ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಮುಖಂಡ ದೇವರಾಜೇಗೌಡ ಇದಕ್ಕೆಲ್ಲ ರೂವಾರಿಗಳು ಹಾಗೂ ಕಥಾನಾಯಕರು ಡಿಕೆ ಶಿವಕುಮಾರ್ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ LR ಶಿವರಾಮೇಗೌಡ ತಿರುಗೇಟು ನೀಡಿದ್ದು, ಬಿಜೆಪಿ ಹಾಗೂ ಕುಮಾರಸ್ವಾಮಿ ಪೆನ್ ಡ್ರೈವ್ ಮಹಾ ನಾಯಕರು ಎಂದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಒಬ್ಬ ಬ್ಲಾಕ್ ಮೇಲರ್. ಹಣಕ್ಕಾಗಿ ನಮ್ಮ ಬಳಿ ದೇವರಾಜೇಗೌಡ ಬಂದಿದ್ದ ಅನಿಸುತ್ತದೆ. ದೇವರಾಜೇಗೌಡ ಬಳಿ ಏನಿದೆಯೋ ಅದನ್ನೆಲ್ಲ ಬಿಡುಗಡೆ ಮಾಡಲಿ. ಬಿಜೆಪಿ ಮುಖಂಡ ದೇವರಾಜ ಗೌಡಗೆ ನಾನು ಯಾವುದೇ ರೀತಿಯಾದಂತಹ ಆಮೀಷ ಒಡ್ಡಿಲ್ಲ ಎಂದರು.

ಬಿಜೆಪಿ ಹಾಗೂ ಹೆಚ್‍ಡಿ ಕುಮಾರಸ್ವಾಮಿಯೇ ಪೆನ್ ಡ್ರೈವ್ ಮಹಾ ನಾಯಕರು.ಇಡೀ ಪ್ರಕರಣದಲ್ಲಿ ನನ್ನ ಪಾತ್ರವೂ ಇಲ್ಲ ಡಿಸಿಎಂ ಡಿಕೆ ಪಾತ್ರವೂ ಇಲ್ಲ. ದೇವರಾಜ್ ಗೌಡನೇ ನನ್ನ ಬಳಿ ಬಂದು ಡಿಕೆ ಭೇಟಿ ಮಾಡಿಸಲು ಒತ್ತಾಯಿಸಿದ್ದ. ಹೀಗಾಗಿ ಡಿಕೆ ಶಿವಕುಮಾರ್ ಅವರ ಜೊತೆ ಒಂದು ನಿಮಿಷ ಮಾತನಾಡಿಸಿದೆ.ಪ್ರಕರಣವನ್ನು ಸಿಬಿಐ ನೀಡಿದರೆ ದೇವರಾಜೇಗೌಡ ಸಿಕ್ಕಿ ಹಾಕಿಕೊಳ್ಳುತ್ತಾನೆ. ಆದರೆ ಪೆನ್ಡ್ರೈವ್ ಕೆಸ್ ನ ಹಿಂದೆ ನಾನಿಲ್ಲ. ಈ ಮೂಲಕ ವಕೀಲ ದೇವರಾಜೇಗೌಡ ಭೇಟಿ ಮಾಡಿದ್ದನ್ನು ಶಿವರಾಮೇಗೌಡ ಒಪ್ಪಿಕೊಂಡಿದ್ದಾರೆ.

Share.
Exit mobile version