Bollywood – #1 Latest News Updates Portal – 24×7 | Kannada News Now
Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಬೆಂಗಳೂರು: ನಮ್ಮಲ್ಲಿ ಕೆಲವು ಮಂದಿ ಕನ್ನಡವನ್ನು ಉಳಿಸಿ, ಉಳಿಸಿ ಅಂತ ಪ್ರತಿ ದಿನ ಹೇಳುವುದನ್ನು ನೋಡಿದ್ದೀವಿ, ಆದರೆ ಉಳಿಸಿ ಎನ್ನುವ ಪದಕ್ಕೆ ವಿರೋಧ ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎಂದು ಹೇಳಿ ಅಂಥ ಜನತೆ ಬಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಮನಗರ ತಾಲೂಕಿನ ಬಿಡದಿಯಲ್ಲಿ ತಮ್ಮನ್ನು ಭೇಟಿಯಾದ ಅಭಿಮಾನಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತ ಈ ಬಗ್ಗೆ ಹೇಳಿದರು, ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಕನ್ನಡದ ಶಾಲು ಹಾಕಿ ಮನೆಗೆ ಬಂದರೆ ಖುಷಿ ಪಡಬೇಕಾ, ಇಲ್ಲ ಭಯ ಪಡಬೇಕಾ ಎಂದು ಗೊತ್ತಾಗಲ್ಲ ನನಗೆ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದರು.
ಕನ್ನಡ ಉಳಿಸಬೇಕು ಎನ್ನುವುದರಿಂದ ನಾವು ವೀಕ್ ಆಗ್ತಾ ಹೋಗ್ತೀವಿ, ಕನ್ನಡದ ಮೇಲೆ ಅಭಿಮಾನ ಇಲ್ಲದವರನ್ನು ಬಿಟ್ಟು ಬಿಡಿ, ಅದರ ಬದಲೂ ಕೋಟಿ ಸಂಖ್ಯೆಯಲ್ಲಿರುವ ಕನ್ನಡಿಗರನ್ನು ಗಮನಿಸೋಣ, ಕನ್ನಡ ಕಿತ್ತುಕೊಳ್ಳುವ ಧೈರ್ಯ ಯಾರಿಗೆ ಇದೇ ಹೇಳಿ ನೋಡೋಣ ಅಂತ ಹೇಳಿದರು.
ನವದೆಹಲಿ: ಟಿವಿ ನಟಿ ರುಬಿನಾ ದಿಲಿಕ್ ಬಿಗ್ ಬಾಸ್ 14ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.ಈ ಮೂಲಕ ಹಿಂದಿಯ ಬಿಗ್ ಬಾಸ್ ಸೀಸನ್ 14ನ 140 ದಿನಗಳ ತಾಳ್ಮೆ, ತಾಳ್ಮೆ ಮತ್ತು ದೈಹಿಕ ಮತ್ತು ಮಾನಸಿಕ ಶಕ್ತಿಗಳ ಪಯಣ ಭಾನುವಾರ ಕೊನೆಯಾಗಿದೆ.
ಮುಂಬೈ: ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ದಂಪತಿ ಎರಡನೇ ಗಂಡು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ನಿನ್ನೆ ರಾತ್ರಿ ಕರೀನಾ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಫೆಬ್ರವರಿ 21) ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮುಂಬೈ : ತಮ್ಮ ಗೆಳೆಯ ವೈಭವ್ ರೇಖಿ ಜೊತೆ ದಿಯಾ ಮಿರ್ಜಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಮದುವೆ ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸರಳವಾಗಿ ನದೆಯಿತು.
ಸಮಾರಂಭದ ನಂತರ ಕೆಂಪು ಬಣ್ಣದ ಸೀರೆ ಧರಿಸಿ ದಿಯಾ ಮಿರ್ಜಾ, ಪತಿಯೊಂದಿಗೆ ಮಾಧ್ಯಮಗಳಿಗೆ ಪೋಸ್ ನೀಡಿದರು. ನಂತರ ಮಾಧ್ಯಮಗಳಿಗೂ ಸಿಹಿ ಹಂಚಿದರು.
ತನ್ನ ಮದುವೆ ಲುಕ್ ಗಾಗಿ ದಿಯಾ ಹೊಳೆಯುವ ಕೆಂಪು ಬನಾರಸಿ ಸೀರೆಯನ್ನು ಆಯ್ಕೆ ಮಾಡಿಕೊಂಡು, ನೆಕ್ ಪೀಸ್, ಕಿವಿಯೋಲೆ, ಮುಂದಾಲೆ ಸೇರಿದಂತೆ ಭಾರಿ ಆಭರಣಗಳಿಂದ ಈ ನಟಿ ತನ್ನ ಉಡುಗೆಗೆ ಆಕ್ಸೆಸರೀಸ್ ಮಾಡಿದ್ದರು.
ದಿಯಾ ಮಿರ್ಜಾ ಈ ಮೊದಲು ಉದ್ಯಮಿ ಸಾಹಿಲ್ ಸಂಘಾ ಅವರನ್ನು ಮದುವೆಯಾಗಿದ್ದರು. 2019ರ ಆಗಸ್ಟ್ ನಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದಿದ್ದರು. ನಂತರ ದಿಯಾ ಮುಂಬೈ ಮೂಲದ ಉದ್ಯಮಿ, ಹಣಕಾಸು ಹೂಡಿಕೆದಾರ ಮತ್ತು ಪಿರಮಲ್ ಫಂಡ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ವೈಭವ್ ರೇಖಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು.
ಕೆಎನ್ಎನ್ಸಿನಿಮಾಡೆಸ್ಕ್: ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾದ ಟೀಸರ್ ಪ್ರೇಮಿಗಳ ದಿನಕ್ಕೆ ರಿಲೀಸ್ ಆಗಿದೆ. ಪ್ರೇಮದ ಹೂರಣವಿರುವ ಚಂದದ ಟೀಸರ್ ಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರೇಮ್ ಗೆಟಪ್, ಬೃಂದಾ-ಐಂದ್ರಿತಾ ನಟನೆ, ಬ್ಯಾಕ್ ಗ್ರೌಂಡ್ ಮ್ಯೂಸಿಕ್, ರಾಘವೇಂದ್ರ ಡೈರೆಕ್ಷನ್, ನವೀನ್ ಕ್ಯಾಮರಾ ವರ್ಕ್ ಟೀಸರ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು, ಸಿನಿರಸಿಕರು ಸಿಂಪಲ್ಲಿ ಸೂಪರ್ ಅಂತಿದ್ದಾರೆ.
ಸಿನಿಮಾದಲ್ಲಿ ಪ್ರೇಮ್ ಯಂಗ್ ಲವರ್ ಬಾಯ್ ಗೆಟಪ್ ನಲ್ಲಿ ಮಿಂಚಿದ್ದು, ಪ್ರೀತಿಯ ಆರಾಧಕನಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಪ್ರೇಮ್ ಗೆ ಜೋಡಿಯಾಗಿ ಬೃಂದಾ ಹಾಗೂ ಐಂದ್ರಿತಾ ನಟಿಸಿದ್ದಾರೆ.
ಪ್ರೇಮ್ ನಟಿಸ್ತಿರುವ 25 ಸಿನಿಮಾ ಇದಾಗಿದ್ದು, ಹೀಗಾಗಿ ನಿರೀಕ್ಷೆಗಳು ದುಪ್ಪಟ್ಟಿವೆ. ಹೊಸತನದ ಹೊಸ ಪ್ರಯತ್ನದ ಈ ಕಥೆಗೆ ರಾಘವೇಂದ್ರ ಬಿಎಂ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ನಿರ್ದೇಶನದ ಜೊತೆಗೆ ರಾಘವೇಂದ್ರ ಸಿನಿಮಾಕ್ಕೆ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ ಕೂಡ ಬರೆದಿದ್ದಾರೆ. ಕೆಡಂಬಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ರಕ್ಷಿತ್ ಕೆಡಂಬಡಿ, ಡಾ.ರಾಜ್ಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಅಶ್ಲೀಲ ವಿಡಿಯೋ ವ್ಯವಹಾರದಲ್ಲಿ ತೊಡಗಿದ್ದ ರೋಯಾ ಖಾನ್ ಅಲಿಯಾಸ್ ಯಾಸ್ಮೀನ್ ಕೂಡ ಪೊಲೀಸರ ಅತಿಥಿಯಾಗಿದ್ದಾರೆ. ಇವರು ಸಿನಿಮಾಗಳಲ್ಲಿ ಅವಕಾಶ ನೀಡುವ ಆಮಿಷವೊಡ್ಡಿ, ಒಪ್ಪಂದ ಮಾಡಿಕೊಂಡು ಬಳಿಕ ಅವರನ್ನು ಅಶ್ಲೀಲ ವಿಡಿಯೋ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಹೇಳುತ್ತಿದ್ದರು. ಇದಕ್ಕೆ ಒಪ್ಪದಿದ್ದರೆ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಿನಿಮಾ ಡೆಸ್ಕ್ : ಹಸಿಬಿಸಿ ಚಿತ್ರ, ಮಾದಕ ಲುಕ್ ನಿಂದಲೇ ಗಮನ ಸೆಳೆದ ಮಾದಕ ನಟಿ ಸನ್ನಿ ಲಿಯೋನ್ ವಿರುದ್ಧ ವಂಚನೆ ಆರೋಪವೊಂದು ಕೇಳಿಬಂದಿದೆ.
ಯೆಸ್, ನಟಿ ಸನ್ನಿಲಿಯೋನ್ 2019 ರ ಫೆ.14 ರಂದು ಬಟ್ಟೆ ಅಂಗಡಿ ಉದ್ಘಾಟನೆಗೆ ಬರುತ್ತೇನೆ ಎಂದು ಹೇಳಿ 29 ಲಕ್ಷ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಕೈ ಕೊಟ್ಟಿದ್ದಾರೆ. ಆದರೆ ಕೊನೆಗೆ ಹಣ ಕೂಡ ವಾಪಸ್ ನೀಡಿಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಎರ್ನಾಕುಲಂ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಚಿತ್ರೀಕರಣಕ್ಕೆಂದು ನಟಿ ಸನ್ನಿ ಲಿಯೋನ್ ಕೇರಳಕ್ಕೆ ಬಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಸನ್ನಿ ಲಿಯೋನ್ ರನ್ನು ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ನಟಿ ಸನ್ನಿಲಿಯೋನ್ ಗೆ ಬಟ್ಟೆ ಮಳಿಗೆ ಉದ್ಘಾಟನೆಹೆ ಆಮಂತ್ರಣ ನೀಡಲಾಗಿತ್ತು.ಅದಕ್ಕೆ ಹಣ ಕೂಡ ತೆಗೆದುಕೊಂಡಿದ್ದರು. ಆದರೆ ಕೊನೆಗೆ ಉದ್ಘಾಟನೆಗೂ ಬರಲಿಲ್ಲ, ಹಣ ಕೂಡ ವಾಪಸ್ ನೀಡಲಿಲ್ಲ ಎಂದು ಆರೋಪಿಸಿ ಸನ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಎನ್ಎನ್ಡಿಜಿಟಲ್ ನ್ಯೂಸ್ಡೆಸ್ಕ್: ಲಾಸ್ ಏಂಜಲೀಸ್ ನಲ್ಲಿ ಸೋಮವಾರ ಐಕಾನಿಕ್ ಹಾಲಿವುಡ್ ಸೈನ್ ಅನ್ನು ‘ಹೋಲಿಬೂಬ್’ ಎಂದು ಬದಲಾಯಿಸಲಾಯಿಗಿದ್ದು ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಎಲ್ ಎ ಟೈಮ್ಸ್ ಪ್ರಕಾರ, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ವನ್ನು ಕೈಗೊಳ್ಳಲಾಯಿತು ಎನ್ನಲಾಗಿದ್ದು, ಈ ಬಗೆಗಿನ ವೈರಲ್ ಫೋಟೋಗಳು ಗಮನಿಸಿದ ವೇಳೆಯಲ್ಲಿ “W” ಅಕ್ಷರವನ್ನು “B” ಎಂದು ಟಾರ್ಪ್ ನಿಂದ ಮುಚ್ಚಿಲಗಿತ್ತು. , ಇದೇ ವೇಳೆ “D” ಒಂದು ಪುಟ್ಟ ಡ್ಯಾಶ್ ಅನ್ನು ಸೇರಿಸಿ, ಅದು ಮತ್ತೊಂದು “B” ನಂತೆ ಕಾಣಿಸುವಂತೆ ಮಾಡಲಾಗಿದೆ.
ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಭದ್ರತಾ ಸಿಬ್ಬಂದಿ ಮಧ್ಯಾಹ್ನ 1:15ರ ಸುಮಾರಿಗೆ ಐವರು ಪುರುಷರು ಮತ್ತು ಒಬ್ಬ ಮಹಿಳೆಯನ್ನು ಕಣ್ಗಾವಲಿನಲ್ಲಿ ವೀಕ್ಷಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸ್ ಹೆಲಿಕಾಪ್ಟರ್ ಗೆ ಎಚ್ಚರಿಕೆ ನೀಡಿ, ದುಷ್ಕರ್ಮಿಗಳು ಮುಲ್ಲೊಲ್ಯಾಂಡ್ ಡ್ರೈವ್ ನ ಒಂದು ಸ್ಥಳಕ್ಕೆ ತೆರಳಿ ಅಲ್ಲಿ ಅವರನ್ನು ವಶಕ್ಕೆ ಪಡೆದಿರುವುದಾಗಿ ಲಾಸ್ ಏಂಜಲೀಸ್ ಸಿಬಿಎಸ್ ವರದಿ ಮಾಡಿದೆ.
ನವದೆಹಲಿ : ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಜೋಡಿ ಆಕೆಗೆ ವಮಿಕಾ ಎಂದು ಹೆಸರಿಟ್ಟಿದೆ. ಅನುಷ್ಕಾ ಶರ್ಮಾ ತಮ್ಮ ಶಿಶುವಿನ ಮೊದಲ ಚಿತ್ರವನ್ನುಹಂಚಿಕೊಂಡಿದ್ದಾಳೆ.
ತನ್ನ ಪೋಸ್ಟ್ ನಲ್ಲಿ, ತಾಯಿಯಾಗಿ ತನ್ನ ಅನುಭವಮತ್ತು ತಮ್ಮ ಮಗಳು ತಮ್ಮ ಜೀವನವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಳು ಎಂದು ಅವರು ತಮ್ಮ ಇನ್ ಸ್ಟಾ ಗ್ರಾಂ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಅನುಷ್ಕಾ ಶರ್ಮಾ ಪೋಸ್ಟ್ ಮಾಡಿದ್ದೇನು?
ಪತಿ ವಿರಾಟ್ ಕೊಹ್ಲಿ ಹಾಗೂ ಮಗಳು ವಾಮಿಕಾ ಜೊತೆ ಇರುವ ಫೋಟೋವನ್ನು ಅನುಷ್ಕಾ ಶರ್ಮಾ ಹಂಚಿಕೊಂಡಿದ್ದಾರೆ. ಜೊತೆಗೆ , “ನಾವು ಪ್ರೀತಿ ಮತ್ತು ಉಪಸ್ಥಿತಿ ಮತ್ತು ಕೃತಜ್ಞತೆಯೊಂದಿಗೆ ಜೀವನ ನಡೆಸಿದ್ದೇವೆ, ಈ ಪುಟ್ಟ ಮಗು – ವಮಿಕಾ ಅದನ್ನು ಒಂದು ಹೊಸ ಹಂತಕ್ಕೆ ಕೊಂಡೊಯ್ದಿದ್ದಾಳೆ! ಕಣ್ಣೀರು, ನಗು, ಚಿಂತೆ, ಆನಂದ – ಕೆಲವು ನಿಮಿಷಗಳ ಅವಧಿಯಲ್ಲಿ ಅನುಭವಿಸಿದ ಭಾವನೆಗಳು! ನಿದ್ರೆಯು ಕಡಿಮೆಯಾಗಿದೆ, ಆದರೆ ನಮ್ಮ ಹೃದಯಗಳು ತುಂಬಿದೆ.” .
ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ ಗಳನ್ನು ಅರ್ಪಿಸಿದ ಅವರು, “ನಿಮ್ಮ ಶುಭಾಶಯಗಳು, ಪ್ರಾರ್ಥನೆಮತ್ತು ಉತ್ತಮ ಶಕ್ತಿಗಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ವಮಿಕಾ ಕೊರೊನಿಯಲ್? ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪುತ್ರಿ ವಾಮಿಕಾ ಎಂದು ಹೆಸರಿಟ್ಟಿದ್ದಾರೆ. ವಾಮಿಕ ಕರೋನಿಯಲ್ . ಕೊರೋನಿಯಲ್ ಎಂಬುದು ಕೊರೊನವೈರಸ್ ಕ್ವಾರಾಂಟೈನ್ ಅವಧಿಯಲ್ಲಿ ಗರ್ಭವನ್ನು ಪಡೆದ ಶಿಶುಗಳಿಗೆ ನೀಡುವ ಒಂದು ಪದವಾಗಿದೆ. ಬಹಳಷ್ಟು ಜನರು ಲಾಕ್ ಡೌನ್ ಗರ್ಭಧಾರಣೆಯನ್ನು ಘೋಷಿಸಿದರು, ಇದು ಒಂದು ಹೊಸ ಪದದ ಉಧ್ಬವಕ್ಕೆ ಕಾರಣವಾಯಿತು
ಕುಂದಾಪುರ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಕ್ಕಳು ಜಿಂಗ್ರ್ ಪೊಂಕ್ ಎನ್ನುವ ಹೆಸರಿನ ಸಸ್ಪೆನ್ಸ್ ವೆಬ್ ಸಿರೀಸ್ ನಿರ್ಮಿಸಿದ್ದು, ಇದರ ಟ್ರೈಲರ್ ರಿಲಿಸ್ ಆಗಿದೆ. ಟ್ರೈಲ್ ನೋಡಿರುವ ಮಂದಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಮಾತನಾಡಿದ್ದು, ಹೊಸ ಟ್ರೆಂಡ್ ಆಗುತ್ತಿದದೆ. ಅಂದ ಹಾಗೇ ಬರೀ ಮಕ್ಕಳೇ ಈ ವೆಬ್ ಸೀರಿಸ್ನಲ್ಲಿ ಅಭಿನಯ ಮಾಡಿರೋದು ಇದರ ಮತ್ತೊಂದು ವಿಶೇಷಯಾಗಿದ್ದು, ದೊಡ್ಡವರ ಅಭಿನಯವನ್ನು ಕೂಡ ಈ ಮಕ್ಕಳು ಮೀರಿಸುತ್ತಾರೆ.
ಜಿಂಗ್ರ್ ಪೊಂಕ್ ಅಂದರೆ ಏನು? ಅನ್ನೊಂದು ನಿಮ್ಮ ಮುಂದೆ ನಾಲ್ಕು ಕಂತುಗಳಲ್ಲಿ ಬರಲಿದ್ದು, ಚಿಕ್ಕ ಮಕ್ಕಳ ಈ ವಿಭಿನ್ನ ಪ್ರಯತ್ನಕ್ಕೆ ನಿಮ್ಮ ಬೆಂಬಲವೂ ಕೂಡ ಇರಲಿ. ಅಂದ ಹಾಗೇ ವೆಬ್ಸೀರಿಸ್ಗೆ ಕಥೆ ಬರೆದು ಡೈರೆಕ್ಟ್ ಮಾಡಿರೋದು ಎನ್ ಎಮ್ ನಿಖಿಲ್ ಆಗಿದ್ದು, ಗೋಪಾಲ್ ಎನ್ ಅವರು ಚಿತ್ರಕಥೆ, ಮಣಿಕಂಠ ಖಾರ್ವಿ ಸಂಕಲನ ನಾಗರಾಜ್ ನಾಯಕ್ & ನಿತಿನ್ ಪಟೇಲ್ ಅವರ ಕ್ಯಾಮಾರ ವರ್ಕ್ ಕೂಡ ಇದ್ದು, ನಮನ ಅಶೋಕ್ ಅಶೋಕ್ ಅವರು ಡಿಸೈನ್ಸ್ ಮಾಡಿದ್ದಾರೆ. ಪತ್ರಕರ್ತ ಅವಿನಾಶ್ ಆರ್ ಭೀಮಸಂದ್ರ ಅವರು ಈ ವೆಬ್ಸೀರಿಸ್ಗೆ ಸಹಕಾರವನ್ನು ನೀಡಿದ್ದು, ಸದ್ಯದಲ್ಲೇ ನಿಮ್ಮ ಮುಂದೆ ಮೊದಲ ಕಂತು ಬಿಡುಗಡೆಯಾಗಲಿದೆ.
ನವದೆಹಲಿ: 2021ರ ಜನವರಿ 26ರಂದು ಭಾರತ ತನ್ನ 72ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ನಡುವೆ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ತಾಪ್ಸಿ ಪನ್ನು ಅವರು ತಪ್ಪಾಗಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಕೋರಿದ್ದು ಅದು ಕೋಲಾಹಲಸೃಷ್ಟಿಸಿವೆ. ಹೌದು, ಇಬ್ಬರೂ ಸ್ಟಾರ್ ಗಳು ಈ ದಿನದ ಬಗ್ಗೆ ತಪ್ಪು ಮಾಹಿತಿ ಯುಳ್ಳ ಟ್ವೀಟ್ ಪೋಸ್ಟ್ ಮಾಡಿದ್ದಾರೆ ಮತ್ತು ಹಾಗಾಗಿ ಆನ್ ಲೈನ್ ನಲ್ಲಿ ಟ್ರೋಲ್ ಮಾಡಲಾಗಿದೆ. ಜನವರಿ 26ರಂದು ಶಿಲ್ಪಾ ‘ ಸ್ವಾತಂತ್ರ್ಯ’ ಅಂತ ವಿಶ್ ಮಾಡಿದರೆ, ಮತ್ತೊಂದೆಡೆ ತಾಪ್ಸಿ 72ನೇ ಬದಲಿಗೆ 71ನೇ ಸ್ಥಾನ ಗಳಿಸಿ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ನಂತರ ಆಕೆ ತನ್ನ ಟ್ವೀಟ್ ಸರಿಪಡಿಸಿದರೂ, ಟ್ರೋಲ್ ಗಳು ನಟಿಯ ಅಜ್ಞಾನವನ್ನು ಕೂಗಿ ಕರೆಯುವಲ್ಲಿ ಯಾವುದೇ ಕರುಣೆ ತೋರಲಿಲ್ಲ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ https://bit.ly/3qPyUfO
4k Shilpa Shetty wrote Swatantrata Diwas 😭😭 One normal day on twitter is all I ask for pic.twitter.com/wDRDhKleQF
ಮುಂಬೈ: ಬಾಲ್ಯದ ಗೆಳತಿ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಜೊತೆ ಬಾಲಿವುಡ್ ನಟ ವರುಣ್ ಧವನ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನ ಖ್ಯಾತನಾಮರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಭಾನುವಾರ ಅಲಿಬಾಗ್ನ ಐಷಾರಾಮಿ ‘ದಿ ಮಾನ್ಶನ್’ ಹೋಟೆಲ್ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಹಿಂದೂ ಸಂಪ್ರದಾಯದಂತೆ ವರುಣ್, ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊರೋನಾ ಸಾಂಕ್ರಾಮಿಕದಿಂದಾಗಿ 40-50 ಆಮಂತ್ರಿತ ಗಣ್ಯರ ನಡುವೆ ಮದುವೆ ನಡೆದಿದೆ. ಫೆಬ್ರವರಿಯಲ್ಲಿ ಬಾಲಿವುಡ್ ಗಣ್ಯರಿಗಾಗಿ ವರುಣ್ ಅವರು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ವರುಣ್ ಮತ್ತು ನತಾಶಾ ದಲಾಲ್ ಜೋಡಿ ಶಾಲೆಯಲ್ಲಿದ್ದಾಗಲೇ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ವರುಣ್ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಪ್ರೀತಿ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿತ್ತು.ನಂತರ ಜೊತೆಯಾಗಿ ಎಲ್ಲೆಡೆ ಕಾಣಿಸಿಕೊಂಡಿದ್ದರು.
ನವದೆಹಲಿ: ನಟಿ ಕಂಗನಾ ರಣಾವತ್ ಅವರ ಟ್ವಿಟರ್ ಖಾತೆ ಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಅವರು ನಿನ್ನೆ ಟ್ವಿಟರ್ ವೊಂದರಲ್ಲಿ ‘ತಾಂಡವ್’ ಸೃಷ್ಟಿಕರ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ. ಇದೀಗ ಡಿಲೀಟ್ ಮಾಡಿರುವ ಟ್ವೀಟ್ ನಲ್ಲಿ ಕಂಗನಾ, ವೆಬ್ ಸೀರಿಸ್ ನಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಿದವರ ತಲೆಗಳನ್ನು ಕತ್ತರಿಸುವ ಸಮಯ” ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಹಿಂಸಾಚಾರಕ್ಕೆ ಕರೆ ನೀಡಿದ್ದರು.
ಈ ನಡುವೆ ನಟಿ ಕಂಗನಾ, ಅವರ ಹೇಳಿಕೆ ಪರ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದು, ನಟಿ ಖಾತೆಯನ್ನು ನಿರ್ಬಧಿಸುವಂತೆ ಕೂಡ ಹಲವು ಜನ ಟ್ವಿಟರ್ನಲ್ಲಿ ಮನವಿ ಮಾಡಿಕೊಂಡಿದ್ದರು, ಇದಕ್ಕೆ ಕಂಗನಾ ಒಂದು ವೇಳೆ ನನ್ನ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದ್ರೆ, ನನ್ನ ನಿಜವಾದ ರೂಪವನ್ನು ತೋರಿಸಬೇಕಾಗುತ್ತದೆ ಅಂತ ಎಚ್ಚರಿಕೆಯನ್ನು ನೀಡಿದ್ದರು. ಒಟ್ಟಿನಲ್ಲಿ ಸದಾ ಒಂದಲ್ಲ, ಒಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿರುವ ಕಂಗನಾಗೆ ಯಾವಾಗ ಬುದ್ದಿ ಬರುತ್ತದೋ ಗೊತ್ತಿಲ್ಲ.
ಮುಂಬೈ : ಇತ್ತೀಚೆಗೆ ಬಿಡುಗಡೆಯಾದ ಅಮೆಜಾನ್ ಪ್ರೈಮ್ ವೆಬ್ ಸೀರೀಸ್ ‘ತಾಂಡವ್ ‘ ಚಿತ್ರದ ನಿರ್ಮಾಪಕರ ವಿರುದ್ಹ ಲಕ್ನೋದ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಧಾರ್ಮಿಕ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಹಿಂದೂ ದೇವರುಗಳನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಿ, ಈ ಸರಣಿಯಲ್ಲಿ ಜಾತಿವಾದಿಯ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಬಳಸಿದೆ. ಭಾರತದ ಪ್ರಧಾನಿಯನ್ನು ಅಸಭ್ಯ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂಬ ಆರೋಪವೂ ನಿರ್ಮಾಪಕರ ಮೇಲೆ ಇದೆ.
ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ಲೇಖಕ ಗೌರವ್ ಸೋಲಂಕಿ, ಅಮೆಜಾನ್ ಪ್ರೈಮ್ ನ ಇಂಡಿಯಾ ಮುಖ್ಯಸ್ಥ ಅಪರ್ಣಾ ಪುರೋಹಿತ್ ಮತ್ತು ತ೦ಡವ್ ಅವರ ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಎಫ್ ಐಆರ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ಶತ್ರುತ್ವವನ್ನು ಉತ್ತೇಜಿಸುವುದು), 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಹಾನಿ ಅಥವಾ ಅಧೀಕೃತವಾಗಿಸುವ ಪ್ರಾರ್ಥನಾ ಸ್ಥಳವನ್ನು ಅವಮಾನಿಸುವ ಉದ್ದೇಶದಿಂದ) 505 (1) (ಬಿ) (ಸಾರ್ವಜನಿಕ ವಾಗಿ ಅಪಹಾಸ್ಯ ಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಹಾನಿ ಉಂಟುಮಾಡುವ ಹೇಳಿಕೆಗಳು, ಅಥವಾ ಸಾರ್ವಜನಿಕರಿಗೆ ಭೀತಿ ಅಥವಾ ಭೀತಿ, ಅಥವಾ ಭೀತಿ, ಅಥವಾ ಬೆದರಿಕೆಯ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. , ಅಥವಾ ಯಾವುದೇ ವ್ಯಕ್ತಿಯು ರಾಜ್ಯದ ವಿರುದ್ಧ ಅಥವಾ ಸಾರ್ವಜನಿಕ ಶಾಂತಿಗೆ ವಿರುದ್ಧವಾಗಿ ಅಪರಾಧ ಮಾಡಲು ಪ್ರೇರೇಪಿಸಬಹುದಾದ ಯಾವುದೇ ವಿಭಾಗ, 469 (ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ಫೋರ್ಜರಿ) ಮತ್ತು 505 (2) (ಉಪಪ್ರಕರಣ (2) ರಲ್ಲಿ ಸೂಚಿಸಲಾದ ಅಪರಾಧವನ್ನು ಯಾರೇ ಮಾಡಿದರೂ, ಯಾವುದೇ ಸ್ಥಳದಲ್ಲಿ ಅಥವಾ ಧಾರ್ಮಿಕ ಪೂಜಾ ಅಥವಾ ಧಾರ್ಮಿಕ ಸಮಾರಂಭಗಳಲ್ಲಿ ತೊಡಗಿರುವ ಯಾವುದೇ ಸಭೆಯಲ್ಲಿ ಭಾಗಿಯಾಗುವ ಯಾವುದೇ ಸೆಕ್ಷನ್ ಗೆ , ಐದು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಮತ್ತು ದಂಡಕ್ಕೆ ಹೊಣೆಗಾರ) ಜೊತೆಗೆ ಐಟಿ ಕಾಯ್ದೆಯ ಸೆಕ್ಷನ್ ಗಳ ಜೊತೆಗೆ ದಂಡವನ್ನು ವಿಧಿಸಲಾಗುತ್ತದೆ.
ಕೆಎನ್ಎನ್ಸಿನಿಮಾಡೆಸ್ಕ್: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಕಂ ನಟ ರಿಷಭ್ ಶೆಟ್ಟಿ, ಗಾನವಿ ಲಕ್ಷಣ್ ಜೋಡಿ ಅಭಿನಯದ ‘ಹೀರೋ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿರೋ ‘ಹೀರೋ’ ಟ್ರೈಲರ್ ರಿಷಭ್ ಅಭಿಮಾನಿ ಬಳಗಕ್ಕೆ ಸಖತ್ ಸಂತಸ ನೀಡಿದೆ.
‘ಹೀರೋ’ ಸಿನಿಮಾ ಮೂಲಕ ನವ ಪ್ರತಿಭೆ ಭರತ್ ರಾಜ್ ಎಂ. ಸ್ಯಾಂಡಲ್ವುಡ್ಗೆ ನಿರ್ದೇಶಕನಾಗಿ ಪರಿಚಿತರಾಗುತ್ತಿದ್ದಾರೆ. ಕೊರೋನಾ ಲಾಕ್ಡೌನ್ ಅವಧಿಯಲ್ಲಿ 45 ದಿನಗಳ ಯಶಸ್ವಿ ಚಿತ್ರೀಕರಣ ಮಾಡಿ ಸದ್ದು ಮಾಡಿದ್ದ ‘ಹೀರೋ’ ಚಿತ್ರ ಈಗ ಬಿಡುಗಡೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಸದ್ಯ ಸೆನ್ಸಾರ್ ಅಂಗಳದಲ್ಲಿರುವ ಸಿನಿಮಾ ಟ್ರೈಲರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಪಕ್ಕಾ ಕಮರ್ಶಿಯಲ್ ಎಳೆ ಒಳಗೊಂಡಿರುವ ಈ ಚಿತ್ರದಲ್ಲಿ ರಿಷಭ್ ಬಾರ್ಬರ್ ಪಾತ್ರದಲ್ಲಿ ಕಾಣಸಿಗಲಿದ್ದು, ಪ್ರಮೋದ್ ಶೆಟ್ಟಿ ಖಳನಟನಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ಸಂ ಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ವಿಕ್ರಂ ಮೋರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.ರಿಷಭ್ ಶೆಟ್ಟಿ ಫಿಲಂಸ್ ಬ್ಯಾನರ್ನಡಿ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿರುವ ‘ಹೀರೋ’ ಸಿನಿಮಾ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಸಿನಿಮಾಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಕೆಜಿಎಫ್ ಚಾಪ್ಟರ್ – 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಿನಿಮಾದ ಟೀಸರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೆಳಕಂಡ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ. ಅ) ಅದ್ಭುತ
ಆ) ಸಾಧಾರಣ
ಇ) ಚೆನ್ನಾಗಿ ಇಲ್ಲ
ಈ) ಇನ್ನೂ ನೋಡಿಲ್ಲ
ಹೈದ್ರಬಾದ್ : ಮೆಗಾಸ್ಟಾರ್ ರಜನಿಕಾಂತ್ ಅವರನ್ನು ಭಾನುವಾರ ಹೈದರಾಬಾದ ಅಪೊಲೊ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ತೀವ್ರ ರಕ್ತದೊತ್ತಡದ ಏರುಪೇರಿನಿಂದ ಬಳಲುತ್ತಿದ್ದ ಅವರು ಡಿಸೆಂಬರ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬಿಡುಗಡೆಯಾದ ಆಸ್ಪತ್ರೆಯ ಬುಲೆಟಿನ್ ಈ ಸುದ್ದಿಯನ್ನು ಖಚಿತಪಡಿಸಿದೆ. “ತೀವ್ರ ರಕ್ತದೊತ್ತಡ ಮತ್ತು ಬಳಲಿಕೆಯಿಂದ 2020ರ ಡಿಸೆಂಬರ್ 25ರಂದು ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಹದ ನೋಡಿ, ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ತಿಳಿಸಿದೆ.
ಈ ಹೇಳಿಕೆಯಲ್ಲಿ, “ಅವರ ರಕ್ತದೊತ್ತಡವನ್ನು ಸ್ಥಿರಗೊಳಿಸಲಾಗಿದೆ ಮತ್ತು ಅವರು ತುಂಬಾ ಉತ್ತಮ ಭಾವನೆಹೊಂದಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿರುವುದರಿಂದ ಇಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಟ್ರಾನ್ಸ್ ಪ್ಲಾಂಟ್ ನಂತರದ ಸ್ಥಿತಿ, ಅಧಿಕ ರಕ್ತದೊತ್ತಡ ಮತ್ತು ವಯಸ್ಸಿನ ಹಿನ್ನೆಲೆಯಲ್ಲಿ ಔಷಧೋಪಚಾರಗಳು ಮತ್ತು ಆಹಾರಕ್ರಮದ ಜೊತೆಗೆ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ ಅಂತ ತಿಳಿಸಿದೆ. ರಕ್ತದೊತ್ತದೊತ್ತಡದ ನಿಯಮಿತ ಮೇಲ್ವಿಚಾರಣೆಯೊಂದಿಗೆ ಒಂದು ವಾರ ಕಾಲ ಸಂಪೂರ್ಣ ಬೆಡ್ ರೆಸ್ಟ್ ಗೆ ರಜನಿಕಾಂತ್ ಅವರಿಗೆ ಸೂಚಿಸಲಾಗಿದೆ. ದೈಹಿಕ ಚಟುವಟಿಕೆಗಳಿಂದ ದೂರವಿರಲು ಹಾಗೂ ಒತ್ತಡದ ಸನ್ನಿವೇಶಗಳಿಂದ ದೂರಇರುವಂತೆ ಯೂ ಸಹ ಅವರಿಗೆ ಸೂಚಿಸಲಾಗಿದೆ.
ಸಿನಿಮಾ ಡೆಸ್ಕ್ :ಸದ್ಯ ನ್ಯಾಷನಲ್ ಕ್ರಷ್ ಆಗಿರುವ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಚಿತ್ರರಂಗಕ್ಕೆ ಕೂಡಾ ಎಂಟ್ರಿ ನೀಡಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆ ರಶ್ಮಿಕಾ ‘ಮಿಷನ್ ಮಜ್ನು’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಂತಸದ ವಿಷಯವನ್ನು ರಶ್ಮಿಕಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾಗೆ ನಾಯಕನಾಗಿ ಸಿದ್ಧಾರ್ಥ್ ಮಲ್ಹೊತ್ರಾ ನಟಿಸಲಿದ್ದಾರೆ. ಬಾಲಿವುಡ್ಗೆ ಎಂಟ್ರಿ ಕೊಟ್ಟ ರಶ್ಮಿಕಾಗೆ ಸ್ವಾಗತ ಕೋರಿದ ಸಿದ್ಧಾರ್ಥ್ “ಬಾಲಿವುಡ್ಗೆ ನಿಮಗೆ ಸ್ವಾಗತ ಕೋರಲು ಬಯಸುತ್ತೇನೆ, ಮಿಷನ್ ಮಜ್ನು ತಂಡದೊಂದಿಗೆ ನಿಮ್ಮನ್ನು ನೋಡಲು ಬಹಳ ಎಕ್ಸೈಟ್ ಆಗಿದ್ದೇನೆ, ಶೀಘ್ರದಲ್ಲೇ ನಿಮ್ಮನ್ನು ಭೇಟಿ ಆಗುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಮಿಷನ್ ಮಜ್ನು ನೈಜ ಘಟನೆ ಆಧರಿತ ಸಿನಿಮಾವಾಗಿದ್ದು ಶಾಂತನು ಬಾಗ್ವಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಶಾಂತನು ಅವರಿಗೆ ಕೂಡಾ ಮೊದಲ ಸಿನಿಮಾ.
ಮುಂಬೈ : ಮುಂಬೈ ಕ್ಲಬ್ ನಲ್ಲಿ ಕೋವಿಡ್-19 ಶಿಷ್ಟಾಚಾರಉಲ್ಲಂಘಿಸಿದ ಆರೋಪದ ಮೇಲೆ ಮಂಗಳವಾರ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ತಮ್ಮನ್ನು ಬಂಧಿಸಲಾಗಿದೆ ಎನ್ನುವುದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ್ದಾರೆ.ಮುಂಬೈನ ಪೋಶ್ ಕ್ಲಬ್ ಡ್ರ್ಯಾಗನ್ ಫ್ಲೈ ಎಕ್ಸ್ ಪೀರಿಯನ್ಸ್ ಇನ್ ಜೆಡಬ್ಲ್ಯೂ ಮ್ಯಾರಿಯಟ್ ನಲ್ಲಿ ದಾಳಿ ನಡೆಸಿದ ನಂತರ ಸುಸಾನೆ ಖಾನ್ ಮತ್ತು ಸುರೇಶ್ ರೈನಾ ಮತ್ತು ಗುರು ರಾಂಡವಾ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಮಂಗಳವಾರ ವೈರಲ್ ಆಗಿತ್ತು.
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ಪೋಲೀಸರು ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿ ಘಟನೆ ಸಂಬಂಧ ಹಲವರನ್ನು ಬಂಧಿಸಲಾಗಿತ್ತು ಅಂಥ ಈ ಹೇಳಲಾಗಿತ್ತು. ಮುಂಬೈ ಪೊಲೀಸರು ಮಂಗಳವಾರ ಕರೋನ-19 ಶಿಷ್ಟಾಚಾರಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸುಸಾನೆ, ಬಾದ್ ಶಾ ಸೇರಿದಂತೆ ಕನಿಷ್ಠ 34 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಉನ್ನತಾಧಿಕಾರಿಗಳು ಮಂಗಳವಾರ ಮುಂಬೈನಲ್ಲಿ ತಿಳಿಸಿದ್ದಾರೆ. ‘ನನ್ನ ವಿನಮ್ರ ಸ್ಪಷ್ಟನೆ’ ಎಂಬ ಶೀರ್ಷಿಕೆಯ ಸಾಮಾಜಿಕ ಜಾಲತಾಣದಲ್ಲಿ ಸುಸಾನೆ ಬರೆದುಕೊಂಡಿದ್ದು ನನ್ನ ಪೊಲೀಸರು ಬಂಧಿಸಿಲ್ಲ ಎಂದು ಬರೆದುಕೊಂಡು ಇದೇ ವೇಳೆ ಅವರು ಮುಂಬೈ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಇದೇ ವೇಳೆ ಅವರು ಕೆಲವು ಮಾಧ್ಯಮಗಳು ಬಂಧನಗಳನ್ನು ಮಾಡಲಾಗಿದೆ ಎಂಬ ಊಹಾಪೋಹಗಳು ಸಂಪೂರ್ಣ ವಾಗಿ ತಪ್ಪಾಗಿವೆ ಮತ್ತು ಬೇಜವಾಬ್ದಾರಿಯಿಂದ ಕೂಡಿವೆ” ಎಂದು ಅವರು ಬರೆದಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾಡೆಸ್ಕ್: 2020ರ ವರ್ಷ ವು ಎಂದೆಂದಿಗೂ ನೆನಪಿನಲ್ಲಿ ಉಳಿಯುವುದು, ಕೆಲವು ಒಳ್ಳೆಯ ಮತ್ತು ಕೆಲವು ಅಹಿತಕರ ಸುದ್ದಿಗಳಿಗಾಗಿ. ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆ ಯನ್ನು ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ನಾವು ಕೆಲವು ಸ್ಟಾರ್ ಗಳನ್ನು ಕಳೆದುಕೊಂಡಿದ್ದೇವೆ. ಕರೋನವೈರಸ್ ನಮ್ಮಿಂದ ಸಾಕಷ್ಟು ತೆಗೆದುಕೊಂಡು ಹೋಗಿರಬಹುದು, ಆದರೆ ಕೆಲವು ರಿಟರ್ನ್ ಉಡುಗೊರೆಗಳನ್ನು ಸಹ ನೀಡಿದೆ. ಅನೇಕ ಹಳೆಯ ದೂರದರ್ಶನ ಕಾರ್ಯಕ್ರಮಗಳು ಲಾಕ್ ಡೌನ್ ಸಮಯದಲ್ಲಿ ಟಿವಿಯಲ್ಲಿ ನಮಗೆ ಕಾಣಿಸಿಕೊಂಡಿದ್ದಾವೆ ಕೂಡ.
ಆದ್ದರಿಂದ 2020ರ ಟಾಪ್ 10 ಟಿವಿ ನ್ಯೂಸ್ ಮೇಕರ್ಗಳ ಪಟ್ಟಿ ಇಲ್ಲಿದೆ – :
ಡ್ರಗ್ ಕೇಸ್ನಲ್ಲಿ ಭಾರತಿ ಸಿಂಗ್ ಬಂಧನ : ಭಾರ್ತಿ ಸಿಂಗ್ ಮತ್ತು ಆಕೆಯ ಪತಿ ಹರ್ಶ್ ಲಿಂಬಾಚಿಯಾ ಅವರ ನಿವಾಸದಲ್ಲಿ ಅಕ್ಟೋಬರ್ 21ರಂದು ಶೋಧ ಕಾರ್ಯ ನಡೆಸಿದಾಗ 86.5 ಗ್ರಾಂ ನಷ್ಟು ಮರಿಜುವಾನಾ ವನ್ನು ವಶಪಡಿಸಿಕೊಳ್ಳಲಾಗಿದೆ. ಭಾರ್ತಿ ಮತ್ತು ಹರಾಶ್ ಅವರನ್ನು ಅವರ ಕಚೇರಿಯಲ್ಲಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ವಿಚಾರಣೆ ಗೊಳಪಡಿಸಿದ್ದು, ನಂತರ ಮಾದಕ ವಸ್ತು ಸೇವನೆ ಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಬಂಧಿಸಿ ಅಕ್ಟೋಬರ್ 22ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಾಮೀನು ಕೋರಿ ದಂಪತಿ ಕೋರ್ಟ್ ಮೊರೆ ಹೋಗಿದ್ದರು ಮತ್ತು ಅಕ್ಟೋಬರ್ 23ರಂದು ವಿಚಾರಣೆ ನಿಗದಿಯಾಗಿತ್ತು. ಪ್ರಕರಣದ ಐಓ ಮತ್ತು ಪ್ರಾಸಿಕ್ಯೂಟರ್ ವಿಚಾರಣೆಯ ಸಮಯದಲ್ಲಿ ಹಾಜರಾಗಲಿಲ್ಲ, ಆ ನಂತರ ಅದೇ ದಿನ ಭಾರ್ತಿ ಮತ್ತು ಹರ್ಷ್ ಗೆ ಜಾಮೀನು ನೀಡಲಾಗಿದೆ.
ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಸನಾ ಖಾನ್ ಶೋಬಿಜ್ ನಿಂದ ನಿವೃತ್ತಿ : ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಸನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಶೋಬಿಜ್ ನಿಂದ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ, ತಾನು ಈಗ ಮನುಕುಲಕ್ಕೆ ಸೇವೆ ಯನ್ನು ನೀಡುವೆ ಮತ್ತು ನನ್ನ ಸೃಷ್ಟಿಕರ್ತನ ಆದೇಶವನ್ನು ಪಾಲಿಸುತ್ತೇನೆ ಎಂದು ಬರೆದಿದ್ದಾಳೆ. ನಿವೃತ್ತಿ ಘೋಷಿಸಿದ ನಂತರ ಸನಾ, ಸೂರತ್ ನ ಮೌಲಾನಾ ಮುಫ್ತಿ ಅನಾಸ್ ಅವರನ್ನು ಮದುವೆಯಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸಮೀರ್ ಶರ್ಮಾ : ಆಗಸ್ಟ್ 5ರಂದು ಮುಂಬೈನ ಮಲಾಡ್ ನಲ್ಲಿರುವ ತಮ್ಮ ನಿವಾಸದಲ್ಲಿ ಟಿವಿ ನಟ ಸಮೀರ್ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರ ಪ್ರಕಾರ 44 ವರ್ಷದ ನಟ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಹೇಳಲಾಗಿದೆ. ಸಮೀರ್ ದೂರದರ್ಶನ ಮತ್ತು ಚಲನಚಿತ್ರಗಳೆರಡರಲ್ಲೂ ಕೆಲಸ ಮಾಡಿದ್ದರು. ಟಿವಿ ಶೋ ದಿಲ್ ಕ್ಯಾ ಚಹತಾ ಹೈ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. ಹಸೀ ಟು ಫೇಸ್ ಎಂಬ ಚಿತ್ರಗಳಲ್ಲಿ ಎಡಬಲ ಎಡ, ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ತಿ ಮತ್ತು ಯೆ ರಿಶ್ತೇಹೈ ನ್ ಪ್ಯಾರ್ ಕೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ದಿವ್ಯಾ ಭಟ್ನಾಗರ್ ಸಾವಿನ ನಂತರ ಆಕೆಯ ಗಂಡನ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ನಟಿ ಡೆವೊಲೀನಾ : ಟಿವಿ ನಟಿ ದಿವ್ಯಾ ಭಟ್ನಾಗರ್ ಅವರು ಕೋವಿಡ್-19 ನಿಂದ 34 ನೇ ವಯಸ್ಸಿನಲ್ಲಿ ನಿಧನರಾದರು. ಆಕೆಯ ಸಾವು ನಂತರ ಗೆಳತಿ ದೇವಲೀನಾ ಭಟ್ಟಾಚಾರ್ಜಿ ಅವರು ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಳ ಪತಿ ಗಗನ್ ಗಬ್ರು ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಅಲ್ಲದೆ ದಿವ್ಯಾಳ ಒಡವೆಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ದಿವಂಗತ ನಟಿಯ ಧ್ವನಿಮುದ್ರಣವನ್ನು ಅವರು ಹಂಚಿಕೊಂಡಿದ್ದು, ಗಗನ್ ಮಾನಸಿಕ ಮತ್ತು ದೈಹಿಕವಾಗಿ ಹೇಗೆ ಹಿಂಸೆ ನೀಡುತ್ತಿದ್ದರು ಎಂದು ಹೇಳಿದರು.
ಸಿನಿಮಾಡೆಸ್ಕ್: ಅಟ್ಟಯ್ಯ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ. ಆ ಸಿನಿಮಾ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ಲೋಕೇಂದ್ರ ಸೂರ್ಯ. ಇದೀಗ ಅವರೇ ನಿರ್ದೇಶಿಸಿ, ನಟಿಸಿರುವ ಎರಡನೇ ಸಿನಿಮಾ ‘ ಹಾಫ್’ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಸಿನಿಮಾದಲ್ಲಿ ಮತ್ತೊಂದು ವಿಶೇಷವೆಂದರೆ ಥ್ರಿಲ್ಲರ್ ಮಂಜು ಸಾಹಸ ಸಿನಿಮಾಗಿದೆ. ನಾಯಕನ ಜೊತೆಗೆ ಹೆಸರಿಡಲಾಗದ ಸಂಬಂಧ ಹೊಂದಿದ್ದ ಬೇಗಂ ಅನ್ನು ಕಿಡ್ನಾಪ್ ಮಾಡಿದ ಕಾರಣಕ್ಕೆ ನಡೆಯುವ ರೋಚಕ ಸಾಹಸ ಸನ್ನಿವೇಶವನ್ನು ಥ್ರಿಲ್ಲರ್ ಮಂಜು ವಿಭಿನ್ನವಾಗಿ ಚಿತ್ರೀಕರಿಸಿದ್ದಾರೆ.
ಹೊಸಬರೇ ಇರುವ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದರ ಬಗ್ಗೆ ಥ್ರಿಲ್ಲರ್ ಮಂಜು ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ, ಇದುವರೆಗೆ ಹೊಸಬರ ನೂರಾರು ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದೇನೆ. ಆದರೆ ಲೋಕೇಂದ್ರ ಅವರ ತಂಡವನ್ನು ನೋಡಿದರೆ ನಿಜಕ್ಕೂ ಇವರೆಲ್ಲಾ ಹೊಸಬರಾ ಎನ್ನುವ ಅನುಮಾನ ಮೂಡುತ್ತದೆ. ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವುದು ಕಷ್ಟದ ಕೆಲಸ. ಅನುಭವಿಗಳಿದ್ದರೆ ಮಾತ್ರ ಸರಾಗವಾಗಿ ಮತ್ತು ಅಂದುಕೊಂಡಂತೆ ಶಾಟ್ಸ್ ಕಂಪೋಸ್ ಮಾಡಲು ಸಾಧ್ಯ. ಹೊಸಬರು ಅಂದ ಕೂಡಲೇ ಅವರಿಗೆ ಏಲ್ಲವನ್ನೂ ಹೇಳಿಕೊಟ್ಟು, ಸಮಯ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಲೋಕೇಂದ್ರ ಮತ್ತವರ ತಂಡದ ಕಾರ್ಯ ವೈಖರಿಯನ್ನು ಕಂಡು ಇವರೆಲ್ಲ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿಬಂದಿದ್ದಾರೇನೋ ಅನ್ನಿಸಿಬಿಟ್ಟಿತು. ಒಂದು ದಿನಕ್ಕೆ ಐವತ್ತೆರಡು ಓಕೆ ಟೇಕ್ ಗಳನ್ನು ಶೂಟ್ ಮಾಡಿದ್ದೇನೆ. ಹೊಸದಾಗಿ ಚಿತ್ರರಂಗಕ್ಕೆ ಬಂದಿರುವವರಿಂದ ಈ ಮಟ್ಟಿಗಿನ ಕೆಲಸ ತೆಗೆಸಿಕೊಳ್ಳುವುದು ನಿಜಕ್ಕೂ ದಾಖಲೆಯೇ ಸರಿʼʼ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ʻಹಾಫ್ʼ ತಂಡವನ್ನು ಹೊಗಳಿದ್ದಾರೆ.
ಲೋಕೇಂದ್ರ ಸೂರ್ಯ ಎದುರು ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಅಬ್ಬರಿಸಲಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಿದ್ದಾರೆ.
ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ ಸಿನಿಮಾಗಿದೆ.
ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಮುಂತಾದವರ ತಾರಾಗಣವಿದೆ
ಬೆಂಗಳೂರು : ಕನ್ನಡದ ಜನಕ್ಕೆ ತನ್ನ ಹಾಸ್ಯದ ಮೂಲಕವೇ ಹತ್ತಿರವಾಗಿರುವ ನಟ ಡ್ಯಾನಿಶ್ ಸೇಠ್ ಇದೀಗ ತನ್ನ ಗೆಳತಿ ಅನ್ಯಾ ರಂಗಸ್ವಾಮಿಗೆ ಪ್ರಪೋಸ್ ಮಾಡಿದ್ದು, ಆಕೆ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಅಪ್ ಡೇಟ್ ಬಗ್ಗೆ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಮಾಹಿತಿ ನೀಡಿರುವ ಡ್ಯಾನಿಶ್, ತಾವು ತುಂಬಾ ಸಂತೋಷವಾಗಿರುವುದಾಗಿ ಹೇಳಿದ್ದಾರೆ.
ಡ್ಯಾನಿಷ್ ಸೇಠ್. ಟ್ವಿಟರ್ ನಲ್ಲಿ ಏನು ಪೋಸ್ಟ್ ಮಾಡಿದ್ದಾರೆ?
ಶುಕ್ರವಾರ ಡ್ಯಾನಿಶ್ ಅನ್ಯಾ ಜೊತೆ ಇರುವ ತನ್ನ ಬ್ಲಾಕ್ ಅಂಡ್ ವೈಟ್ ಚಿತ್ರವನ್ನುಪೋಸ್ಟ್ ಮಾಡಿ, ತನ್ನ ಜೀವನವನ್ನು ಆಕೆಯೊಂದಿಗೆ ಕಳೆಯಲು ನಿರ್ಧರಿಸಿರುವುದಾಗಿ ಘೋಷಿಸಿದನು.
“ಶೀ ಸೆಡ್ ಯೆಸ್ ! ತುಂಬಾ ಖುಷಿಯಾಗಿದೆ. ನನ್ನೊಂದಿಗೆ ನನ್ನ ಜೀವನವನ್ನು ಕಳೆಯಲು ನಿರ್ಧರಿಸಿದ ಕ್ಕಾಗಿ ಧನ್ಯವಾದಗಳು” @anyarangaswami ಎಂದು ಡ್ಯಾನಿಶ್ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಡ್ಯಾನಿಶ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಮೆಂಟ್ಸ್ ವಿಭಾಗದಲ್ಲಿ 24 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಅಭಿನಂದನಾ ಸಂದೇಶಗಳು ಹರಿದು ಬಂದಿದೆ.
ಅನ್ಯಾ ರಂಗಸ್ವಾಮಿ ಯಾರು?
ಮುಂಬೈ ಮೂಲದ ಅನ್ಯಾ ರಂಗಸ್ವಾಮಿ ಗ್ರಾಫಿಕ್ ಡಿಸೈನರ್. ತನ್ನ ಟ್ವಿಟರ್ ಬಯೋದಲ್ಲಿ, ನಾನು ಏನು ಮಾಡುತ್ತೇನೆ ಅದನ್ನು ಆನಂದಿಸುತ್ತೇನೆ ಎಂದು ಅನ್ಯಾ ಬರೆದು ಕೊಂಡಿದ್ದಾಳೆ, ಕಡಲ ತೀರದ ಪ್ರಶಾಂತವಾದ ಮನೆಯಲ್ಲಿ ಓದುವ ಮತ್ತು ಬರೆಯುವ ಕನಸು ಕಾಣುತ್ತೇನೆ ಎಂದು ಬರೆದುಕೊಂಡಿದ್ದಾರೆ.”
ಡ್ಯಾನಿಷ್ ಸೇಠ್.ಯಾರು?
ಡ್ಯಾನಿಶ್ ಒಬ್ಬ ಸ್ಟ್ಯಾಂಡ್ ಅಪ್ ಹಾಸ್ಯನಟ, ದೂರದರ್ಶನದ ಹೋಸ್ಟ್ ಮತ್ತು ರೇಡಿಯೋ ಜಾಕಿ, ಜೊತೆಗೆ ಕನ್ನಡದ ನಟ ಕೂಡ ಆಗಿದ್ದಾರೆ.
ಕೋಲ್ಕತ್ತಾ: ‘ದಿ ಡರ್ಟಿ ಪಿಕ್ಚರ್’ ನಟಿ ಆರ್ಯ ಬ್ಯಾನರ್ಜಿ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ‘ದಿ ಡರ್ಟಿ ಪಿಕ್ಚರ್’ ನಟಿ ಆರ್ಯ ಬ್ಯಾನರ್ಜಿ ಅವರು ಶುಕ್ರವಾರ ಕೋಲ್ಕತ್ತಾದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಆಕೆಯ ಮೂಗಿನಿಂದ ರಕ್ತ ಸ್ರಾವವಾಗಿದ್ದು, ವಾಂತಿ ಯಾಗಿರುವುದನ್ನು ವಿಧಿವಿಜ್ಞಾನ ತಜ್ಞರು ಪತ್ತೆ ಮಾಡಿದ್ದಾರೆ.
‘ಕೆಲಸದವಳು ಕೆಲಸಕ್ಕೆಂದು ಪ್ರತಿದಿನ ಆರ್ಯ ಬ್ಯಾನರ್ಜಿ ಮನೆಗೆ ಬರುತ್ತಿದ್ದಳು ಎಂದಿನಂತೆ ಶುಕ್ರವಾರ ಮನೆ ಕೆಸದಾಕೆ ಆರ್ಯ ಬ್ಯಾನರ್ಜಿ ಮನೆಯ ಬಾಗಿಲು ಬಡಿದ ವೇಳೆಯಲ್ಲಿ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ, ನೆರೆಹೊರೆಯವರಿಗೆ ಮಾಹಿತಿ ನೀಡಿದರು ಈ ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮವದರಿಗೆ ಮಾಹಿತಿ ನೀಡಿದ್ದಾರೆ.
ಸಿನಿಮಾ ಡೆಸ್ಕ್ : ‘ಲವ್ ಫ್ರಮ್ ಕೆಎಸ್’ ಮತ್ತು ‘ಡರ್ಟಿ ಪಿಕ್ಚರ್’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಆರ್ಯ ಬ್ಯಾನರ್ಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟಿ ಆರ್ಯ ಬ್ಯಾನರ್ಜಿ ಕೋಲ್ಕತ್ತಾದ ಜೋಧಪುರ್ದ ತಮ್ಮ ಪ್ಲಾಟ್ನಲ್ಲಿ ವಾಸವಿದ್ದು, ಅಲ್ಲಿಯೇ ಹೆಣವಾಗಿ ಸಿಕ್ಕಿದ್ದಾರೆ. ಶವವು ರಕ್ತದಿಂದ ಕೂಡಿದ್ದು, ಪೊಲೀಸರಿಗೆ ಸಾವಿನ ಮೇಲೆ ಅನುಮಾನ ಹುಟ್ಟಿದೆ. ಅಲ್ಲದೇ ಆರ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೂಲಗಳ ಪ್ರಕಾರ, ಮನೆ ಕೆಲಸದಾಕೆ ಅಂದು ಕೆಲಸಕ್ಕೆಂದು ಹೋದಾಗ ಆರ್ಯ ಪ್ಲಾಟ್ ಬೀಗ ಹಾಕಿತ್ತು, ಹಲವು ಬಾರಿ ಕೂಗಿದರೂ ಬಾಗಿಲು ತೆರೆಯದಿದ್ದಾಗ ಆರ್ಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ನವದೆಹಲಿ: ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ರೆಮೋ ಡಿಸೋಜಾ ಅವರು ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ. 46 ವರ್ಷದ ರೆಮೋ ಡಿಸೋಜಾಕೊಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ. ರೆಮೋ ಡಿಸೋಜಾ ಸದ್ಯ ಸ್ಥಿರ ಮತ್ತು ನಿಗಾದಲ್ಲಿದ್ದಾರೆ ಎಂದು ಅವರ ಕುಟುಂಬದ ಆಪ್ತಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.
ಸದ್ಯಕ್ಕೆ ವೈದ್ಯರು ಆಂಜಿಯೋಗ್ರಫಿ ಮಾಡಿದ್ದು, ಸದ್ಯ ಐಸಿಯುನಲ್ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಕಿಕ್, ಝೀರೋ, ಬಾಜಿರಾವ್ ಮಸ್ತಾನಿ, ಭಜರಂಗಿ ಭಾಯಿಜಾನ್, ಯೇ ಜವಾನಿ ಹೈ ದಿವಾನಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿರುವ ರೆಮೋ ಡಿ ಸೋಜಾ ಖ್ಯಾತ ನೃತ್ಯ ನಿರ್ದೇಶಕರಾಗಿದ್ದಾರೆ.ಡ್ಯಾನ್ಸ್ ಇಂಡಿಯಾ ಡಾನ್ಸ್, ಡ್ಯಾನ್ಸ್ ಪ್ಲಸ್ ಮತ್ತು ಝಲಕ್ ದಿಖ್ಲಾ ಜಾ ಮುಂತಾದ ಡ್ಯಾನ್ಸ್ ರಿಯಾಲಿಟಿ ಶೋಗಳ ತೀರ್ಪುಗಾರರಲ್ಲಿ ಇವರು ಒಬ್ಬರು. ಬಾಜಿರಾವ್ ಮಸ್ತಾನಿ ಚಿತ್ರದ ಡಿಸ್ಕೋ ದೀವಾನೆ, ಬಟ್ಟಮೀಜ್ ದಿಲ್, ಬಾಲಂ ಪಿಚ್ಚರಿ, ದೀವಾನಿ ಮಸ್ತಾನಿ ಮುಂತಾದ ಹಿಟ್ ಹಾಡುಗಳಿಗೆ ರೆಮೋ ಡಿಸೋಜಾ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಮುಂಬೈ: 2020ರ ಸಾಲಿನ ಏಷ್ಯಾ ಖಂಡದ ನಂಬರ್ ಒನ್ ಸೆಲೆಬ್ರಿಟಿ ಎಂಬ ಖ್ಯಾತಿಗೆ ಬಾಲಿವುಡ್ ನಟ ಸೋನು ಸೂದ್ ಪಾತ್ರವಾಗಿದ್ದಾರೆ. ಯುಕೆ ಮೂಲದ ಈಸ್ಟರ್ನ್ ಐ ಪತ್ರಿಕೆ ಪ್ರಕಟಿಸಿರುವ 50 ಏಷ್ಯನ್ ಸೆಲೆಬ್ರಿಟಿಪಟ್ಟಿಯಲ್ಲಿ ಸೋನು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ತಮಗೆ ಬಂದಿರುವ ಗೌರವದ ಬಗ್ಗೆ ಮಾತನಾಡಿರುವ ಸೋನು ಸೂದ್, “ನನ್ನ ಪ್ರಯತ್ನಗಳನ್ನು ಗುರುತಿಸಿದ್ದಕ್ಕೆ ಈಸ್ಟರ್ನ್ ಐ ಗೆ ಧನ್ಯವಾದಗಳು. ಸಾಂಕ್ರಾಮಿಕ ರೋಗ ವು ದೇಶದಲ್ಲಿ ಹೆಚ್ಚಾಗುತ್ತಿದ್ದ ಹಾಗೇ, ನನ್ನ ದೇಶವಾಸಿಗಳಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವೆಂದು ನನಗೆ ಅರಿವಾಯಿತು. ಅದು ನನ್ನ ಒಳಗಿನಿಂದ ಬಂದ ಸಹಜ ಪ್ರವೃತ್ತಿಯಾಗಿತ್ತು. ಒಬ್ಬ ಭಾರತೀಯನಾಗಿ ನನ್ನ ಜವಾಬ್ದಾರಿ, ನಾನು ನನ್ನ ಕೊನೆಯ ಉಸಿರಿನವರೆಗೂ ನಿಲ್ಲುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈ ವರ್ಷ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸಿನಿಮಾ, ಸಂಗೀತ ಮತ್ತು ಫ್ಯಾಷನ್ ಜಗತ್ತಿನ ಇತರ ಭಾರತೀಯ ವ್ಯಕ್ತಿಗಳು ಐದನೇ ಸ್ಥಾನದಲ್ಲಿ ಅರ್ಮಾನ್ ಮಲಿಕ್ ಇದ್ದಾರೆ. ಆರನೇ ಸ್ಥಾನಪ್ರಿಯಾಂಕಾ ಚೋಪ್ರಾ, ಏಳನೇ ಸ್ಥಾನ ದಲ್ಲಿ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ (11), ಆಯುಷ್ಮಾನ್ ಖುರ್ರಾನಾ (11), ದಿಲ್ಜಿತ್ ದೋಸಾಂಜ್ (14), ಶೆಹ್ನಾಜ್ ಗಿಲ್ (16), ಅಮಿತಾಭ್ ಬಚ್ಚನ್ (20), ಪಂಕಜ್ ತ್ರಿಪಾಠಿ (23), ಆಸೀಮ್ ರಿಯಾಜ್ (25), ವಿನ್ಯಾಸಕ ಮಸಾಬಾ ಗುಪ್ತಾ (32), ಹಾಸ್ಯ ನಟ ಸಲೂನಿ ಗೌರ್ (36), ಧವನಿ ಭಾನುಶಾಲಿ (42) ), ಹೆಲಿ ಷಾ (47) ಮತ್ತು ಅನುಷ್ಕಾ ಶಂಕರ್ (50). ಸ್ಥಾನ ಪಡೆದುಕೊಂಡಿದ್ದಾರೆ.
ಮುಂಬೈ: ಕರೋನವೈರಸ್ ಸಾಂಕ್ರಾಮಿಕ ರೋಗ ಇಡೀ ದೇಶವನ್ನು ಇನ್ನಿಲ್ಲದ ಹಾಗೇ ಮಾಡುತ್ತಿರುವುದು ನಮಗೆ ತಿಳಿದಿದೆ. ಇದೇ ವೇಳೆ ಇಂತಹ ಸಮಯದಲ್ಲಿ ಕೆಲಸ ಕಳೆದುಕೊಂಡು ಬೀದಿಗೆ ಬಿದಿದ್ದವರನ್ನು ಬಾಲಿವುಡ್ ನಟ ಸೋನು ಸೂದ್ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಲಾಕ್ ಡೌನ್ ಬಳಿಕ , ಆಹಾರ, ಹಣ ಮತ್ತು ಇತರ ಅಗತ್ಯಗಳನ್ನು ಹೊಂದಿದ್ದ ಸಾವಿರಾರು ಜನರಿಗೆ ನಟ ಸೋನ್ ಸೂದ್ ಸಹಾಯ ಮಾಡಿದಿದ್ದಾರೆ ಕೂಡ. ಆ ಸಮುಯದಲ್ಲಿ ತಮ್ಮ ಊರಿಗೆ ಹೋಗಲು ಬಸ್ , ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿ ಗ್ರಾಮಗಳಿಗೆ ತೆರಳಲು ಹರಸಾಹಸ ಪಡಬೇಕಾದ ಕೂಲಿ ಕಾರ್ಮಿಕರಿಗೆ ಖುದ್ದು ತಾವೇ ಹಣ ಹಾಗೂ ಬೇಕಾಗಿರುವ ಸಹಾಯವನ್ನು ಮಾಡಿದ್ದಾರೆ.
48 ವರ್ಷದ ಈ ನಟ ತನ್ನ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಇದೀಗ, ಈ ನಟ ಇನ್ನೂ ಕೆಲವು ಮಹತ್ತರ ಕೆಲಸಗಳನ್ನು ಮಾಡಲು ಸಿದ್ಧರಿದ್ದಾರೆ. ಜುಹುದಲ್ಲಿ ಇರುವ ಎಂಟು ಆಸ್ತಿಗಳನ್ನು ಅಡಮಾನ ಮಾಡಿ 10 ಕೋಟಿ ರೂ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮನಿಕಂಟ್ರೋಲ್ ನ ವರದಿಪ್ರಕಾರ, ನಟ ಜುಹುವಿನ ಶಿವಸಾಗರ ಸಿಜಿಎಚ್ ಎಸ್ ನಲ್ಲಿ 2 ಅಂಗಡಿಗಳು ಮತ್ತು 6 ಫ್ಲ್ಯಾಟ್ ಗಳನ್ನು ಅಡಮಾನ ಮಾಡಿದ್ದಾರೆ. ಈ ಕಟ್ಟಡವು ಮುಂಬೈನ ಇಸ್ಕಾನ್ ದೇವಸ್ಥಾನದ ಬಳಿ ಇರುವ ಎಬಿ ನಾಯರ್ ರಸ್ತೆಯಲ್ಲಿದೆ. ಈ ಆಸ್ತಿಗಳು ಸೋನು ಮತ್ತು ಅವರ ಪತ್ನಿ ಸೋನಾಲಿ ಜಂಟಿಯಾಗಿ ಒಡೆತನವನ್ನು ಹೊಂದಿವೆ. ಈ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಅವರು ನೀಡಿಲ್ಲ, ಸೋನು ಕಡೆಯಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ ಅಂತ ತಿಳಿಸಿದೆ.
ಅಯೋಧ್ಯೆ : ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂದಿನ ಚಿತ್ರ ರಾಮ್ಸೇತು ಶೂಟಿಂಗ್ಗಾಗಿ ರಾಮಜನ್ಮ ಭೂಮಿ ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ.
ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಲು ರಾಮ್ಸೇತು ಚಿತ್ರತಂಡ ಉತ್ತರ ಪ್ರದೇಶ ಸಿಎಂ ಕಚೇರಿಗೆ ಮನವಿ ಸಲ್ಲಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಅಕ್ಷಯ್ ಕುಮಾರ್ ನವೆಂಬರ್ 14ರಂದು ರಾಮ್ಸೇತು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದರು. ಈಗಾಗಲೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಕ್ಷಯ್ ಕುಮಾರ್ ಚಿತ್ರದ ಫಸ್ಟ್ ಲುಕ್ನ್ನ ರಿವೀಲ್ ಮಾಡಿದ್ದಾರೆ. ಪೋಸ್ಟರ್ನಲ್ಲಿ ಅಕ್ಷಯ್ ಕುಮಾರ್ ಕೇಸರಿ ಬಣ್ಣದ ಶಾಲ್ ಧರಿಸಿ ನಿಂತಿದ್ದಾರೆ. ಹಿಂದೆ ಸಮುದ್ರ ಹಾಗೂ ಬಿಲ್ಲು ಹಿಡಿದ ರಾಮನ ಚಿತ್ರವಿದೆ.
ಮುಂಬೈ : ವರದಿಗಳ ಪ್ರಕಾರ ನೀತು ಕಪೂರ್ ಮತ್ತು ವರುಣ್ ಧವನ್ ಕರೋನವೈರಸ್ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಇವರಿಬ್ಬರು ರಾಜ್ ಮೆಹ್ತಾ ಅವರ ಜಗ್ ಜಗ್ ಜೀಯೋ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯ ಚಿತ್ರವನ್ನು ಸ್ಥಗಿತಗೊಳಿಸಲಾಗಿದೆ.
ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಕೂಡ ನಟಿಸಿದ್ದಾರೆ, ಇವರಿಬ್ಬರಿಗೆ ಕೋವಿಡ್ -19 ನೆಗೆಟಿವ್ ವರದಿ ಬಂದಿದೆ. ನಟರು ಆರೋಗ್ಯವಾಗಿರುವವರೆಗೂ ಚಿತ್ರದ ಶೂಟಿಂಗ್ ಈಗ ಸ್ಥಗಿತಗೊಂಡಿದೆ.
ಅನಿಲ್ ಕಪೂರ್, ವರುಣ್ ಧವನ್ ಮತ್ತು ನೀತು ಸಿಂಗ್ ಕಳೆದ ತಿಂಗಳು ಚಿತ್ರದ ಶೂಟಿಂಗ್ ಆರಂಭಿಸಿದ್ದರು. ದೀಪಾವಳಿಯ ವಿಶೇಷ ಸಮಾರಂಭದಲ್ಲಿ ಅನಿಲ್ ಕಪೂರ್ ತಮ್ಮ ಸಹನಟರೊಂದಿಗೆ ಎರಡು ಫೋಟೋಗಳನ್ನು ಹಂಚಿಕೊಂಡಿದ್ದರು.
ಮುಂಬೈ : ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಸನ್ನಿ ಡಿಯೋಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಕುರಿತಂತೆ ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಸನ್ನಿ ಡಿಯೋಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಕೆಲ ದಿನಗಳ ಕಾಲ ಕುಲ್ಲು ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ ಎಂದು ಹೇಳಿದ್ದಾರೆ.
ಲಂಡನ್: ಬಾಲಿವುಡ್, ಹಾಲಿವುಡ್ ನಲ್ಲೂ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಜೋನಾಸ್, ಬ್ರಿಟಿಷ್ ಫ್ಯಾಷನ್ ಕೌನ್ಸಿಲ್ನ ಪಾಸಿಟಿವ್ ಚೇಂಜ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತ ಮಾಹಿತಿಯನ್ನು ಟ್ವಿಟರ್ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಮುಂದಿನ ವರ್ಷ ನಾನು ಲಂಡನ್ನಲ್ಲಿ ವಾಸಿಸಲಿದ್ದೇನೆ ಮತ್ತು ಕೆಲಸ ಅಲ್ಲೇ ಮಾಡುತ್ತೇನೆ. ಬ್ರಿಟಿಷ್ ಫ್ಯಾಷನ್ ಕೌನ್ಸಿಲ್ನ ಪಾಸಿಟಿವ್ ಚೇಂಜ್ ರಾಯಭಾರಿಯಾಗಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
“ಫ್ಯಾಷನ್” ಯಾವಾಗಲೂ ಪಾಪ್ ಸಂಸ್ಕೃತಿಯ ನಾಡಿಮಿಡಿತ ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಹಾಗೂ ಜನರನ್ನು ಒಟ್ಟುಗೂಡಿಸುವ ಪ್ರಬಲ ಶಕ್ತಿಯಾಗಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು :. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆಹಂದಿ’, ‘ಫರೆಬ್’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದ ಫರಾಜ್ ಖಾನ್ ಬುಧವಾರ (ನ.4) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಈ ಸುದ್ದಿಯನ್ನು ಬಾಲಿವುಡ್ ನಿರ್ದೇಶಕಿ/ನಿರ್ಮಾಪಕಿ ಪೂಜಾ ಭಟ್ ಖಚಿತಪಡಿಸಿದ್ದಾರೆ. ‘ಫರಾಜ್ ಖಾನ್ ನಮ್ಮೆಲ್ಲರನ್ನು ಬಿಟ್ಟುಹೋದರು ಎಂಬುದನ್ನು ತಿಳಿಸಲು ತುಂಬ ನೋವಾಗುತ್ತಿದೆ. ಅವರಿಗೆ ಅಗತ್ಯ ಇದ್ದಾಗ ಸಹಾಯ ಮಾಡಿದ ಮತ್ತು ಶುಭ ಹಾರೈಸಿದ್ದ ಎಲ್ಲರಿಗೂ ಧನ್ಯವಾದಗಳು. ಅವರ ಕುಟುಂಬದವರಿಗಾಗಿ ಪ್ರಾರ್ಥಿಸಿ. ಅವರ ಅಗಲಿಕೆಯಿಂದ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ’ ಎಂದು ಪೂಜಾ ಭಟ್ ಟ್ವೀಟ್ ಮಾಡಿದ್ದಾರೆ.
ಶ್ವಾಸಕೋಶದ ಇನ್ಫೆಕ್ಷನ್ನಿಂದ ಬಳಲುತ್ತಿರುವ ಫರಾಜ್ ಖಾನ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಕೆಮ್ಮಿನಿಂದ ಬಳಲುತ್ತಿರುವ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಚಿಕಿತ್ಸೆಗಾಗಿ ಇನ್ನೂ 25 ಲಕ್ಷ ರೂ. ಬೇಕಾಗಿದೆ ಎಂದು ಫರಾಜ್ ಕುಟುಂಬದವರು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸಲ್ಮಾನ್ ಖಾನ್, ಫೂಜಾ ಭಟ್ ಮುಂತಾದ ಸೆಲೆಬ್ರಿಟಿಗಳು ಸ್ಪಂದಿಸಿದ್ದರು. ಕಡೆಗೂ ಫರಾಜ್ ಬದುಕುಳಿಯಲಿಲ್ಲ.
ಮುಂಬೈ : ಬಾಲಿವುಡ್ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರು ನಟಿ ಲುವಿಯೆನಾ ಲೋಧ್ ವಿರುದ್ಧ 1 ಕೋಟಿ ರೂ.ಗಳ ನಷ್ಟವನ್ನು ಕೋರಿ ಬಾಂಬೆ ಹೈಕೋರ್ಟ್ ಮುಂದೆ ಸಿವಿಲ್ ಮೊಕದ್ದಮೆ ಹೂಡಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ‘ಅಸಹ್ಯಕರ, ಅಸಹ್ಯಕರ, ಸುಳ್ಳು, ಅಪಮಾನಕರ, ಅಪಪ್ರಚಾರದ ಆರೋಪಗಳನ್ನು’ ಮಾಡದಂತೆ ತಡೆಯುವಂತೆ ನೀಡಿದ್ದಾರೆ.
ನವೆಂಬರ್ 16 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ. ಲುಹೇನಾ ಲೋಧ್ ಅವರ ಕಿರುಕುಳ ಆರೋಪಗಳನ್ನು ನಿರಾಕರಿಸಿ ಮಹೇಶ್ ಭಟ್ ಅವರ ಕಾನೂನು ತಂಡ ಶುಕ್ರವಾರ ಹೇಳಿಕೆ ನೀಡಿದೆ. ಲುವಿಯೆನಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗುರುವಾರ, ಲುವಿನಾ ಲೋಧ್, ತಮ್ಮ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ, ಮಹೇಶ್ ಭಟ್ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹೇಶ್ ಮತ್ತು ಮುಖೇಶ್ ಭಟ್ ವಿರುದ್ಧ ಲುವಿಯೆನಾ ಯಾವುದೇ ಮಾನಹಾನಿಕರ ಹೇಳಿಕೆ ನೀಡುವುದಿಲ್ಲ ಎಂದು ಲುವಿಯೆನಾ ಲೋಧ್ ಅವರ ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪರಿಣಾಮ, ಲುವಿಯೆನಾ ಅವರು ಯಾವುದೇ ಅಪಪ್ರಚಾರದ ಹೇಳಿಕೆ ನೀಡುವುದನ್ನು ತಡೆಯಲು ಭಟ್ಗಳು ತಡೆಯಾಜ್ಞೆ ಕೋರಿದ್ದಾರೆ.
ವಿಶೇಶ್ ಫಿಲ್ಮ್ಸ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಶುಕ್ರವಾರ ಮಹೇಶ್ ಭಟ್ ಅವರ ಕಾನೂನು ತಂಡ ನೀಡಿದ ಹೇಳಿಕೆಯನ್ನು ಹಂಚಿಕೊಂಡಿದೆ. ಹೇಳಿಕೆಯಲ್ಲಿ, “ಒಬ್ಬ ಲುವಿಯೆನಾ ಲೋಧ್ ಬಿಡುಗಡೆ ಮಾಡಿದ ವೀಡಿಯೊವನ್ನು ಉಲ್ಲೇಖಿಸಿ. ನಾವು, ನಮ್ಮ ಕ್ಲೈಂಟ್ ಮಹೇಶ್ ಭಟ್ ಪರವಾಗಿ, ಆರೋಪಗಳನ್ನು ನಿರಾಕರಿಸುತ್ತೇವೆ. ಇಂತಹ ಆರೋಪಗಳು ಸುಳ್ಳು ಮತ್ತು ಮಾನಹಾನಿಕರವಲ್ಲ ಆದರೆ ಕಾನೂನಿನಲ್ಲಿ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ನಮ್ಮ ಕ್ಲೈಂಟ್ ಸಲಹೆಯಂತೆ ಕಾನೂನಿನ ಪ್ರಕಾರ ಅಂತಹ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.
ಲುವಿಯೆನಾ ಲೋಧ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸುಮಾರು 1 ನಿಮಿಷ ಮತ್ತು 48 ಸೆಕೆಂಡುಗಳಷ್ಟು ಉದ್ದದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಮಹೇಶ್ ಭಟ್ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು. ವೀಡಿಯೊದಲ್ಲಿ, ಅವರು ಮಹೇಶ್ ಭಟ್ ಅವರ ಸೋದರಳಿಯ ಸುಮಿತ್ ಸಭರ್ವಾಲ್ ಅವರ ಪತ್ನಿ ಎಂದು ಪರಿಚಯಿಸಿಕೊಳ್ಳುವ ಮೂಲಕ ಪ್ರಾರಂಭಿಸುತ್ತಾರೆ ಮತ್ತು ‘ತಮ್ಮ ಕುಟುಂಬದ ಸುರಕ್ಷತೆಗಾಗಿ’ ಈ ವೀಡಿಯೊವನ್ನು ತಯಾರಿಸಲು ಮತ್ತು ಹಂಚಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಸಿನಿಮಾಡೆಸ್ಕ್: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಶುಕ್ರವಾರ ತಮ್ಮ ಇನ್ ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 46 ಮಿಲಿಯನ್ ಗೆ ಮುಟ್ಟಿರುವ ಕಾರಣಕ್ಕೆ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಅಂದ ಹಾಗೇ ಅವರು ಹಳದಿ ಮತ್ತು ಗುಲಾಬಿ ಹೂಗುಚ್ಛವನ್ನು ಹಿಡಿದಿರುವ ಮೂರು ಟಾಪ್ ಲೆಸ್ ಚಿತ್ರಗಳನ್ನು ಹಂಚಿಕೊಂಡಿದ್ದು, ವಿಭಿನ್ನ ರೀತಿಯಲ್ಲಿ ಹೇಳಿದ್ದಾರೆ.
ಈ ಚಿತ್ರಗಳನ್ನು ಸುಂದರ ವಾದ ಬಿಳಿ ಯ ಹಿನ್ನೆಲೆಯಲ್ಲಿ ಸೆರೆಹಿಡಿಯಲಾಗಿದ್ದು, ಅವರು ತಮ್ಮ ಚಿತ್ರದ ಸೌಂದರ್ಯಹೆಚ್ಚಿಸಲು. “ಲವ್ ಯು, ಥ್ಯಾಂಕ್ಯೂ” ಎಂದು ಬರೆದುಕೊಂಡಿದ್ದಾರೆ.. ಏಳು ತಿಂಗಳ ಕಾಲ ತಮ್ಮ ಕೆಲಸ ವನ್ನು ಪುನರಾರಂಭಿಸಿದ ಜಾಕ್ವೆಲಿನ್ ಚಿತ್ರಗಳಲ್ಲಿ ಬಿಳಿ ಪ್ಯಾಂಟ್ ಧರಿಸಿದ್ದನ್ನು ಕಾಣಬಹುದು.ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅವರು ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ಅಪ್ ಡೇಟ್ ಮಾಡುತ್ತಿದ್ದಾರೆ.
ಮುಂಬೈ: ಬಾಲಿವುಡ್ ನಟ, ರಾಜ್ಯಸಭಾ ಮಾಜಿ ಸಂಸದ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ ಚಕ್ರವರ್ತಿ (ಮಿಮೋ) ಹಾಗೂ ಮಿಥುನ್ ಚಕ್ರವರ್ತಿ ಪತ್ನಿ, ನಟಿ ಯೋಗಿತಾ ಬಾಲಿ ವಿರುದ್ಧ ಅತ್ಯಾಚಾರ ಹಾಗೂ ಬೆದರಿಕೆ ಆರೋಪದಡಿ ಮುಂಬೈನ ಓಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಮಹಾಕ್ಷಯ ಚಕ್ರವರ್ತಿ ವಿರುದ್ಧ ಮಾಡೆಲ್ವೊಬ್ಬರು ಪ್ರಕರಣ ದಾಖಲಿಸಿದ್ದು, 2015ರಿಂದ ಮಹಾಕ್ಷಯ ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಬಲವಂತವಾಗಿ ನನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದು, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಗರ್ಭಿಣಿಯಾಗಿದ್ದಾಗ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ಒಪ್ಪಿಕೊಳ್ಳದಿದ್ದಾಗ ಮಾತ್ರೆಗಳನ್ನು ಕೊಟ್ಟು ಗರ್ಭಪಾತ ಮಾಡಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಮಿಥುನ್ ಚಕ್ರವರ್ತಿ ಅವರ ಪತ್ನಿ ಯೋಗಿತಾ ಬಾಲಿ ದೂರು ಹಿಂಪಡೆದುಕೊಳ್ಳುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿರುವುದಾಗಿ ಕೂಡ ಮಾಡೆಲ್ ಆರೋಪಿಸಿದ್ದಾರೆ.ಬಳಿಕ ಸಂತ್ರಸ್ತೆ ಈ ಸಂಬಂಧ ಎಫ್ಐಆರ್ ದಾಖಲಿಸುವಂತೆ ಕೋರಿ ದೆಹಲಿಯ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಾಥಮಿಕ ಸಾಕ್ಷ್ಯದ ಆಧಾರದ ಮೇಲೆ ಮಹಾಕ್ಷಯ ಚಕ್ರವರ್ತಿ ಹಾಗೂ ಯೋಗಿತಾ ಬಾಲಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಇದೀಗ ಆದೇಶ ನೀಡಿದೆ.
ಮುಂಬೈ : ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಲಕ್ಷ್ಮೀ ಬಾಂಬ್’ ಸಿನಿಮಾ ಕುತೂಹಲ ಮೂಡಿಸಿದೆ. ಇದರ ನಡುವೆ ಚಿತ್ರದಲ್ಲಿ ‘ಲವ್ ಜಿಹಾದ್’ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಟ ಅಕ್ಷಯ್ ಕುಮಾರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ನೋಡಿರುವ ಕೆಲವರು ಲವ್ ಜಿಹಾದ್ ಅಂಶ ಇದೆ ಎಂದಿದ್ದಾರೆ. ಇದರಲ್ಲಿ ಹೀರೋ ಅಕ್ಷಯ್ ಕುಮಾರ್ ಪಾತ್ರದ ಹೆಸರು ಆಸಿಫ್. ನಾಯಕಿ ಕಿಯಾರಾ ಅಡ್ವಾನಿ ಪಾತ್ರದ ಹೆಸರು ಪ್ರಿಯಾ! ಇದೇ ಕಾರಣಕ್ಕಾಗಿ ಇದನ್ನು ಲವ್ ಜಿಹಾದ್ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲದೆ, ‘ಲಕ್ಷ್ಮೀ ಬಾಂಬ್’ ನಿರ್ಮಾಣ ಮಾಡಿರುವ ಶಬೀನಾ ಖಾನ್ ಕಾಶ್ಮೀರದ ಪ್ರತ್ಯೇಕವಾದಿಗಳು ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಈ ಸಿನಿಮಾಗೆ ‘ಲಕ್ಷ್ಮೀ ಬಾಂಬ್’ ಬದಲು ‘ಸಕೀನಾ ಬಾಂಬ್’ ಎಂದು ಹೆಸರಿಡುವುದು ಒಳಿತು ಎಂದು ಟ್ರೋಲ್ ಮಾಡಲಾಗುತ್ತಿದೆ. ಇದರ ಜೊತೆ #ShameOnUAkshayKumar ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಇನ್ನು ನಿಜವಾದ ಕತೆ, ಲವ್ ಜಿಹಾದ್ ಬಗ್ಗೆ ತಿಳಿಯಲು ಚಿತ್ರ ಬಿಡುಗಡೆಯಾಗುವವರೆಗೆ ಕಾದು ನೋಡಬೇಕಾಗಿದೆ.
ಸಿನಿಮಾಡೆಸ್ಕ್: ಕಂಗನಾ ರಣಾವತ್ ಅವರು ಎ.ಎಲ್ ವಿಜಯ್ ನಿರ್ದೇಶನದ ತಲೈವಿ ಚಿತ್ರದಲ್ಲಿ ಟೈಟಲರ್ ಪಾತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟಿ ಜೆ.ಜಯಲಲಿತಾ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. ದಿವಂಗತ ರಾಜಕೀಯ ನಾಯಕ ಆರು ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದು, ಕಂಗನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಲೈವಿ ಸೆಟ್ ನಲ್ಲಿ ಕೆಲವು ಸುದ್ದಿಗಳನ್ನು ಹಂಚಿಕೊಂಡಿರುವ ನಟಿ, ಜಯಲಲಿತಾ ಅವರನ್ನು ಹೋಲುವಂತಹ ಚಿತ್ರಗಳು ನಿಮ್ಮನ್ನು ಚಕಿತಗೊಳಿಸಲಿದೆ.
ಹೌದು,ತಲೈವಿ ಚಿತ್ರದ ಇತ್ತೀಚಿನ ಶೆಡ್ಯೂಲ್ ಅನ್ನು ಮುಗಿಸಿದ ನಂತರ ಕಂಗನಾ ರನಾವತ್ ಅವರು ಸೆಟ್ ನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಮತ್ತು ಜೆ ಜಯಲಲಿತಾ ಅವರ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಂಗನಾ ಅವರು ಚಿತ್ರದಲ್ಲಿ ಜಯಲಲಿತಾ ಅವರಂತೆಯೇ ಕಪ್ಪು ಬಿಳುಪು ಚಿತ್ರಗಳಿದ್ದು, ಜಯಲಲಿತಾ ಅವರ ಪ್ರತಿಕೃತಿಯಂತೆ ಕಂಗನಾ ಬಣ್ಣ ಹಚ್ಚಿದ್ದಾಳೆ. ಈ ಚಿತ್ರಗಳನ್ನು ಹಂಚಿಕೊಳ್ಳುವಾಗ ಅವಳು ಅದರ ಕ್ಯಾಪ್ಷನ್ ನಲ್ಲಿ , “ಜಯ ಮಾ ಅವರ ಆಶೀರ್ವಾದದಿಂದ ನಾವು ಕ್ರಾಂತಿಕಾರಿ ನಾಯಕಿ ತಲೈವಿಯ ಇನ್ನೊಂದು ಶೆಡ್ಯೂಲ್ ಅನ್ನು ಮುಗಿಸಿದ್ದೇವೆ. ಕರೋನ ನಂತರ ಅನೇಕ ಸಂಗತಿಗಳು ವಿಭಿನ್ನವಾಗಿರುತ್ತವೆ ಅಂತ ಹೇಳಿಕೊಂಡಿದ್ದಾರೆ.
With the blessings of Jaya Ma we completed one more schedule of Thalaivi- the revolutionary leader. After corona many things are different but between action and before cut nothing changes. Thank you team @vishinduri@ShaaileshRSingh#ALVijaypic.twitter.com/CghmfK0JQf
ನವದೆಹಲಿ: COVID ರೋಗಿಗಳಿಗೆ ನರ್ಸ್ ಆಗಿ ಸೇವೆ ಸಲ್ಲಿಸಲು ಆರಂಭಿಸಿದ ನಂತರ ಬೆಳಕಿಗೆ ಬಂದ ನಟಿ ಶಿಖಾ ಮಲ್ಹೋತ್ರಾ, COVID19 ಪಾಸಿಟಿವ್ ಪರೀಕ್ಷೆ ಸೊಂಕಿಗೆ ಈಡಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂದ ಹಾಗೇ ಸೊಂಕಿಗೆ ಈಡಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಟಿ ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೊನಾವೈರಸ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎರಡು ಫೋಟೋಗಳ ಕೊಲಾಜ್ ಅನ್ನು ಹಂಚಿಕೊಂಡು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಹಾರೈಕೆ ಮತ್ತು ಪ್ರಾರ್ಥನೆಯೊಂದಿಗೆ ಶೀಘ್ರದಲ್ಲೇ ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಿತೈಷಿಗಳ ಪ್ರಾರ್ಥನೆಯೊಂದಿಗೆ ಕಳೆದ ಆರು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದೆ. ಈಗ ಅದರ ವಿರುದ್ಧ ಹೋರಾಟ ಮಾಡುವೆ ಎಂದಿದ್ದಾರೆ. “ಇದುವರೆಗೂ COVID19 ಗಾಗಿ ಯಾವುದೇ ಲಸಿಕೆಯನ್ನು ತಯಾರಿಸಲಾಗಿಲ್ಲ, ಆದ್ದರಿಂದ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಬಗ್ಗೆ ಕಾಳಜಿ ವಹಿಸಿ, ಮಾಸ್ಕ್ ಗಳನ್ನು ಧರಿಸಿ, ಕೈಗಳನ್ನು ನಿಯಮಿತವಾಗಿ ತೊಳೆಯಿರಿ, ಸಾನಿಟೈಸರ್ ಬಳಸಲು ಮರೆಯಬೇಡಿ.” ಅನಂತ ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞತೆ.”
ನವದೆಹಲಿ : ಬಾಲಿವುಡ್ ನಟ ಅಜಯ್ ದೇವಗನ್ ಸಹೋದರ ನಿರ್ದೇಶಕ ಅನಿಲ್ ದೇವಗನ್ ಸೋಮವಾರ ವಿಧಿವಶರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಜಯ್ ದೇವಗನ್ ನಾನು ಕಳೆದ ರಾತ್ರಿ ನನ್ನ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡೆ, ಸಾಂಕ್ರಾಮಿಕ ರೋಗವಿರುವ ಕಾರಣ ನಾವು ವೈಯಕ್ತಿಕ ಪ್ರಾರ್ಥನಾ ಸಭೆ ನಡೆಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ
ಅನಿಲ್ ದೇವಗನ್ ಅವರು ರಾಜು ಚಾಚಾ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಹೆಸರು ಮಾಡಿದ್ದರು. ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ನವದೆಹಲಿ : ಎನ್ ಡಿಪಿಎಸ್ ವಿಶೇಷ ನ್ಯಾಯಾಲಯ, ಎನ್ ಸಿಬಿ ಯಿಂದ ಬಂಧನಕ್ಕೊಳಗಾಗಿರುವ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಸರ್ಪಂಡೆ ತಿಳಿಸಿದ್ದಾರೆ.
ಕಳೆದ ತಿಂಗಳು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ಗಳ ನಿಯಂತ್ರಣ ದಳ (ಎನ್ ಸಿಬಿ) ಇವರಿಬ್ಬರನ್ನು ಬಂಧಿಸಿತ್ತು. ಅಂದ ಹಾಗೇ ಈ ಹಿಂದೆ ನಟಿ ಮತ್ತು ಆಕೆಯ ಸಹೋದರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಲಾಗಿದೆ.
ನಂತರ ಅವರು ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಮನವಿಯ ಮೇರೆಗೆ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಬಂಧಿತ ಆರೋಪಿಗಳು ಮಾದಕ ದ್ರವ್ಯ ಸಿಂಡಿಕೇಟ್ ನ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಮಾದಕ ದ್ರವ್ಯ ನಿಯಂತ್ರಣ ದಳ (ಎನ್ ಸಿಬಿ) ತಿಳಿಸಿದ್ದು, ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಗಾಗಿ ತನಿಖೆ ನಡೆಸಲು ಪಣ ತೊಟ್ಟಿದ್ದಾರೆ.
ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಪತಿ, ನಟಿ ಮೇಘಾನ್ ರಾಜ್ ಅವರಿಗೆ ಸೀಮಂತ ಶಾಸ್ತ್ರ ಇಂದು ನೇರವೇರಿತು.
ಈ ವೇಳೆ ಚಿರುವಿನ ದೊಡ್ಡ ಕಟೌಟ್ ಇಟ್ಟು ಮೇಘನಾ ಸೀಮಂತ ಶಾಸ್ತ್ರ ವನ್ನು ಮಾಡಿಸಿಕೊಂಡದ್ದು ವಿಶೇಶವಾಗಿತ್ತು. ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದು, ಕೇವಲ ಕೆಲವು ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಡಿಜಿಟಲ್ಡೆಸ್ಕ್: ಎಲ್ಲರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಒಂದು ದಿನ ಮಾತ್ರ ಉಳಿದುಕೊಂಡಿದೆ. ಹೊಸ ಸೀಸನ್ ನೊಂದಿಗೆ ಬಿಗ್ ಬಾಸ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ಅಂದ ಹಾಗೇ ಈ ಬಾರಿಯ ಬಿಗ್ ಬಾಸ್ ಹಿಂದಿನ ಸೀಸನ್ ಗಳಿಗಿಂತ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ವಿಭಿನ್ನವಾಗಿರುತ್ತದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ರೆಸ್ಟೋರೆಂಟ್, ಸ್ಪಾ, ಥಿಯೇಟರ್ ಮತ್ತು ಮಾಲ್ ಗಳನ್ನು ಒಳಗೊಂಡಿದೆ. ಬಿಗ್ ಬಾಸ್ 14 ಗ್ರ್ಯಾಂಡ್ ಪ್ರೀಮಿಯರ್ ಗಿಂತ ಮುಂಚೆ ನಾವು ನಿಮಗೆ ಬಿಗ್ ಬಾಸ್ 14 ರ ಸ್ಪರ್ಧಿಗಳ ಸಂಭಾವನೀಯ ಪಟ್ಟಿಯನ್ನು ನೀಡುತ್ತಿದ್ದೇವೆ.
ಜಾನ್ ಕುಮಾರ್ ಸಾನು
ರುಬಿನಾ ದಿಲಿಕ್ ಮತ್ತು ಅಭಿನವ್ ಶುಕ್ಲಾ
ಪವಿತ್ರಾ ಪುನಿಯಾ
ಇಜಾಜ್ ಖಾನ್
ನಿಕ್ಕಿ ತಾಂಬೋಲಿ
ರಾಧೆ ಮಾ
ಜಾಸ್ಮಿನ್ ಭಾಸಿನ್
ರಾಹುಲ್ ವೈದ್ಯ
ನಿಶಾಂತ್ ಸಿಂಗ್ ಮಲ್ಖಾನಿ
ಸಾರಾ ಗುರ್ಪಾಲ್
ನವದೆಹಲಿ : ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ಮತ್ತು ವಿಸೆರಾ ವರದಿಗಳ ಮರುಮೌಲ್ಯಮಾಪನ ಮಾಡುತ್ತಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸಮಿತಿಯ ನೇತೃತ್ವ ವಹಿಸಿದ್ದ ಡಾ.ಸುಧೀರ್ ಗುಪ್ತಾ, ಇದೊಂದು ಆತ್ಮಹತ್ಯೆ ಪ್ರಕರಣವಾಗಿದ್ದು, ಕೊಲೆ ಯತ್ನವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿದೆ ಎಂದು ಹೇಳಿದ್ದಾರೆ.
‘ಸುಶಾಂತ್ ಸಾವು ಆತ್ಮಹತ್ಯೆ ಪ್ರಕರಣ. ಕೊಲೆ ಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ’ ಎಂದು ಡಾ.ಸುಧೀರ್ ಗುಪ್ತಾ ಹೇಳಿದ್ದಾರೆ ಅಂತ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಏಮ್ಸ್ ವೈದ್ಯರ ತಂಡ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ಮತ್ತು ವಿಸೆರಾ ವರದಿಗಳನ್ನು ಆಧರಿಸಿ, ಅವರ ಬಳಿ ಲಭ್ಯವಿರುವ ಶೇ.20ರಷ್ಟು ವಿಸೆರಾ ಮಾದರಿಯನ್ನು ಆಧರಿಸಿ ಸುಶಾಂತ್ ಸಿಂಗ್ ಮರಣದ ಬಗ್ಗೆ ಮರು ಮೌಲ್ಯಮಾಪನ ಮಾಡಿತ್ತು. ವಿಧಿವಿಜ್ಞಾನ ಸಂಸ್ಥೆಗಳು ಒಂದು ಲ್ಯಾಪ್ ಟಾಪ್, ಎರಡು ಹಾರ್ಡ್ ಡಿಸ್ಕ್ ಗಳು, ಒಂದು ಕ್ಯಾನನ್ ಕ್ಯಾಮೆರಾ ಮತ್ತು ಎರಡು ಮೊಬೈಲ್ ಫೋನ್ ಗಳನ್ನು ಪರೀಕ್ಷಿಸಿವೆ ಎನ್ನಲಾಗಿದೆ.
ಏಮ್ಸ್ ವೈದ್ಯಕೀಯ ಮಂಡಳಿಯ ಫಲಿತಾಂಶಗಳು ಕೂಪರ್ ಆಸ್ಪತ್ರೆಯ ಫಲಿತಾಂಶಗಳನ್ನು, ಸುಶಾಂತ್ ಸಿಂಗ್ ರಜಪೂತ್ ಅವರ ಶವಪರೀಕ್ಷೆ ನಡೆಸಿದ ನಂತರ ದೊರೆತ ಿರುವ ಫಲಿತಾಂಶಗಳನ್ನು ಆಧಾರಿಸಿಡ. ಅಲ್ಲದೆ, ಯಾವುದೇ ತಪ್ಪು ಮಾಹಿತಿ ಇಲ್ಲದೆ ಆತ್ಮಹತ್ಯೆ ಪ್ರಕರಣ ಎಂದು ಸಾಂದರ್ಭಿಕ ಸಾಕ್ಷ್ಯಗಳು ಸೂಚಿಸುತ್ತವೆ ಅಂತ ತಿಳಿಸಿದೆ.
ಮುಂಬೈ: ಬಾಲಿವುಡ್ ಮತ್ತೋರ್ವ ನಟ ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಿವುಡ್ನ ಉದಯೋನ್ಮುಖ ನಟ ಅಕ್ಷತ್ ಉತ್ಕರ್ಷ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸ್ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮೂಲತ ಬಿಹಾರದ ಪುಜಾಫರ್ಪುರ್ದವರಾಗಿದ್ದ ಇವರು ಸದ್ಯ ಮುಂಬೈನಲ್ಲಿ ವಾಸವಾಗಿದ್ದರು. ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರು ಹುಟ್ಟೂರಿಗೆ ಅಕ್ಷತ್ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಲಾಕ್ಡೌನ್ ಹೇರಿಕೆ ಮಾಡಿದ್ದ ಕಾರಣ ಕೆಲಸವಿಲ್ಲದೇ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಆದರೆ ಅವರ ಕುಟುಂಬಸ್ಥರು ಇದನ್ನ ತಳ್ಳಿಹಾಕಿದ್ದು, ಮಗನ ಕೊಲೆಯಾಗಿದೆ ಎಂದು ಆರೋಪ ಮಾಡಿದ್ದಾರೆ.
ನವದೆಹಲಿ : ಖ್ಯಾತ ನಿರ್ದೇಶಕ ಶೇಖರ್ ಕಪುರ್ ಅವರನ್ನು ಫಿಲ್ಮ್ ಅಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿಐಐ) ಸೊಸೈಟಿಯ ನೂತನ ಅಧ್ಯಕ್ಷರಾಗಿ ಹಾಗೂ ಎಫ್ ಟಿಐಐ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
2023ರ ಮಾರ್ಚ್ 3ರವರೆಗೆ ಕಾಪೂರ್ ಅವರ ಅಧಿಕಾರಾವಧಿ ಇರಲಿದೆ.
ಡಿಜಿಟಲ್ಡೆಸ್ಕ್: ನಟ ಸೋನು ಸೂದ್, ‘ ಲಾಕ್ ಡೌನ್ ಸಮಯದಲ್ಲಿ ಮಾಡಿದ ದಾನಧರ್ಮ, ಅದರಲ್ಲೂ ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ತಮ್ಮ ತವರು ಊರುಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವಲ್ಲಿ ಮಾಡಿದ ಕೆಲಸ ದೇಶದ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.
ಇವೆಲ್ಲದರ ನಡುವೆ ನಟ ಸೋನ್ ಸೂದ್ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ಅವರು ಈ ರೀತಿ ಕೆಲಸ ಮಾಡುತ್ತಿದ್ದಾರೆ ಅಂಥ ಹಲವು ಮಂದಿ ಸೂದ್ ಕೆಲಸದ ಬಗ್ಗೆ ಟೀಕೆ ಮಾಡಿದ್ದರು. ಈ ನಡುವೆ ನಟ ಸೋನು ಸೂದ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಈಗ ಹೇಳಿಕೊಂಡಿದ್ದಾರೆ.
ಹೌದು. ‘ನಟನಾಗಿ ನನ್ನ ಕೈಗಳು ತುಂಬಿ ಹೋಗಿದೆ ಇದರ ಜೊತೆಗೆ ನಾನು ಸಾಕಷ್ಟು ಚಾರಿಟಿ ಕೆಲಸ ಮಾಡುತ್ತಿದ್ದೇನೆ, ಇದು ಸಾಕಷ್ಟು ಗಮನ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ರಾಜಕೀಯ ಸೇರುವ ಬಗ್ಗೆ ಸದ್ಯಕ್ಕೆ ಅಲೋಚನೆ ಇಲ್ಲ, ಇದಲ್ಲದೇ 10 ವರ್ಷಗಳ ನಂತರ ನನಗೆ ವಿಧಿ ಏನು ಇದೆ ಎಂಬ ಬಗ್ಗೆ ನನಗೆ ಯಾವುದೇ ಸುಳಿವಿಲ್ಲ’ ಅವರು ಹೇಳಿಕೊಂಡಿದ್ದಾರೆ.
ಸದ್ಯ ಅವರು ದಕ್ಷಿಣ ಸಿನಿಮಾ ರಂಗದ ಎರಡು ಹಾಗೂ ಯಶ್ ರಾಜ್ ಅಭಿನಯದ ‘ಪೃಥ್ವಿರಾಜ್’ ಚಿತ್ರದ ಶೂಟಿಂಗ್ ನಲ್ಲಿ ಅವರು ಮುಂದಿನ ವಾರ ಶೂಟಿಂಗ್ ಆರಂಭಿಸಲಿದ್ದಾರೆ.
ನವದೆಹಲಿ : ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ಶುಕ್ರವಾರ (ಸೆಪ್ಟೆಂಬರ್ 25) ಒಂದು ಗಂಟೆಗಳ ಕಾಲ ವಿಚಾರಣೆ ಮಾಡಿದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳು ಇಂದು ನಟಿ ದೀಪಿಕಾ ಪಡುಕೋಣೆಯನ್ನು ನಟಿಯನ್ನು ಪ್ರಶ್ನಿಸಲಿದ್ದಾರೆ.
ಇನ್ನೂ ವಿಚಾರಣೆ ಸಲುವಾಗಿ ಇಂದು ಬೆಳಗ್ಗೆ 9.45ಕ್ಕೆ ನಟಿ ದೀಪಿಕಾ ಪಡುಕೋಣೆ ಎನ್ ಸಿಬಿ ಕಚೇರಿಗೆ ಆಗಮಿಸಿದರು. ಬೆಳಗ್ಗೆ 10 ಗಂಟೆಗೆ ಆಕೆಯನ್ನು ವಿಚಾರಣೆಗೆ ಕರೆಯಲಾಗಿತ್ತು. ಇನ್ನೂ ಪ್ರಕರಣ ಸಂಬಂಧ ದೀಪಿಕಾ ಮಾತ್ರವಲ್ಲದೆ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನೂ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಗೋವಾಕ್ಕೆ ತೆರಳಿದ್ದ ಪಡುಕೋಣೆ, ಗುರುವಾರ ಪತಿ ರಣವೀರ್ ಸಿಂಗ್ ಜೊತೆ ಮುಂಬೈಗೆ ಆಗಮಿಸಿದ್ದರು.
ಡಿಜಿಟಲ್ಡೆಸ್ಕ್: ಈ ವಾರದ ಆರಂಭದಲ್ಲಿ ತನ್ನ ಪತಿ ಸ್ಯಾಮ್ ಮುಂಬೈ ವಿರುದ್ಧ ಹಲ್ಲೆ, ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ದೂರು ದಾಖಲಿಸಿದ್ದ ಪೂನಂ ಪಾಂಡೆ, ತನ್ನ ಮದುವೆಯನ್ನು ಅಂತ್ಯಗೊಳಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಪೂನಂ, ನನ್ನ ಯಾವಾಗಳೂ ಆತ ಕೆಟ್ಟದಾಗಿ ಬೈಯುತ್ತಿದ್ದ ಮತ್ತು ಪ್ರಾಣಿಯಂತೆ ನನ್ನ ನಡೆಸಿಕೊಳ್ಳುತ್ತಿದ್ದ ಇದಲ್ಲದೇ ಆತ ನನ್ನ ಹೊಡೆಯುತ್ತಿದ್ದ ಹೀಗಾಗಿ ಈ ರೀತಿ ನಡೆದುಕೊಳ್ಳುವ ವ್ಯಕ್ತಿಯೊಬ್ಬನ ಜೊತೆಗೆ ಸಂಬಂಧ ಮುಂದುವರೆಸುವುದು ಒಳ್ಳೆಯ ವಿಚಾರವಲ್ಲ ಅಂತ ಹೇಳಿಕೊಂಡಿದ್ದಾರೆ.
ನನ್ನ ಮುಖಕ್ಕೆ ಪಂಚ್ ಮಾಡಿ, ನನ್ನ ಕೂದಲನ್ನು ಎಳೆದು ಕೊಂಡು ನನ್ನ ತಲೆಯನ್ನು ಹಾಸಿಗೆಯ ಮೂಲೆಗೆ ಹೊಡೆದ ಹೀಗಾಗಿ ಸ್ಯಾಮ್ ಮುಂಬೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಮಾಡಿದ್ದೇನೆ ಅಂತ ತಿಳಿಸಿದ್ದಾರೆ. ನನ್ನ ದೇಹದ ಮೇಲೆ ಮಂಡಿಯೂರಿ, ಆತ ನನ್ನ ಮೇಲೆ ಹಲ್ಲೆ ಮಾಡಿದ. ನಾನು ಆತನಿಂದ ಹೇಗೋ ಹೊರ ಬಂದೇ ಪೂನಂ ಪಾಂಡೆ ಹೇಳಿದ್ದಾರೆ. ಪೂನಂ ದೂರಿನ ಹಿನ್ನೆಲೆಯಲ್ಲಿ ಸ್ಯಾಮ್ ಬಾಂಬೆ ಯನ್ನು ಸೋಮವಾರ ಗೋವಾದಲ್ಲಿ ಬಂಧಿಸಲಾಗಿತ್ತು.
ಸಿನಿಮಾ ಡೆಸ್ಕ್ : ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಗ್ಗೆ ತೀವ್ರ ತನಿಖೆಯಾಗುತ್ತಿದೆ, ಇದರಲ್ಲಿ ಡ್ರಗ್ ಕೇಸ್ ಕೂಡ ಥಳುಕು ಹಾಕಿಕೊಂಡಿದ್ದು, ಈಗಾಗಲೇ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿಯರಿಗೆ ನೋಟಿಸ್ ನೀಡಲಾಗಿದೆ.
ಇದೀಗ ಈ ಬಗ್ಗೆ ನಟಿ ಬಿಗ್ ಬಾಸ್ ಸ್ಪರ್ಧಿ ಶೆರ್ಲಿನ್ ಚೋಪ್ರಾ ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ದೊಡ್ಡ ದೊಡ್ಡ ಕ್ರಿಕೆಟ್ ಗಳ ಪತ್ನಿಯರು ಕೊಕೇನ್ ಸೇವಿಸುವದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಬರೆದುಕೊಂಡ ನಟಿ ಶೆರ್ಲಿನ್ ನಾನೊಮ್ಮೆ ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡಲು ಕೋಲ್ಕತ್ತಾಗೆ ಹೋಗಿದ್ದೆನು. ಅಲ್ಲಿ ಎಲ್ಲಾ ಸ್ಟಾರ್ ಪತ್ನಿಯರು ಮಹಿಳೆಯರ ವಾಶ್ ರೂಮ್ ನಲ್ಲಿ ಕೊಕೇನ್ ಸೇವಿಸುತ್ತಿದ್ದರು. ಅವರು ನೋಡಿ ಸ್ಮೈಲ್ ಮಾಡಿದರು. ಇಂಥಹ ಡ್ರಗ್ ಪಾರ್ಟಿ ಬಹಳಷ್ಟು ನಡೆಯುತ್ತಿರುತ್ತದೆ. ಒಂದು ವೇಳೆ ಎನ್ ಸಿಬಿ ವಿಚಾರಣೆಗೆ ಕರೆದರೆ ನಾನು ಬರುತ್ತೀನಿ ಎಂದು ಶೆರ್ಲಿನ್ ಛೋಪ್ರಾ ಹೇಳಿದ್ದಾರೆ.
ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಬಾಲಿವುಡ್ ನಟಿ ಇದೀಗ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ನಟಿಯ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಐಪಿಸಿ ಸೆಕ್ಷನ್ 376, 354, 341, 342 ರ ಅಡಿಯಲ್ಲಿ ಅತ್ಯಾಚಾರ, ಸಂಯಮ ಮೀರಿ ವರ್ತನೆ, ಮಹಿಳೆಯರ ನಮ್ರತೆಯನ್ನು ಮೀರಿದ ಅಪರಾಧಕ್ಕಾಗಿ ಲಿಖಿತ ದೂರು ದಾಖಲಿಸಲಾಗಿದೆ ಎಂದಿದ್ದಾರೆ.
ಅನುರಾಗ್ ಕಶ್ಯಪ್ ಈ ಹಿಂದೆ ತಮ್ಮ ವಿರುದ್ಧದ ಲೈಂಗಿಕ ದುರ್ನಡತೆ ಆರೋಪಗಳನ್ನು ಸರಣಿ ಟ್ವೀಟ್ಗಳಲ್ಲಿ ನಿರಾಕರಿಸಿದ್ದರು. ನಂತರ, ಕಶ್ಯಪ್ ತಮ್ಮ ವಕೀಲೆ ಪ್ರಿಯಾಂಕಾ ಖಿಮಾನಿ ಮೂಲಕ ನೀಡಿದ ಹೇಳಿಕೆಯಲ್ಲಿ, ಆರೋಪಗಳನ್ನು ‘ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕ’ ಎಂದು ಕರೆದಿದ್ದರು.