ಬೆಂಗಳೂರು : ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದ ಹಾನಿಗೀಡಾದ ಪ್ರದೇಶಘಳಲ್ಲಿ ಪರಿಹಾರ ಕಾರ್ಯಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಳೆಯಿಂದ ಕೆಲ ಕಡೆಗಳಲ್ಲಿ ಹಾನಿಯಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಹಾನಿಗೀಡದ ಪ್ರದೇಶಗಳಲ್ಲಿ ಗಮನ ಹರಿಸಿ ಪರಿಹಾರ ಕಾರ್ಯ ನಡೆಸಲು ತಿಳಿಸಿದ್ದೇನೆ ಎಂದರು.
ಇನ್ನು ಚಂದ್ರಶೇಖರ್ ಗುರೂಜಿ ಹತ್ಯೆಗೆ ವೈಯಕ್ತಿಕ ದ್ವೇಷ, ಹಗೆತನವೇ ಕಾರಣ. ಇಂತಹ ಯುವಕರ ಮನಸ್ಥಿತಿಯಿಂದ ಹತ್ಯೆಗಳು ಆಗುತ್ತಿವೆ. ಇಂತಹ ಯುವಕರ ಮನಸ್ಥಿತಿಗಳನ್ನು ಸರಿಮಾಡಬೇಕಿದೆ. ಕಾನೂನು ಸುವ್ಯವಸ್ಥೆ ಲೋಪವಾಗಿಲ್ಲ.ಆದರೂ ಕಾನೂನು ಸುವ್ಯವಸ್ಥೇ ಗಟ್ಟಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.
SHOCKING NEWS : ಗಣಿ ಜಿಲ್ಲೆಯಲ್ಲಿ ʻ ಘನಘೋರ ʼ ಘಟನೆ ಬೆಳಕಿಗೆ : ಮಹಿಳೆಯ ಪ್ರಾಣ ಹಿಂಡಿದ ʻ ಬುರ್ಖಾ ʼ