BREAKING : ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ‘ಅಪಹರಣ’ ಆರೋಪ : ‘FIR’ ದಾಖಲು

ಬೆಂಗಳೂರು : ಆರ್ ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಅಪಹರಣ ಕೆಸ್ ದಾಖಲಾಗಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮುನಿರತ್ನ ವಿರುದ್ಧ ಇದೀಗ ಅಪಹರಣ ಜೀವ ಬೆದರಿಕೆ ಸೆಕ್ಷನ್ ಅಡಿಯಲ್ಲಿ ಇದೀಗ ಮುನಿರತ್ನ ಸೇರಿ ಐವರ ವಿರುದ್ಧ FIR ದಾಖಲಾಗಿದೆ. IPC ಸೆಕ್ಷನ್ 506, 371 ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಲಕ್ಷ್ಮಿ ದೇವಿ ನಗರ ಕಾಂಗ್ರೆಸ್ ಕಾರ್ಯಕರ್ತ ಸ್ಯಾಮುಯೇಲ್ ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ.