BREAKING NEWS : ಕಾಂಗ್ರೆಸ್‌ ಶಾಸಕ ‘ಜಮೀರ್‌ ಅಹ್ಮದ್‌’ ವಿರುದ್ಧ ‘ಶ್ರೀರಾಮಸೇನೆ’ಯಿಂದ ಪೊಲೀಸರಿಗೆ ದೂರು ; ಕಾರಣವೇನು ಗೊತ್ತಾ?

ಬೆಂಗಳೂರು : ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ವಿರುದ್ಧ ಹಿಂದೂ ಸಂಘಟನೆ ಶ್ರೀರಾಮಸೇನೆ ಚಾಮರಾಜ ಪೇಟೆ ಠಾಣೆ ಮತ್ತು ಪೊಲೀಸ್‌ ಆಯುಕ್ತರಿಗೂ ದೂರು ದಾಖಲಿಸಿದೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಬಿಡಲ್ಲ ಎಂದಿದ್ದ ಜಮೀರ್‌ ಖಾನ್‌ ಹೇಳಿಕೆಗೆ ಶ್ರೀರಾಮಸೇನೆ ವ್ಯಾಪಕ ಖಂಡನೆ ವ್ಯಕ್ತ ಪಡಿಸಿದ್ದು, ಹೇಳಿಕೆ ವಿರುದ್ಧ ಶ್ರೀರಾಮಸೇನೆ ಚಾಮರಾಜ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿತು. ನಂತ್ರ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿದ್ದು, ಶಾಸಕ ಜಮೀರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.