BREAKING : ಸಲಿಂಗ ವಿವಾಹ ; ವಿಚಾರಣೆಯಿಂದ ಹಿಂದೆ ಸರಿದ ‘ನ್ಯಾಯಮೂರ್ತಿ ಸಂಜೀವ್ ಖನ್ನಾ’

ನವದೆಹಲಿ : ಸಲಿಂಗ ದಂಪತಿಗಳಿಗೆ ಮದುವೆಯಾಗುವ ಮೂಲಭೂತ ಹಕ್ಕನ್ನು ನಿರಾಕರಿಸುವ ಅಕ್ಟೋಬರ್ 2023ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಪರಿಶೀಲನಾ ಅರ್ಜಿಯ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಬುಧವಾರ ಮುಂದೂಡಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ವೈಯಕ್ತಿಕ ಕಾರಣಗಳನ್ನ ನೀಡಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈಗ ಸಿಜೆಐ ಡಿ.ವೈ ಚಂದ್ರಚೂಡ್ ಅವರು ಅರ್ಜಿಯ ವಿಚಾರಣೆಗಾಗಿ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನ ಪುನರ್ ರಚಿಸಬೇಕಾಗುತ್ತದೆ. ಸಲಿಂಗ ಸಮುದಾಯಕ್ಕೆ ವಿವಾಹ ಸಮಾನತೆಯನ್ನ ನಿರಾಕರಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ … Continue reading BREAKING : ಸಲಿಂಗ ವಿವಾಹ ; ವಿಚಾರಣೆಯಿಂದ ಹಿಂದೆ ಸರಿದ ‘ನ್ಯಾಯಮೂರ್ತಿ ಸಂಜೀವ್ ಖನ್ನಾ’