ನವದೆಹಲಿ : ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವರದಿಯ ಪ್ರಕಾರ, ಗಾಯದಿಂದಾಗಿ ವಿರಾಮದಲ್ಲಿರುವ ಜಡೇಜಾ, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿ, ಅವ್ರು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅಂದ್ಹಾಗೆ, ಜಡೇಜಾ ಮೊಣಕಾಲಿನ ಗಾಯದಿಂದಾಗಿ ಹೊರಗುಳಿದಿದ್ದು, ಸೆಪ್ಟೆಂಬರ್’ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜಡೇಜಾ ಬದಲಿಗೆ ಶಹಬಾಜ್ ಅಹ್ಮದ್ಗೆ ಅವಕಾಶ ನೀಡಬಹುದು. ಆದಾಗ್ಯೂ, ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಇನ್ನೂ ಬಹಿರಂಗಪಡಿಸಲಾಗಿಲ್ಲ.

ವರದಿಯ ಪ್ರಕಾರ, ಜಡೇಜಾ ಅವ್ರನ್ನ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯಿಂದ ಹೊರಗಿಡಲಾಗಿದೆ. ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಜಡೇಜಾ ಅವ್ರನ್ನ ಟೆಸ್ಟ್ ಸರಣಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇದರಲ್ಲಿಯೂ ಸಹ, ಅವರ ಆಟದ ಬಗ್ಗೆ ಅನುಮಾನಗಳಿವೆ. ಜಡೇಜಾ ಫಿಟ್ ಆಗಿರದಿದ್ದರೆ, ಉತ್ತರ ಪ್ರದೇಶದ ಸ್ಪಿನ್ ಬೌಲರ್ ಸೌರಭ್ ಕುಮಾರ್ಗೆ ಟೆಸ್ಟ್ ಪಂದ್ಯಗಳಿಗೆ ಅವಕಾಶ ನೀಡಬಹುದು. ಆದರೆ ಬಿಸಿಸಿಐ ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

 

Viral Video : ವಿಶ್ವದ ಅತಿದೊಡ್ಡ ‘ಐಫೋನ್ ತಯಾರಿಕಾ ಕಾರ್ಖಾನೆ’ಯಲ್ಲಿ ಹಿಂಸಾತ್ಮಕ ಪ್ರತಿಭಟನೆ, ಪೊಲೀಸ್-ನೌಕರರ ನಡುವೆ ಘರ್ಷಣೆ

Black Thread: ಕಪ್ಪು ದಾರವನ್ನು ಏಕೆ ಧರಿಸುತ್ತಾರೆ? ಇದರಿಂದಾಗುವ ಪ್ರಯೋಜನಗಳೇನು ? ಇಲ್ಲಿದೆ ಮಾಹಿತಿ

ಮರೆವು’ ಹೆಚ್ಚಾಗ್ತಿದ್ಯಾ.? ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಅನುಸರಿಸಿ.!

Share.
Exit mobile version