ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಸ್ತುತ ಪಂಜಾಬ್, ಹರಿಯಾಣ ಮತ್ತು ದೆಹಲಿ ಎನ್ಸಿಆರ್ನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಈ ದಾಳಿಗಳು ಪ್ರಾಥಮಿಕವಾಗಿ ದರೋಡೆಕೋರರು ಮತ್ತು ಅವರ ಭಯೋತ್ಪಾದಕ ಸಂಪರ್ಕಗಳೊಂದಿಗೆ ಸಂಬಂಧ ಹೊಂದಿವೆ ಎನ್ನಲಾಗಿದೆ ಸಿಧು ಮೂಸ್ ವಾಲಾ ಕೊಲೆ ಪ್ರಕರಣ ಮತ್ತು ಸಲ್ಮಾನ್ ಖಾನ್ ಬೆದರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಗ್ಯಾಂಗ್ ಸ್ಟರ್ ಗಳ ಮೇಲೆ ಈ ದಾಳಿ ಕೇಂದ್ರಿಕರಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಎನ್ಐಎಯ ದಾಳಿಗೆ ಈಡಾಗಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ದೇಶಾದ್ಯಂತ ನಡೆಯುತ್ತಿರುವ ಗ್ಯಾಂಗ್ಗಳು ಮತ್ತು ಅಪರಾಧ ಸಿಂಡಿಕೇಟ್ಗಳನ್ನು ಭೇದಿಸಲು ಎನ್ಐಎ 60 ಸ್ಥಳಗಳಲ್ಲಿ ದಾಳಿ ನಡೆಸಿದೆ.

 

Share.
Exit mobile version