ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಎರಡು ಕಾರುಗಳನ್ನು ಸೀಜ್‌ ಮಾಡಿದ್ದು, ಕಾರಿನಲ್ಲಿ ಮದ್ಯದ ಬಾಟಲ್‌ ಹಾಗೂ ಬ್ಯಾಗ್‌ ವೊಂದು ಪತ್ತೆಯಾಗಿದೆ. 

ಪ್ರಕರಣದ ತನಿಖೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸದ್ಯಕ್ಕೆ ಎರಡು ಕಾರುಗಳನ್ನು ಸೀಜ್‌ ಮಾಡಿದ್ದು, ಕಾರಿನಲ್ಲಿ ಲೇಡಿಸ್‌ ಬ್ಯಾಗ್‌ ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿನಯ್‌, ಪ್ರದೋಶ್‌ ಹೆಸರಿನಲಿ ನೋಂದಣಿಯಾಗಿರುವ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ರೇಣುಕಾಸ್ವಾಮಿ ಶವವನ್ನು ಸಾಗಿಸಲಾಗಿತ್ತು ಎನ್ನಲಾಗಿದ್ದು, ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.

Share.
Exit mobile version