ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡುವ ಪಾಲುದಾರರಾಗಿ ತಮ್ಮ ದೇಶವು ಪ್ರಧಾನಿ ನರೇಂದ್ರ ಮೋದಿ ಅವರನ್ನ ನೋಡುತ್ತಿಲ್ಲ ಎಂದು ಪಾಕಿಸ್ತಾನ ಸಚಿವ ಹಿನಾ ರಬ್ಬಾನಿ ಖಾರ್ ಹೇಳಿದ್ದಾರೆ. ಆದ್ರೆ, ಭಾರತದ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನ ತಮ್ಮ ದೇಶವು ಪಾಲುದಾರರನ್ನಾಗಿ ನೋಡಿದೆ ಎಂದಿದ್ದಾರೆ.
ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ-2023ರ ದಕ್ಷಿಣ ಏಷ್ಯಾ ಅಧಿವೇಶನದಲ್ಲಿ ಹೀನಾ ರಬ್ಬಾನಿ ಖಾರ್ ಮಾತನಾಡಿದರು. 2011-2013ರ ನಡುವೆ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಭಾರತಕ್ಕೆ ತೆರಳಿದ್ದಾಗ ಉಭಯ ದೇಶಗಳ ನಡುವೆ ಶಾಂತಿ ಸೌಹಾರ್ದತೆಗಾಗಿ ಶ್ರಮಿಸಿದ್ದು, ಈಗಿನ ವಾತಾವರಣಕ್ಕೆ ಹೋಲಿಸಿದರೆ ಅಂದಿನ ವಾತಾವರಣ ಉತ್ತಮವಾಗಿತ್ತು ಎಂದರು.
ಆದರೆ, ವರ್ಷದಿಂದ ವರ್ಷಕ್ಕೆ ವೈಷಮ್ಯ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಇದು ದಕ್ಷಿಣ ಏಷ್ಯಾದ ಸಮಸ್ಯೆ ಅಲ್ಲ ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಸಮಸ್ಯೆ ಇರುವುದು ಭಾರತದಿಂದ ಎಂದಿದ್ದು, ರಾಜ್ಯಸೌಹಾರ್ದತೆಯ ಕೊರತೆಯಿದೆ ಎಂದರು. ಇನ್ನು ಚುನಾವಣೆಯ ದೃಷ್ಟಿಯಿಂದ ಯೋಚಿಸುವ ಬದಲು ಶಾಂತಿಗಾಗಿ ಯೋಚಿಸಬೇಕು ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಪಾಕಿಸ್ತಾನ ಆರ್ಥಿಕ ಮತ್ತು ಆಹಾರ ಬಿಕ್ಕಟ್ಟಿನ ಸ್ಥಿತಿಗೆ ತಲುಪಿರುವುದು ಗೊತ್ತಾಗಿದೆ. ಆದ್ರೆ, ಭಾರತದಲ್ಲಿ ಪಾಕಿಸ್ತಾನದ ಆಸಕ್ತಿ ಹೆಚ್ಚುತ್ತಲೇ ಇದೆ ಎಂದು ಹೇಳಿದರು.
BIGG NEWS : ಮಾಜಿ ಶಾಸಕಿ ‘ಸುನೀತಾ ವೀರಪ್ಪ ಗೌಡ’ ಕಾಂಗ್ರೆಸ್ ಸೇರ್ಪಡೆ
BIGG NEWS : ‘ಬ್ಲಡ್ ಟೆಸ್ಟ್ ರಿಪೋರ್ಟ್ ಇಲ್ಲದಕ್ಕೆ ನರಳಾಡಿದ ಗರ್ಭಿಣಿ : ಆಸ್ಪತ್ರೆ ಬಾಗಿಲ ಹೊರಗೆ ಹೆರಿಗೆ!