ಹಾವೇರಿ: ಅತಿವೃಷ್ಟಿ ಹಾನಿ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು,ಶೀಘ್ರವೇ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ. ಹಾನಿಯಾದವರಿಗೆ ಎನ್.ಡಿ.ಆರ್.ಎಫ್.ಮಾರ್ಗಸೂಚಿಗಿಂತ ದ್ವಿಗುಣ ಮೊತ್ತದ ಪರಿಹಾರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ನಿರ್ಧರಿಸಿದೆ ಎಂದು  ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಹೇಳಿದರು.

BIGG NEWS : `ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ : ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ವಿಮಾ ಕಾರ್ಯಕ್ರಮ ಅನುಷ್ಠಾನ

  ಹಿರೇಕೆರೂರು ತಾಲೂಕು ಕೋಡ ಗ್ರಾಮದಲ್ಲಿ  ಮಾಧ್ಯಮದವರಿಂದಿಗೆ ಮಾತನಾಡಿದ ಅವರು,  ಸತತವಾಗಿ ಮಳೆಯ ಕಾರಣ  ಬೆಳೆಹಾನಿ ಸರ್ವೇ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಂದಾಯ, ಕೃಷಿ ಇಲಾಖೆ ಜಂಟಿಯಾಗಿ ಸರ್ವೇಕಾರ್ಯದಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಸರ್ವೇ ಕಾರ್ಯಪೂರ್ಣಗೊಳ್ಳಲಿದೆ. ಧಾರಳವಾಗಿ ಸರ್ವೇ ನಡೆಸಲು  ಸೂಚಿಸಲಾಗಿದೆ ಎಂದು ತಿಳಿಸಿದರು.

Big news:‌ ದಶಕದ ಬಳಿಕ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ʻಪೋಲಿಯೊʼ ಪ್ರಕರಣ ಪತ್ತೆ…

  ರೈತರ ಅನುಕೂಲಕ್ಕಾಗಿ  ರಾಜ್ಯದ 13 ಸ್ಥಳಗಳಲ್ಲಿ  ಅಂದಾಜು ರೂ.10ಕೋಟಿ  ವೆಚ್ಚದಲ್ಲಿ ಕೋಲ್ಡ್‍ಸ್ಟೋರೇಜ್ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಶಿಗ್ಗಾಂವ, ಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ತಲಾ ರೂ.9.86 ಕೋಟಿ ವೆಚ್ಚದಲ್ಲಿ ಕೋಲ್ಡ್‍ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ  ಎಂದರು.

   ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನದ 24 ತಾಸು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ  ತಮ್ಮಕೊಡುಗೆ ನೀಡಿದ್ದಾರೆ. ರೈತಾಪಿ ವರ್ಗ ಸೇರಿದಂತೆ ಸಮಾಜದ ನಾನಾ ಸ್ಥರದ ಜನರ ಕಲ್ಯಾಣಕ್ಕಾಗಿ ವಿಶಿಷ್ಟವಾದ ಕೊಡುಗೆ ನೀಡುತ್ತಿದ್ದಾರೆ ಎಂದರು.

  ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ಮಾತನಾಡಿ,  ಅಂದಾಜು 20ಕೋಟಿ ವೆಚ್ಚದಲ್ಲಿ ಶಿಥೀಲ ಘಟಕ ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮೂರು ಸ್ಥಳದಲ್ಲಿ ಶಿಥೀಲಗೃಹ ಸ್ಥಾಪಿಸಲಾಗಿದೆ.  ಬಿ.ಸಿ.ಪಾಟೀಲ ಅವರು ಕೃಷಿ ಸಚಿವರಾದ ಮೇಲೆ ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಅವರದೇ ಆದ ವಿನೂತನ ಕಾರ್ಯಕ್ರಮ ನೀಡುತ್ತಿದ್ದಾರೆ. ರೈತರೊಂದಿಗೆ ಒಂದುದಿನ, ರೈತರ ಗದ್ದೆಯಲ್ಲಿಭತ್ತ ನಾಟಿ ಹೀಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕ್ರಾಂತಿಕಾರಿ ಬದಲಾವಣೆ ತರಲು ಎಲ್ಲ ಸೇರಿ  ಕೆಲಸ ಮಾಡೋಣ ಎಂದರು.

Share.
Exit mobile version