ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟಕ್ಕೆ ಮೊದಲ ಬಾರಿಗೆ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಈಗ ನಾಳೆ ನೂತನ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಈ ಸಂಬಂಧ ಹೈಕಮಾಂಡ್ ಭೇಟಿಯಾಗಿ ಚರ್ಚಿಸಿದ್ದರು. ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ನಾಳೆ 24 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈಗಾಗಲೇ ನಾಳೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವಂತ ಶಾಸಕರ ಪಟ್ಟಿಯನ್ನು ರಾಜಭವನಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತವಾಗಿ ರವಾನಿಸಲಾಗಿದೆ. ನಾಳೆ ಈ 24 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹೀಗಿದೆ ನಾಳೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವಂತ 24 ಮಂದಿ ಶಾಸಕರ ಅಧಿಕೃತ ಪಟ್ಟಿ
- ಹೆಚ್ ಕೆ ಪಾಟೀಲ್
- ಕೃಷ್ಣಭೈರೇಗೌಡ
- ಎನ್ ಚೆಲುವರಾಯಸ್ವಾಮಿ
- ಕೆ ವೆಂಕಟೇಶ್
- ಡಾ.ಹೆಚ್ ಸಿ ಮಹದೇವಪ್ಪ
- ಈಶ್ವರ್ ಖಂಡ್ರೆ
- ಕೆ ಎನ್ ರಾಜಣ್ಣ
- ದಿನೇಶ್ ಗುಂಡೂರಾವ್
- ಶರಣಬಸಪ್ಪ ದರ್ಶನಾಪುರ್
- ಶಿವಾನಂದ ಪಾಟೀಲ್
- ತಿಮ್ಮಾಪುರ ರಾಮಪ್ಪ ಬಾಳಪ್ಪ
- ಎಸ್ ಎಸ್ ಮಲ್ಲಿಕಾರ್ಜುನ್
- ಶಿವರಾಜ ತಂಡರಗಿ
- ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್
- ಮಂಕಾಳ್ ವೈದ್ಯ
- ಲಕ್ಷ್ಮೀ ಹೆಬ್ಬಾಳ್ಕರ್
- ರಹೀಂ ಖಾನ್
- ಡಿ.ಸುಧಾಕರ್
- ಸಂತೋಷ್ ಎಸ್ ಲಾಡ್
- ಎನ್ ಎಸ್ ಬೋಸರಾಜು
- ಸುರೇಶ ಬಿಎಸ್
- ಮಧು ಬಂಗಾರಪ್ಪ
- ಡಾ.ಎಂ.ಸಿ ಸುಧಾಕರ್
- ಬಿ.ನಾಗೇಂದ್ರ
ವರದಿ: ವಸಂತ ಬಿ ಈಶ್ವರಗೆರೆ