ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಪಹರಣ ಪ್ರಕರಣ ಬೆಳಕಿಗೆ ಬಂದಿದ್ದು, ಲೇಡಿ ಗ್ಯಾಂಗ್‌ ಜೊತೆಗೆ ಸೇರಿಕೊಂಡು ಕನ್ನಡ ಪರ ಸಂಘಟನೆ ಅಧ್ಯಕ್ಷ ಬ್ಯಾಂಕ್‌ ಉದ್ಯೋಗಿಯೊಬ್ಬರನ್ನು ಕಿಡ್ನಾಪ್‌ ಮಾಡಿರುವ ಘಟನೆ ನಡೆದಿದೆ.

ಕನ್ನಡ ಪರ ಸಂಘಟನೆ ಅಧ್ಯಕ್ಷ ಪ್ರಕಾಶ್‌ ಅಲಿಯಾಸ್‌ ಕನ್ನಡ ಪ್ರಕಾಶ್‌ ಹಾಗೂ ಲೇಡಿ ಗ್ಯಾಂಗ್‌ ವಿರುದ್ಧ ಅಪಹರಣ ಪ್ರಕರಣ ಸಂಬಂಧ ಶಂಕರಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ. ಬ್ಯಾಂಕ್ ಉದ್ಯೋಗಿ ಮಂಜುನಾಥ ಎಂಬುವವರನ್ನು ಅಪಹರಿಸಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ ಕನ್ನಡ ಪ್ರಕಾಶ್ ಅವರ ಕಚೇರಿಯಲ್ಲೇ ಬ್ಯಾಂಕ್ ಉದ್ಯೋಗಿ ಮಂಜುನಾಥ ಅವರನ್ನು ಗ್ಯಾಂಗ್ ಥಳಿಸಿದೆ ಎನ್ನಲಾಗಿದೆ.

ಅಪಹರಣ ಪ್ರಕರಣ ಸಂಬಂಧ ಕನ್ನಡ ಪ್ರಕಾಶ್‌ ಮಂಜುಳಾ, ಚಲಪತಿ ಎಂಬುವರು ಸೇರಿದಂತೆ 6 ಜನರ ವಿರುದ್ದ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Share.
Exit mobile version