ಚಿತ್ರದುರ್ಗ: ಪೋಸ್ಕೋ ಪ್ರಕರಣದಲ್ಲಿ ಅರೋಪಿಗಳಾಗಿರುವ ಮುರುಘಾ ಶ್ರೀ ಸೇರಿದಂತೆ ಮೂವರ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಸ್ಥಳೀಯ ನ್ಯಾಯಾಲಯ ವಿಸ್ತರಣೆ ಮಾಡಿದೆ.
ಇಂದು ಮೂವರ ಕಸ್ಟಡಿ ಅವಧಿ ಅಂತ್ಯವಾಗಿತ್ತು, ಹೀಗಾಗಿ ಆರೋಪಿಗಳ ಪರ ವಕೀಲರು ಜಾಮೀನಿನಾಗಿ ಅರ್ಜಿಯನ್ನು ಸಲ್ಲಿಸಿದ್ದರು, ಆದರೆ ಸಂತ್ರಸ್ಥ ಪರ ವಕೀಲರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೂವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 3ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶವನ್ನು ಹೊರಡಿಸಿದೆ. ಬಾಲಕಿಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪವನ್ನು ಶಿವಮೂರ್ತಿ ಸ್ವಾಮಿಗಳ ಮೇಲಿದ್ದು, ಅವರಿಗೆ ಸಹಾಯ ಮಾಡಿದ ಆರೋಪ ಇತರರ ಮೇಲೆ ಇದೆ. ಸದ್ಯ ತನಿಖಾ ಅಧಿಕಾರಿಗಳು ಚಾರ್ಚ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇದೇ ವೇಳೇ ಮುರುಘ ಶ್ರೀಗಳ ಎರಡನೇ ಪೋಸ್ಕೋ ಕೇಸ್ನ ಜಾಮೀನ ಅರ್ಜಿ ವಿಚಾರಣೆ ಇದೇ ನವೆಂಬರ್ 28 ರಂದು ನಡೆಯುಲಿದೆ ಅಂತ ತಿಳಿದು ಬಂದಿದೆ.