ಬೆಂಗಳೂರು :  ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ತೆರಳಿದ ಮಾಜಿ ಸಿಎಂ ಯಡಿಯೂರಪ್ಪ ದೇವೇಗೌಡರ  ಆರೋಗ್ಯ ವಿಚಾರಿಸಿದರು.

ದೇವೇಗೌಡರನ್ನು ಭೇಟಿ ಮಾಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ  ‘ಮಾಜಿ ಪ್ರಧಾನಿ ದೇ್ವೇಗೌಡರನ್ನು ಒಂದು ತಿಂಗಳ ಹಿಂದೇಯೇ ನೋಡಲು ಬರಬೇಕಂದಿದ್ದೆ, ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ನಾನು ಕಂಡಂತೆ ಇಡೀ ರಾಜ್ಯವನ್ನು ಸುತ್ತಿದಂತಹ ವ್ಯಕ್ತಿ ಇದ್ದರೆ ಅದುವೇ ದೇವೇಗೌಡರು ಎಂದು ಹೇಳಿದ್ದಾರೆ, ಅವರಿಗೆ ದೇವರು ಆರೋಗ್ಯ ಕೊಡಲಿ, ಚೆನ್ನಾಗಿಡಲಿ’ ಎಂದು ಬಿಎಸ್ವೈ ಹೇಳಿದರು.

ನಿನ್ನೆಯಷ್ಟೇ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈ ಬೆನ್ನಲ್ಲೇ ಯಡಿಯೂರಪ್ಪ ದೇವೇಗೌಡರ  ಆರೋಗ್ಯ ವಿಚಾರಿಸಿದರು. ದೇವೇಗೌಡರಿಗೆ ಅನಾರೋಗ್ಯದ ಹಿನ್ನೆಲೆ ಆರೋಗ್ಯ ವಿಚಾರಿಸಿದ್ದಾರೆ.

ರಾಜ್ಯದಲ್ಲಿ ಜಿಮ್​ನಲ್ಲಿ ಬಳಸುವ ಪ್ರೋಟೀನ್​ ಪೌಡರ್ ಬ್ಯಾನ್‌: ಸಮಗ್ರ ತನಿಖೆಗೆ ಮುಂದಾದ ರಾಜ್ಯ ಸರ್ಕಾರ

BIGG NEWS : ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ವಿಚಾರ : ಕಾನೂನು ಬದ್ದವಾಗಿ ಅನ್ಯಾಯವಾಗದಂತೆ ಕ್ರಮ : ಸಿಎಂ ಬೊಮ್ಮಾಯಿ

Share.
Exit mobile version