BIGG NEWS : ರಾಜ್ಯದ ಜನತೆಗೆ ದೀಪಾವಳಿ ಗಿಫ್ಟ್ ಕೊಟ್ಟ ‘ಸಿಎಂ ಯೋಗಿ’ ಸರ್ಕಾರ ; ಪ್ರತಿ ಕುಟುಂಬಕ್ಕೆ ಉಚಿತ ‘ಗ್ಯಾಸ್ ಸಿಲಿಂಡರ್’ ನೀಡುವುದಾಗಿ ಘೋಷಣೆ

ಲಖನೌ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ದೀಪಾವಳಿಯಂದು ಬಡ ಕುಟುಂಬಗಳಿಗೆ ಉಡುಗೊರೆ ನೀಡಲು ಸಿದ್ಧತೆ ನಡೆಸುತ್ತಿದೆ. ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲವನ್ನ ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ಪ್ರತಿ ಕುಟುಂಬಕ್ಕೆ ಒಂದು ಸಿಲಿಂಡರ್’ನ್ನ ಉಚಿತವಾಗಿ ನೀಡಲಾಗುವುದು. ವಾಸ್ತವವಾಗಿ, ಬಿಜೆಪಿ 2022ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ನಿರ್ಣಯ ಪತ್ರದಲ್ಲಿ ದೀಪಾವಳಿ ಮತ್ತು ಹೋಳಿಯಂದು ಉಚಿತ ಗ್ಯಾಸ್ ಸಿಲಿಂಡರ್‍ಗಳನ್ನು ನೀಡುವುದಾಗಿ ಭರವಸೆ ನೀಡಿತ್ತು, ಅದು ಈಗ ಈಡೇರುತ್ತಿದೆ.