ಬೆಂಗಳೂರು : ಒಕ್ಕಲಿಗ ಸಮುದಾಯ ಅಷ್ಟು ಚೀಪ್ ಅಲ್ಲ. ಕಾಂಗ್ರೆಸ್, ಜೆಡಿಎಸ್ ನವರು ಪದೇ ಪದೇ ಒಕ್ಕಲಿಗ ಜಾತಿ ವಿಚಾರ ಬೀದಿಗೆ ತಂದು ರಂಪಾಟ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ.

ಇಂಡಿಗೋ ಏರ್‌ಲೈನ್ಸ್ ವಿಮಾನದ ಗಗನಸಖಿಯೊಂದಿಗೆ ಅನುಚಿತ ವರ್ತನೆ, ಪ್ರಯಾಣಿಕನ ಬಂಧನ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಒಕ್ಕಲಿಗ ಸಮುದಾಯದ ದುರ್ಬಳಕೆ ಆಗುತ್ತಿದೆ. ಡಿ.ಕೆ. ಶಿವಕುಮಾರ್, ಜಮೀರ್ ಅಹ್ಮದ್ ಖಾನ್ ಗೆ ಒಳ್ಳೆಯದಾಗಲಿ, ಒಕ್ಕಲಿಗ ಸಮುದಾಯ ಅನ್ನ ಕೊಡುವ ಸಮುದಾಯ, ಕುವೆಂಪು ಹುಟ್ಟಿದ ಸಮುದಾಯದವರಾದ ನಾವು ವಿಶ್ವಮಾನವನಾಗಿರಬೇಕು ಎಂದು ಹೇಳಿದ್ದಾರೆ.

BIGG NEWS : ದಕ್ಷಿಣ ಕರ್ನಾಟಕದ 14 ಜಿಲ್ಲೆಗಳ ಯುವ ಜನರಿಗೆ `ಅಗ್ನಿವೀರ್ ನೇಮಕಾತಿ’ಗೆ ಅರ್ಜಿ ಆಹ್ವಾನ

ಕಳೆದ 1 ವಾರದಿಂದ ಪರ ವಿರೋಧ ಚರ್ಚೆಯಿಂದ ನೋವಾಗಿದೆ. ನಾನೂ ಒಬ್ಬ ಒಕ್ಕಲಿಗ ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಒಕ್ಕಲಿಗ ಸಮುದಾಯ ಒಂದೇ ಪಕ್ಷದ ಜೊತೆಗೆ ಇರುತ್ತೇ ಎನ್ನಲಾಗಲ್ಲ. ಜಾತಿ ಹೆಸರಿನಲ್ಇ ಸಿಎಂ ಆಗಲು ಸಾಧ್ಯನಾ? ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯ ತಮ್ಮ ಬ್ರ್ಯಾಂಡ್ ರೀತಿ ಕಚ್ಚಾಡುತ್ತಿದ್ದಾರೆ. ಕುಮಾರಸ್ವಾಮಿ-ಡಿ.ಕೆ. ಶಿವಕುಮಾರ್ ಜಗಳದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದರು.

Share.
Exit mobile version