ಬೆಂಗಳೂರು : ಬಿಜೆಪಿ ವಿರುದ್ಧ ಕಾಂಗ್ರೆಸ್ ಚಂಬು ಜಾಹೀರಾತು ಪತ್ರಿಕಾ ಜಾಹಿರಾತು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಬಿಜೆಪಿ ತಿರಿಗೇಟು ನೀಡಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಟ್ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಕೈ ಬಿಟ್ಟ ಯೋಜನೆಗಳು ಕೈಕೊಟ್ಟ ಕಾಂಗ್ರೆಸ್ ಸರ್ಕಾರ ಎಂಬ ಅಡಿ ಬರಹದೊಂದಿಗೆ ಇದೀಗ ಚಾರ್ಟ್ ಬಿಡುಗಡೆ ಮಾಡಿದೆ. ಹೀಗೆಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ. ಈ ವೇಳೆ ಶಾಸಕರಾದ ಗರುಡಾಚಾರ್, ರವಿ ಸುಬ್ರಮಣ್ಯ ಮುನಿರಾಜು ಉಪಸ್ಥಿತರಿದ್ದರು.

ಇದೆ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಆರ್.ಅಶೋಕ್ ಕಾಂಗ್ರೆಸ್ ಎಷ್ಟು ಜನರಿಗೆ ಚೊಂಬು ಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ಕುರಿತಂತೆ ಕಾಂಗ್ರೆಸ್ ವಾಗ್ದಾಳಿ ನಡೆಸಿದರು.

10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಕೊಡಲಿಲ್ಲ. ಅದು ಚೋಬ? ಬರಕ್ಕೆ 5000 ಕೋಟಿ ಕೊಡುತ್ತೇವೆ ಎಂದು ಕೊಡಲಿಲ್ಲ ಅದು ಚೋಬ? ಬಜೆಟ್ ನಲ್ಲಿ ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳಿದರು.ಈಗ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗೃಹ ಸಚಿವರು ಇದ್ದಾರೆ ಇಲ್ಲವೋ ಅಂತ ಜನರು ಹುಡುಕುತ್ತಿದ್ದಾರೆ ಎಂದರು.

ಕೃಷ್ಣೆಯ ಕಣ್ಣೀರು ಅಂತ ಐದು ರೂಪಾಯಿ ಕೊಟ್ಟಿಲ್ಲ ಇದು ಚೊಂಬು ಅಲ್ವೇ? ನಿಮ್ಮ ಯೋಗ್ಯತೆಗೆ 11 ತಿಂಗಳಿನಲ್ಲಿ ಒಂದು ಚೆಂಬು ನೀರು ಕೂಡ ಕೊಟ್ಟಿಲ್ಲ. ಕೇರಳದವರು ಬಿಂದಿಗೆಯಲ್ಲಿ ನೀರು ಕೊಡುತ್ತೇವೆ ಎಂದು ಕರೆಯುತ್ತಿದ್ದಾರೆ. ಕಾಂಗ್ರೆಸ್ನವರು ಈ ಚೊಂಬು ಹಿಡಿದುಕೊಂಡು ಕೇರಳಕ್ಕೆ ಹೋಗಲಿ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

Share.
Exit mobile version