ಬೆಂಗಳೂರು : ಬೆಂಗಳೂರು ನಗರದ ಎಂಜಿ ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಕಳೆದ ಸೆಪ್ಟೆಂಬರ್ 12 ರಂದು ಬಿಲ್ಡಿಂಗ್ ಒಂದರಲ್ಲಿ ಗ್ಲಾಸ್ ಅಳವಡಿಸೋಕೆ ಆಧಾರವಾಗಿ ಹಾಕಿದ್ದ ಬೃಹತ್ ಸಾರುವೆ ಮರಗಳು ಕಳಚಿ ಬಿದ್ದಿದ್ದು, ರೈಲ್ವೆ ಮೇಲೆ ಬಿದ್ದಿದೆ. ಆ ಕ್ಷಣದಲ್ಲಿ ಏನಾದರೂ ಮೆಟ್ರೋ ಟ್ರೈನ್ ಹಾದು ಹೋಗುತ್ತಿದ್ದರೆ ನೂರಾರು ಜನರ ಪ್ರಾಣಕ್ಕೆ ಕುತ್ತು ತರುತ್ತಿತ್ತು ಎಂದು ಬಿಎಂಆರ್ಸಿಎಲ್ ಸಿಬ್ಬಂದಿ ಚಂದ್ರ ಮುನಿರೆಡ್ಡಿ ಭಯಾನಕ ವಿಷಯ ತಿಳಿಸಿದ್ದಾರೆ.
ಸೆಪ್ಟೆಂಬರ್ 12 ರಂದು ಮಧ್ಯಾಹ್ನ 3.50 ರ ಸುಮಾರಿಗೆ ಟ್ರಿನಿಟಿ ಸೆಕ್ಯೂರಿಟಿ ಸೂಪರ್ ವೈಸರ್ ಚಂದ್ರ ಮುನಿರೆಡ್ಡಿಗೆ ದೂರವಾಣಿ ಕರೆ ಮಾಡುತ್ತಾರೆ. ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಇರುವ ಪಿಲ್ಲರ್ 144 ರ ಸಮೀಪ ಈ ಹಿಂದೆ ಅಜಂತ ಹೊಟೇಲ್ ಬಿಲ್ಡಿಂಗ್ ನವರು ಸುಮಾರು 50 ರಿಂದ 60 ಅಡಿ ಎತ್ತರದಲ್ಲಿ ಗ್ಲಾಸ್ ಅಳವಡಿಸುವ ನಿಟ್ಟಿನಲ್ಲಿ ಸಾರ್ವೆ ಮರಗಳನ್ನ ಕಟ್ಟಿದ್ದು, ಕಾರ್ಯನಿರ್ವಹಣೆ ಮಾಡುತ್ತಿರುತ್ತಾರೆ.
ಈ ವೇಳೆ ಬಿಲ್ಡಿಂಗ್ ಒಂದರಲ್ಲಿ ಗ್ಲಾಸ್ ಅಳವಡಿಸೋಕೆ ಆಧಾರವಾಗಿ ಹಾಕಿದ್ದ ಬೃಹತ್ ಸಾರ್ವೆ ಕಳಚಿ ಬಿದ್ದಿದ್ದು, ಮೆಟ್ರೋ ವಯಾಡಿಕ್ಟ್ ಗೆ ಹಾನಿ ಉಂಟು ಮಾಡಿದೆ.ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ಬಿಎಂಆರ್ ಸಿಎಲ್ ಗೆ ಸೇರಿದ್ದ ಜಾಗದಲ್ಲಿ ಸಾರ್ವೆ ಮರಗಳು ಬಿದ್ದಿರೋದು ಕಂಡು ಬಂತು. ಬೈಯ್ಯಪ್ಪನಹಳ್ಳಿ ಟು ಕೆಂಗೇರಿಗೆ ಹೋಗುವ ಮಾರ್ಗ ಇದಾಗಿದ್ದು, ಹಲಸೂರು ಹಾಗೂ ಟ್ರಿನಿಟಿ ಮಧ್ಯವಿರುವ ಪಿಲ್ಲರ್ 144 ರ ಬಳಿ ವಯಾಡಿಕ್ಟ್ ಮೇಲೆ ಬಿದ್ದಿದ್ದನ್ನ ಗಮನಿಸಲಾಗಿದೆ ಎಂದು ಸಿಬ್ಬಂದಿ ಮುನಿರೆಡ್ಡಿ ತಿಳಿಸಿದ್ದಾರೆ.
ಹೀಗಾಗಿ ಈ ಘಟನೆಗೆ ಕಾರಣರಾದ ಸುದರ್ಶನ್ ಬಿಲ್ಡಿಂಗ್ ಮ್ಯಾನೇಜರ್, ಭಾಸ್ಕರ್ ಗ್ಲಾಸ್ ಫಿಟ್ಟಿಂಗ್ ಇನ್ ಚಾರ್ಜ್, ಇರ್ಪಾನ್ ಗ್ಲಾಸ್ ಫಿಟ್ಟಿಂಗ್ ಇನ್ ಚಾರ್ಜ್, ಬಾಲಾಜಿ ಸಾರುವೆ ಗುತ್ತಿಗೆದಾರ ಸ್ಥಳದ ಮಾಲೀಕರು ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ದೂರು ಕೊಟ್ಟಿದ್ದಾರೆ.
ಸಾರುವೆ ಮರಗಳು ಬಿದ್ದಿದ್ದರಿಂದ ಡ್ಯಾಮೇಜ್ ಆಗುವ ಸಾಧ್ಯತೆಯೂ ಇರುತ್ತಿತ್ತು.., ಅಷ್ಟೇ ಅಲ್ಲದೆ ಹೆಚ್ಚಿನ ಪ್ರಯಾಣಿಕರ ಜೀವಕ್ಕೂ ಕುತ್ತು ಬರುವ ಸಾಧ್ಯತೆ ಇರುತ್ತಿತ್ತು. ಹಾಗೆನೇ ಪಿಲ್ಲರ್ ಕೆಳಗೆ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ಜಖಂ ಮತ್ತು ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುತಿತ್ತು. ಇವರು ಮೆಟ್ರೋ ಕಡೆಯಿಂದ ಯಾವುದೇ ಅನುಮತಿ ಪಡೆಯದೇ ನಿರ್ಲಕ್ಷ್ಯತೆಯಿಂದ ಸಾರುವ ಮರಗಳನ್ನ ಕಟ್ಟಿ ಮೆಟ್ರೋ ವಯಾಡಿಕ್ಟ್ ಗೆ ಹಾನಿ ಮಾಡಿದ್ದು ಹಾಗೂ ರೈಲು ಸಾಗದಂತೆ ಸಮಸ್ಯೆ ಉಂಟುಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.