ಬೆಂಗಳೂರು : ರಾಜ್ಯದಲ್ಲಿ 545 ಪಿಎಸ್ ಐ ನೇಮಕಾತಿ ಹಗರಣದ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಾಗುವ ಸಾಧ್ಯತೆ ಇದ್ದು, ಹಿಂದಿನ ಪಿಎಸ್ ಐ ನೇಮಕಾತಿಯಲ್ಲೂ ಗೋಲ್ ಮಾಲ್ ನಡೆದಿದೆ ಎಂದು ಹೇಳಲಾಗುತ್ತಿದೆ.

BIGG NEWS: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ವೈಯಕ್ತಿಕ ನಿರ್ಧಾರ; ಬಿ.ವೈ.ರಾಘವೇಂದ್ರ

ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಡಿವೈಎಸ್ ಪಿ ಕಳ್ಳಾಟ ಬಯಲಾಗಿದೆ ಎನ್ನಲಾಗಿದ್ದು, 2015 ರಿಂದಲೂ ಪಿಎಸ್ ಐ ನೇಮಕಾತಿ ಅಕ್ರಮ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

2015 ರಿಂದಲೂ ಪಿಎಸ್ ಐ ನೇಮಕಾತಿ ಅಕ್ರಮ ನಡೆದಿತ್ತು ಎನ್ನಲಾಗಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲೂ ಪಿಎಸ್ ಐ ಅಕ್ರಮ ನೇಮಕಾತಿ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ 2 ಬಾರಿ ಪಿಎಸ್ ಐ ಅಕ್ರಮ ನಡೆದಿತ್ತು ಎಂದು ಹೇಳಲಾಗಿದೆ.

21015 ರಲ್ಲಿ 200 ಪಿಎಸ್ ಐ, 2016 ರಲ್ಲಿ 116 ಹಾಗೂ 2018-20 ರ ನಡುವೆ 300 ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡಡದಿದೆ ಎಂದು ಹೇಳಲಾಗುತ್ತಿದ್ದು, ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಸಿಐಡಿ ಈಗಾಗಲೇ ತನಿಖೆ ನಡೆಸುತ್ತಿದ್ದು, ಇನ್ನೂ ಹಲವು ಅಧಿಕಾರಿಗಳು ಬಂಧನವಾಗುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.

BIGG NEWS: ಜ್ಞಾನವಾಪಿ ಮಸೀದಿ ಪ್ರಕರಣ : ಇಂದು ವಾರಣಾಸಿ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆ| Gyanvapi mosque case

Share.
Exit mobile version