ಧಾರವಾಡ : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್‌ ಮತ್ತೊಮ್ಮೆ ಶಾಕ್‌ ನೀಡಿದ್ದು, ಧಾರವಾಡ ಭೇಟಿಗೆ ಅನುಮತಿ ನೀಡಿ ಕೋರಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನಿರಾಕರಿಸಿದೆ.

ಧಾರವಾಡದ ಬಿಜೆಪಿ ಮುಖಂಡ ಯೋಗಿಶ್‌ ಗೌಡ ಕೊಲೆ ಪ್ರಕರಣ ಸಂಬಂಧ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಭೇಟಿ ನೀಡುವಂತಿಲ್ಲ. ಆದರೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮೇಯರ್‌ ಚುನಾವಣೆಗೆ ಮತದಾನಕ್ಕೆ ಅನುಮತಿ ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು.

ಆದರೆ ಕೋರ್ಟ್‌ ಅರ್ಜಿ ನಿರಾಕರಿಸಿದ್ದು, ಈ ಹಿಂದೆಯೇ ಸುಪ್ರೀಂಕೋರ್ಟ್‌ ಅನುಮತಿ ನಿರಾಕರಿಸಿದೆ. ಕೊಲೆ ಪ್ರಕರಣದ ಸಾಕ್ಷಿಯ ತಾಯಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸದಸ್ಯೆಯಾಗಿದ್ದು, ಹೀಗಾಗಿ ಅನುಮತಿ ನೀಡದಂತೆ ಹಿರಿಯ ಎಸ್‌ ಎಸ್‌ ಪಿ ಗಂಗಾಧರ್‌ ಅವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅನುಮತಿ ನಿರಾಕರಿಸಿದ್ದಾರೆ.

Share.
Exit mobile version