಜಯಲಲಿತಾ ಅವರಂತೆಯೇ ಕಪ್ಪು ಬಿಳುಪು ಚಿತ್ರಗಳಿದ್ದು, ಜಯಲಲಿತಾ ಅವರ ಪ್ರತಿಕೃತಿಯಂತೆ ಕಂಗನಾ ಬಣ್ಣ ಹಚ್ಚಿದ್ದಾಳೆ. ಈ ಚಿತ್ರಗಳನ್ನು ಹಂಚಿಕೊಳ್ಳುವಾಗ ಅವಳು ಅದರ ಕ್ಯಾಪ್ಷನ್ ನಲ್ಲಿ , “ಜಯ ಮಾ ಅವರ ಆಶೀರ್ವಾದದಿಂದ ನಾವು ಕ್ರಾಂತಿಕಾರಿ ನಾಯಕಿ ತಲೈವಿಯ ಇನ್ನೊಂದು ಶೆಡ್ಯೂಲ್ ಅನ್ನು ಮುಗಿಸಿದ್ದೇವೆ. ಕರೋನ ನಂತರ ಅನೇಕ ಸಂಗತಿಗಳು ವಿಭಿನ್ನವಾಗಿರುತ್ತವೆ ಅಂತ ಹೇಳಿಕೊಂಡಿದ್ದಾರೆ.
With the blessings of Jaya Ma we completed one more schedule of Thalaivi- the revolutionary leader. After corona many things are different but between action and before cut nothing changes. Thank you team @vishinduri@ShaaileshRSingh#ALVijaypic.twitter.com/CghmfK0JQf
ಚೆನ್ನೈ : ಖ್ಯಾತ ಮಲೆಯಾಳಂ ನಟಿ ಕೆ.ವಿ. ಶಾಂತಿ (81) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
1953ರಲ್ಲಿ ತೆರೆಕಂಡ ತಮ್ಮ ಚೊಚ್ಚಲ ಚಿತ್ರ ‘ಪಡಾಥ ಪೈಂಕಿಲಿ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ನಂತರ ಮಲಯಾಳಂ, ತಮಿಳು ಭಾಷೆಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಗೋವಾ : ಹಾಟ್ ಬೆಡಗಿ ಪೂನಂ ಪಾಂಡೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಇದೀಗ ಅವರು ಬಿಸಿ ಬಿಸಿ ಸುದ್ದಿ ಮೂಲಕ ಚರ್ಚೆಯಲ್ಲಿದ್ದಾರೆ. ದಕ್ಷಿಣ ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ಪತಿ ಸ್ಯಾಮ್ ಅಹ್ಮದ್ ವಿರುದ್ಧ ಪೂನಂ ಪಾಂಡೆ (29) ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 504, 354 ಮತ್ತು 506 (ii) ರ ಅಡಿಯಲ್ಲಿ ದಾಖಲಾದ ಎಫ್ಐಆರ್ನಲ್ಲಿ, ಆರೋಪಿ ಸ್ಯಾಮ್ (46), ನನ್ನ ಮೇಲೆ ಹಲ್ಲೆ ನಡೆಸಿ “ವೈಯಕ್ತಿಕ ವಿವಾದ” ಹಿನ್ನೆಲೆಯಲ್ಲಿ ಕಪಾಳಮೋಕ್ಷ ಮಾಡಿದ್ದಾನೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾಳೆ.
ಈ ವರ್ಷ ಸೆಪ್ಟೆಂಬರ್ 10 ರಂದು ಇವರಿಬ್ಬರು ವಿವಾಹವಾಗಿದ್ದರು ಮತ್ತು ಇಬ್ಬರೂ ಗೋವಾಕ್ಕೆ ಭೇಟಿ ನೀಡಿ ಮದುವೆಯಾಗಿದ್ದರು, ಪೂನಮ್ ತನ್ನ ಅಧಿಕೃತ ಖಾತೆಯಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಸ್ಯಾಮ್ ಅವರೊಂದಿಗಿನ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ತಮ್ಮ ಮದುವೆಯ ಉಡುಪಿನಲ್ಲಿ ದಂಪತಿಗಳ ಚಿತ್ರಗಳ ಸರಣಿಯನ್ನು ಹಂಚಿಕೊಂಡ ಪೂನಮ್, “ಇಲ್ಲಿ ನಿಮ್ಮೊಂದಿಗೆ ಏಳು ಜೀವಿತಾವಧಿಯನ್ನು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು.
ಜುಲೈ 2020 ರಲ್ಲಿ, ಪೂನಂ ಪಾಂಡೆ ಮತ್ತು ಸ್ಯಾಮ್ ತಮ್ಮ ಉಂಗುರವನ್ನು ತೋರಿಸುವ ಮೂಲಕ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು. “ನಾವು ಅಂತಿಮವಾಗಿ ಇದನ್ನು ಮಾಡಿದ್ದೇವೆ!” ಎಂಬ ಶೀರ್ಷಿಕೆಯೊಂದಿಗೆ ಸ್ಯಾಮ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಹೈದರಾಬಾದ್ : ತೆಲುಗು ಜನಪ್ರಿಯ ಕಿರುತೆರೆ ನಟಿ ಶ್ರಾವಣಿ ಹೈದರಾಬಾದ್ನ ಎಸ್.ಆರ್. ನಗರದ ಮಧುರಾ ನಗರದಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಶ್ರಾವಣಿ ಹೈದರಾಬಾದ್ನದಲ್ಲಿ ವಾಸಿಸುತ್ತಿದ್ದರು. ‘ಮನಸು ಮಮತ’ ಹಾಗೂ ‘ಮೌನರಾಗಂ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಟಿಕ್ಟಾಕ್ನಲ್ಲಿ ಪರಿಚಯವಾದ ದೇವರಾಜು ರೆಡ್ಡಿ ಪ್ರೀತಿಯ ನಾಟಕವಾಡಿ, ಖಾಸಗಿ ಪೋಟೋ ತೆಗೆದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದನು ಎಂದು ಶ್ರಾವಣಿ ಎಸ್.ಆರ್. ನಗರದಲ್ಲಿ ದೂರು ನೀಡಿದ್ದಳು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ದೇವರಾಜು ರೆಡ್ಡಿಯ ಕಿರುಕುಳ ಹೆಚ್ಚಾದ ಬಳಿಕ ಶ್ರಾವಣಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಡಿಜಿಟಲ್ಡೆಸ್ಕ್: ಮನಸು ಮಮತಾ ಧಾರಾವಾಹಿಯಲ್ಲಿ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ತೆಲುಗು ಟಿವಿ ನಟ ಶ್ರಾವಣಿ ಸೆಪ್ಟೆಂಬರ್ 8, 2020 ರಂದು ರಾತ್ರಿ 9-10 ರ ನಡುವೆ ಹೈದರಾಬಾದ್ನ ಮಧುರನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಆತ್ಮಹತ್ಯೆ ಮಾಡಿಕೊಂಡಿರುವ ನಟಿ ಶ್ರಾವಣಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಇನ್ನೂ ನಟಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ನಡುವೆ ಕೆಲವು ದಿನಗಳ ಹಿಂದೆ ಆಕೆಗೆ ಕಿರುಕುಳ ನೀಡಿದ ದೇವರಾಜ್ ರೆಡ್ಡಿ ಅವರನ್ನು ಕುಟುಂಬ ಸದಸ್ಯರು ದೂಷಿಸಿದ್ದು ನ್ಯಾಯಾಕ್ಕಾಗಿ ಮನವಿ ಮಾಡಿದ್ದಾರೆ. ದೇವರಾಜ್ ತಮ್ಮ ಮಗಳಿಗೆ ಕಿರುಕುಳ ನೀಡಿದ್ದದ್ದಾರೆ ಆದಾದ ಘಟನೆಯ ನಂತರ ಶ್ರಾವಣಿ ತುಂಬಾ ಆತಂಕಕ್ಕೊಳಗಾದರು ಮತ್ತು ಉದ್ವಿಗ್ನತೆ ಹೊಂದಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.
ಹೈದರಾಬಾದ್: ಟಾಲಿವುಡ್ ಹಿರಿಯ ನಟ ಜಯಪ್ರಕಾಶ ರೆಡ್ಡಿ (74) ಇಂದು ಗುಂಟೂರಿನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ತಮ್ಮ ಸ್ನಾನದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಮೂಲತಃ ಕರ್ನೂಲ್ ಜಿಲ್ಲೆಯ ಆಳ್ಲಗಡ್ಡ ಮೂಲದವರಾದ ನಟ ಜಯಪ್ರಕಾಶ ರೆಡ್ಡಿ ಲಾಕ್ಡೌನ್ ಶುರುವಾದಾಗಿನಿಂದ ಗುಂಟೂರು ನಗರದಲ್ಲಿ ವಾಸವಿದ್ದರು ಎನ್ನಲಾಗಿದೆ.
ಚನ್ನೈ: ಕರೋನ ಸೊಂಕಿನಿಂದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗುಣಮುಖರಾಗಿದ್ದು, ಈ ಸುದ್ದಿಯನ್ನು ಅವರ ಪುತ್ರ ಚರಣ್ ಅವರು ಖಚಿತಪಡಿಸಿದ್ದಾರೆ.
ಸದ್ಯ ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತ ಇದೇ ವೇಳೆ ಅವರು ಹೇಳಿದ್ದು, ಇದೇ ವೇಳೆ ಅವರು ನನ್ನ ತಂದೆಯವರ ಆರೋಗ್ಯ ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಸಮಯಬೇಕಾಗಿದ್ದು, ಕೆಲವು ದಿನದ ಹಿಂದೆ ನನ್ನ ತಂದೆ ತಾಯಿ ತಮ್ಮ ಮದ್ವೆಯ ಸಂಭ್ರವನ್ನು ಆಚರಣೆ ಮಾಡಿಕೊಂಡರು. ಇನ್ನೂ ನನ್ನ ತಂದೆ ಟಿವಿಯಲ್ಲಿ ಬರುವ ಕಾರ್ಯಕ್ರಮವನ್ನು ನೋಡುತ್ತಿದ್ದು, ನಿಮ್ಮೆಲ್ಲರ ಹಾರೈಕೆಯಿಂದ ನನ್ನ ತಂದೆ ಕರೋನವನ್ನು ಗೆದಿದ್ದಾರೆ ಅಂತ ಚರಣ್ ಹೇಳಿದ್ದಾರೆ.
ನ್ಯೂಸ್ ಡೆಸ್ಕ್ : ದಕ್ಷಿಣ ಭಾರತದ ಸುಂದರ ಟಾಪ್ ನಟಿ ಸಮಂತಾ ಅಕ್ಕಿನೇನಿಯವರ ಬ್ಯಾಚುಲರ್ ಡಿಗ್ರಿ (ಕಾಮರ್ಸ್) ಸರ್ಟಿಫಿಕೇಟ್ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ಲೀಕ್ ಮಾಡಿದ್ದು ಇದನ್ನು ನೋಡಿ ಸ್ವತಃ ನಟಿ ಶಾಕ್ ಆಗಿದ್ದಾರೆ.
ಅಭಿಮಾನಿಯೊಬ್ಬ ತನ್ನ ಬ್ಯಾಚುಲರ್ ಪದವಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವುದನ್ನು ನೋಡಿದ ನಟಿ ಶಾಕ್ ಆಗಿದ್ದಾರೆ. ಅಭಿಮಾನಿಯೊಬ್ಬರು ಸಮಂತಾ ಅಕ್ಕಿನೇನಿಯ ವಾಣಿಜ್ಯ ಪದವಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ತನ್ನ ಬ್ಯಾಚುಲರ್ ಪದವಿಯ ಚಿತ್ರವನ್ನು ಅಭಿಮಾನಿಯೊಬ್ಬರು ಹೇಗೆ ಹಿಡಿದಿದ್ದಾರೆಂದು ನೋಡಿ ನಟಿ ಆಘಾತಕ್ಕೊಳಗಾದರು. ಇದು ಹೇಗೆ ನಿಮಗೆ ಸಿಕ್ಕಿದೆ ಎಂದು ರೀ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳು ಮತ್ತು ಅನುಯಾಯಿಗಳು ಸಮಂತಾ ಅವರ ವಾಣಿಜ್ಯ ಪದವಿಯ ಫೋಟೋವನ್ನು ನೋಡಿದಾಗ ಅಷ್ಟೇ ಆಶ್ಚರ್ಯಚಕಿತರಾದರು. ಆದರೆ, ನಂತರ ಅನೇಕ ಜನರ ಆಶ್ಚರ್ಯಕ್ಕೆ, ಸಮಂತಾ ಅಕ್ಕಿನೇನಿಯ ಬ್ಯಾಚುಲರ್ ಪದವಿಯ ಚಿತ್ರವನ್ನು ಯಾವುದೇ ಕಾರಣವನ್ನು ನೀಡದೆ ಅಭಿಮಾನಿ ಫೋಟೋವನ್ನು ಡಿಲಿಟ್ ಮಾಡಿದ್ದಾನೆ.
ಸಮಂತಾ ಅಕ್ಕಿನೇನಿ ಜಾನು ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ಅಭಿನಯದ ಸೌತ್ ಫ್ಲಿಕ್ 96 ರ ರೀಮೇಕ್ ಆಗಿತ್ತು. ಮಜೀಲಿ ನಟಿ ಸಮಂತಾ ಅಕ್ಕಿನೇನಿ ಮತ್ತು ದಕ್ಷಿಣ ನಟ ಶರ್ವಾನಂದ್ ಜೊತೆ ಜಾನು ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಅಲ್ಲದೇ ಪತಿ ಜೊತೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಮತ್ತೊಂದು ಫ್ಯಾನ್ ಪೇಜ್ ಸಮಂತಾ ಅವರ ಎಂಟನೇ ತರಗತಿ ಸರ್ಟಿಫಿಕೇಟ್ ಪೋಸ್ಟ್ ಮಾಡಿ, ಟಾಪರ್ ಯಾವಾಗಲೂ ಟಾಪರ್ ಆಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಸಿನಿಮಾಡೆಸ್ಕ್: ನಟ ರಾಣಾ ದಗ್ಗುಬಾತಿ ಈಗ ಗೆಳತಿ ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ನಡುವೆ ಅವರ ನಿಶ್ಚಿತಾರ್ಥದ ಸಮಾರಂಭದ ಕೆಲವು ಸುಂದರವಾದ ಚಿತ್ರಗಳನ್ನು ರಾಣಾ ದಗ್ಗುಬಾತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ನಡುವೆ ಬುಧವಾರವೇ ರಾಣಾ ಮತ್ತು ಮಿಹೀಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿರುವ ರಾಣಾ ‘ಈಗ ಇದು ಅಧಿಕೃತ’ ಎಂದಿದ್ದಾರೆ. ಇಂಟಿರೀಯರ್ ಡಿಸೈನ್ನಲ್ಲಿ ಡಿಪ್ಲೋಮಾ ಗಳಿಸಿದ ನಂತರದಲ್ಲಿ ಲಂಡನ್ನ ಚೆಸ್ಲಿಯಾ ಯುನಿವರ್ಸಿಟಿ ಆಫ್ ಆರ್ಟ್, ಡಿಸೈನ್ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿರುವ ಮಿಹೀಕಾDew Drop Design Studio ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಸ್ಥಾಪಕಿಯಾಗಿದ್ದಾರೆ. ಇದಲ್ಲದೇ , ‘ಡಿಸೈನ್ ಪಟಾಕಿ’ಯಲ್ಲಿ ಬರಹಗಾರ್ತಿಯಾಗಿದ್ದಾರೆ.
ಮುಂಬೈ : ಹಿಂದಿಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ‘ಕಹಾನಿ ಘರ್ ಘರ್ ಕಿ’ ಧಾರಾವಾಹಿಯ ನಟ ಸಚಿನ್ ಕುಮಾರ್ ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದಿ ಕಿರುತೆರೆ ನಟರಾದ ರಾಕೇಶ್ ಪೌಲ್, ಚೇತನ್ ಹನ್ಸರಾಜ್, ವಿನೀತ್ ರೈನಾ, ಸುರಭಿ ತಿವಾರಿ ಮುಂತಾದವರು ಸಚಿನ್ ನಿಧನ ಸುದ್ದಿಯಿಂದ ಶಾಕ್ ಆಗಿದ್ದು ಸಂತಾಪ ಸೂಚಿಸಿದ್ದಾರೆ.
ಹಲವು ವರ್ಷಗಳಿಂದ ಸಚಿನ್ ಬಣ್ಣದ ಬದುಕಿನಿಂದ ದೂರ ಉಳಿದು ಫೋಟೋಗ್ರಫಿಯಲ್ಲಿ ತೊಡಗಿಕೊಂಡಿದ್ದರು. ಇವರ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿರುವ ಗೆಳೆಯ ರಾಕೇಶ್ ಪೌಲ್ ‘ ಸಾವಿನ ಸುದ್ದಿ ಶಾಕ್ ತಂದಿದೆ. ಆತನನ್ನು ಕೊನೆಯ ಬಾರಿ ನೋಡಲು ಸಾಧ್ಯವಾಗಲಿಲ್ಲ. ಮನೆಯಲ್ಲಿಯೆ ಸಾವನ್ನಪ್ಪಿದ್ದಾರೆ. ತನ್ನ ಕೊಠಡಿ ಬಾಗಿಲು ಹಾಕಿಕೊಂಡು ರಾತ್ರಿ ಮಲಗಿದವರು ಬೆಳಗ್ಗೆ ಬಾಗಿಲು ತೆಗೆದಿರಲಿಲ್ಲ. ಅವರ ತಂದೆತಾಯಿ ಸಾಕಷ್ಟು ಪ್ರಯತ್ನಿಸಿ ಕೊನೆಗೆ ಬಾಗಿಲು ತೆರೆದು ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಬಹುಶಃ ತಡರಾತ್ರಿ ಅಥವಾ ಮುಂಜಾನೆ ಅವರಿಗೆ ಹೃದಯಾಘಾತವಾಗಿರಬಹುದು” ಎಂದಿದ್ದಾರೆ.
ಸಿನಿಮಾ ಡೆಸ್ಕ್ : ದೇಶದಲ್ಲಿ ಕೊರೊನಾ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ, ಇನ್ನೂ ಕೊರೋನಾಲಾಕ್ಡೌನ್ನಿಂದಾಗಿಸಾಕಷ್ಟುಶುಭಸಮಾರಂಭಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅದ್ಧೂರಿಯಾಗಿಮದುವೆ ಯೋಜನೆ ಹಾಕೊಂಡಿದ್ದಸೆಲೆಬ್ರಿಟಿಗಳುಕೂಡತಮ್ಮಮದುವೆಯವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ಇನ್ನು ಕೆಲ ಸೆಲೆಬ್ರಿಟಿಗಳು ಸರಳವಾಗಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕನ್ನಡದ ನಟ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ ಸರಳವಾಗಿ ವಿವಾಹವಾಗಿದ್ದರು. ಇದೀಗ ಟಾಲಿವುಡ್ ನಟ ನಿಖಿಲ್ಸಿದ್ಧಾರ್ಥ್ ಹಸೆಮಣೆ ಏರಲಿದ್ದಾರೆ. ಗೆಳತಿ ಪಲ್ಲವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಮೇ 14ರಂದು ಈ ಜೋಡಿ ವಿವಾಹವಾಗುತ್ತಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ ನಿಖಿಲ್ ಮತ್ತು ಪಲ್ಲವಿ ವಿವಾಹ ಏ.16ರಂದು ನಡೆಯ ಬೇಕಿತ್ತು. ಆದರೆ ಕೊರೋನಾ ಲಾಕ್ಡೌನ್ನಿಂದಾಗಿ ವಿವಾಹ ದಿನಾಂಕ ಮುಂದೂಡಿಕೆ ಆಯಿತು. ಇದೀಗ ನಿಖಿಲ್ ತಮ್ಮ ಫಾರ್ಮ್ಹೌಸ್ನಲ್ಲಿ ಸರಳ ವಿವಾಹವಾಗುತ್ತಿದ್ದಾರೆ. ಆದರೆ ಮದುವೆಗೆ ಕೆಲವೇ ಕೆಲವು ಮಂದಿ ಸ್ನೇಹಿತರು, ಸಂಬಂಧಿಕರಿಗೆ ಮಾತ್ರ ಆಹ್ವಾನವಂತೆ.
ಸಿನಿಮಾ ಡೆಸ್ಕ್ : ತಮ್ಮ ಮುಂಬರುವ ಚಿತ್ರ ಕಾಡಾನ್ ಬಿಡುಗಡೆಗಾಗಿ ಕಾಯುತ್ತಿರುವ ಟಾಲಿವುಡ್ ನ ಜನಪ್ರಿಯ ನಟ ರಾನಾ ದಗ್ಗುಬಾಟಿ ತಮ್ಮ ಸಂಗಾತಿಯ ಫೋಟೋವನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂಗಾತಿಯನ್ನು ಪರಿಚಯಿಸಿದ್ದಾರೆ.
ಹೌದು ತೆಲುಗಿನ ಹ್ಯಾಂಡ್ಸಮ್ ನಟ ರಾನಾ ಇಂದು ಗೆಳತಿ ಮಿಹೀಕಾ ಬಜಾಜ್ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದಾರೆ.And she said Yes ಎಂಬ ಶೀರ್ಷಿಕೆಯೊಂದಿಗೆ ರಾನಾ ಮಿಹಿಕಾ ಜೊತೆಗಿನ ಮುದ್ದಾದ ಫೊಟೋವನ್ನು ಶೇರ್ ಮಾಡಿದ್ದಾರೆ.
ಎನ್ಟಿಆರ್ ಕಥಾನಾಯಕುಡು ನಟ ತನ್ನ ಗೆಳತಿಗೆ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಮುಂದಿಟ್ಟು, ನಂತರ ಆಕೆ ಯೆಸ್ ಎಂದಳು ಎಂದು ಬರೆದುಕೊಂಡಿದ್ದಾರೆ.
ಅವರು ಫೋಟೋವನ್ನು ಪೋಸ್ಟ್ ಮಾಡಿದ ತಕ್ಷಣ, ಚಿತ್ರ ರಂಗದ ಮಿತ್ರರು, ಸಹೋದ್ಯೋಗಿಗಳು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಶ್ರುತಿ ಹಾಸನ್, ಸಮಂತಾ ಅಕ್ಕಿನೇನಿ ಮತ್ತು ಹನ್ಸಿಕಾ, ದುಲ್ಖರ್ ಸಲ್ಮಾನ್,ಅನಿಲ್ ಕಪೂರ್, ಅಲ್ಲ್ಲು ಶಿರಿಸ್ ಸೇರಿ ಹಲವರು ರಾನಾಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಿಹೀಕಾ ಬಜಾಜ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋದ ಸ್ಥಾಪಕರಾಗಿದ್ದಾರೆ. ವರದಿಗಳ ಪ್ರಕಾರ, ಮುಂಬೈ ಮೂಲದ ಮಿಹೀಕಾ ಹೈದರಾಬಾದ್ನಲ್ಲಿ ಹುಟ್ಟಿ ಬೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಸ್ ಡೆಸ್ಕ್ : ಕೊರೊನಾ ವೈರೆಸ್ ಹಿನ್ನೆಲೆಯಲ್ಲಿ ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ. ಈ ರೀತಿ ನಾಲ್ಕು ತಿಂಗಳುಗಳ ಕಾಲ ಆಸ್ಕರ್ ಕಾರ್ಯಕ್ರಮವನ್ನು ಮುಂದೂಡಿರುವುದು 93 ವರ್ಷಗಳಲ್ಲಿ ಇದೇ ಮೊದಲ ಬಾರಿ ಎಂದು ತಿಳಿದು ಬಂದಿದೆ.
ಆಸ್ಕರ್ ಆಯೋಜಕರು ಈ ಕಾರ್ಯಕ್ರಮವನ್ನು ಇದೇ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಸುವಂತೆ ಕೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಆದ್ರೆ ಈ ಕಾರ್ಯಕ್ರಮವು ಮುಂದಿನ ವರ್ಷ ಫೆಬ್ರವರಿ 28ಕ್ಕೆ ಮುಂದೂಡಲಾಗಿದೆ.ಈ ಕಾರ್ಯಕ್ರಮ ಪ್ರತಿ ವರ್ಷ ಬೇಸಿಗೆ ನಂತರ ನಡೆಯುತ್ತಿದ್ದು, ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನವೆಂಬರ್ ಮತ್ತು ಡಿಸೆಂಬರ್ನಲ್ಲಿ ನಾಮಿನೇಷನ್ಗೆ ಕಳುಹಿಸುತ್ತಿದ್ದರು.
ಈ ವರ್ಷ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಸಿನಿಮಾ ಶೂಟಿಂಗ್ ಗಳು ಸ್ಥಬ್ಧವಾದ ಹಿನ್ನೆಲೆಯಲ್ಲಿ ಆಸ್ಕರ್ ಆಯೋಜಕರು ಈಗಿರುವ ಸಿನಿಮಾಗಳು ರಿಲೀಸ್ ಆದ ಮೇಲೆ, ಅಂದ್ರೆ ಕೆಲವು ತಿಂಗಳ ನಂತರ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಮಾತುಕತೆ ನಡೆಸಿದ್ದಾರೆ.ತಿಳಿಸಿದ್ದಾರೆ ಎನ್ನಲಾಗಿದೆ.
ಸ್ಪೆಷಲ್ ಡೆಸ್ಕ್ : ವಿಶ್ವದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನೂ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್ ಡೇವಿಡ್ ವಾರ್ನರ್, ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ಮುದಗೊಳಿಸುತ್ತಿದ್ದಾರೆ.
ಇತ್ತಿಚೆಗಷ್ಟೇ ತಮ್ಮ ಮಗಳಿಗಾಗಿ ಅಧಿಕೃತವಾಗಿ ಟಿಕ್ಟಾಕ್ ಆಪ್ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್ಮನ್ ವಾರ್ನರ್, ಹಲವು ಡ್ಯಾನ್ಸ್ ಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದರಲ್ಲಿ ಭಾರತೀಯ ಹಾಡುಗಳೂ ಸೇರಿವೆ.
ಐಪಿಎಲ್ ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿರುವ ವಾರ್ನರ್ ತಮ್ಮ ಅಭಿಮಾನಿಗಳಿವಾಗಿ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಅಲಾ ವೈಕುಂಠಪುರಮುಲೋ ಸಿನಿಮಾದ ‘ಬುಟ್ಟ ಬೊಮ್ಮ’ಗೆ ಸಖತ್ ಸ್ಟೆಪ್ ಹಾಕಿ ಮಿಂಚಿದ್ದಾರೆ. ಪತ್ನಿ ಕ್ಯಾಂಡೀಸ್ ವಾರ್ನರ್ ಕೂಡ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಈ ಹಿಂದೆ ವಾರ್ನರ್ ಮುದ್ದಿನ ಮಗಳು ಐವೀ ಜೊತೆ ಕಟ್ರೀನಾ ಕೈಫ್ ಅವರ ಸೂಪರ್ ಹಿಟ್ ‘ಶೀಲಾ ಕಿ ಜವಾನಿ’ ಹಾಡಿಗೆ ಸ್ಟೆಪ್ ಹಾಕಿದ್ದರು.
ಸಿನಿಮಾ ಡೆಸ್ಕ್ : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ, ಈ ಹಿನ್ನೆಲೆ ಸಿನಿಮಾ ನಟ ನಟಿಯರು ಮನೆಯಲ್ಲೇ ಕುಳಿತು ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ನಡುವೆ ನಟಿ ನಿಧಿ ಅಗರವಾಲ್ ಸಾಮಾಜಿಕ ಜಾಲತಾಣದಲ್ಲಿ ಪ್ಯಾಂಟ್ ಜಿಪ್ ಹಾಕದೇ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ಸಮಯ ಸಿಕ್ಕಾಗಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ನಟಿ ಇದೀಗ ಜಿಪ್ ಹಾಕದೇ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ಟೀಕೆಗೆ ಕಾರಣವಾಗಿದೆ.
ಸಿನಿಮಾ ಡೆಸ್ಕ್ : ಬಾಹುಬಲಿ ಸಿನಿಮಾದ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಬಿಗ್ ಪ್ರಾಜೆಕ್ಟ್ ಆರ್ ಆರ್ ಆರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಚಿತ್ರೀಕರಣದ ಕೆಲಸ ಅರ್ಧಕ್ಕೆ ನಿಂತಿದೆ. ಈ ನಡುವೆ ಆಲಿಯಾ ಭಟ್ ರಾಜಮೌಳಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ಯೆಸ್, ಅದೇನಪ್ಪ ಅಂದ್ರೆ ರಾಮ್ ಚರಣ್ ಮತ್ತು ಜೂ.ಎನ್ಟಿಆರ್ ನಾಯಕತ್ವದ ‘ಆರ್ಆರ್ಆರ್’ ಚಿತ್ರದಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಎಂಬ ವಿಚಾರ ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. . ಇನ್ನು, ರಾಮ್ ಚರಣ್ಗೆ ಆಲಿಯಾ ಭಟ್ ನಾಯಕಿ ಎನ್ನಲಾಗಿತ್ತು. ಜೊತೆಗೆ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆ ಎಂಬ ಸುದ್ದಿ ಕೂಡ ಹರಡಿತ್ತು.
ಆದರೆ ಈ ವಿಚಾರದ ಕುರಿತು ರಾಜಮೌಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ತ್ರಿಕೋನ ಪ್ರೇಮಕಥೆ ಇಲ್ಲ. ಅಲ್ಲದೆ, ಇಬ್ಬರು ಹೀರೋಗಳಿಗೂ ಆಲಿಯಾ ಭಟ್ ಜೋಡಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ರಾಜಮೌಳಿ ಹೇಳಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇನ್ನೂ, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕ್ಯುರಿಯಾಸಿಟಿ ಇದ್ದು, ಸಿನಿಮಾ ಬಿಡುಗಡೆ ದಿನಾಂಕಕ್ಕಾಗಿ ಎದುರು ನೋಡುತ್ತಿದ್ದಾರೆ.