ಬೆಂಗಳೂರು: ರದ್ದುಗೊಂಡಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮ ಇದೇ ತಿಂಗಳು 28ರಂದು ಬಿಜೆಪಿ ನಡೆಸಲು ತೀರ್ಮಾನಿಸಿದೆ. ಈ ಜನೋತ್ಸವ ಸಮಾವೇಶವು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ.

ಇಷ್ಟಾರ್ಥ ಕಾರ್ಯಸಿದ್ಧಿಗೆ ಕಾಮಧೇನು ವಿಗ್ರಹ ಮನೆಯಲ್ಲಿಟ್ಟು ಪೂಜಿಸಿ!

 

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ತುಮಕೂರು ಜಿಲ್ಲೆಯ 3-4 ತಾಲೂಕಿಗೆ ಸೀಮಿತವಾಗಿ ಸಮಾವೇಶ ಮಾಡಲಾಗುತ್ತದೆ.ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಜನೋತ್ಸವ ಹಮ್ಮಿಕೊಂಡಿದೆ.

ಇಷ್ಟಾರ್ಥ ಕಾರ್ಯಸಿದ್ಧಿಗೆ ಕಾಮಧೇನು ವಿಗ್ರಹ ಮನೆಯಲ್ಲಿಟ್ಟು ಪೂಜಿಸಿ!

 

ಹಾಗೇ ರಾಜ್ಯದ ವಿವಿಧ ಕಡೆ 4-5 ಸಮಾವೇಶ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ನಂತರ ರಾಜ್ಯಮಟ್ಟದಲ್ಲಿ ಒಂದು ದೊಡ್ಡ ಸಮಾವೇಶ ಮಾಡಲು ಬಿಜೆಪಿ ಚಿಂತನೆ ನಡೆಸಿದೆ.
ಈ ಹಿಂದೆ ಜುಲೈ 28ರಂದು ಜನೋತ್ಸವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್‌ ಹತ್ಯೆಯಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು.

Share.
Exit mobile version