ಮಂಗಳೂರು : ನಗರದ ಬಲ್ಮಠ ಬಳಿಯ ಮಂಗಳೂರು ನರ್ಸಿಂಗ್ ಹೋಮ್ ಮುಂಭಾಗದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಈಗಾಗಲೇ ರಾಜ್ ಕುಮಾರ್ ಎನ್ನುವ ಓರ್ವನನ್ನು ರಕ್ಷಣೆ ಮಾಡಲಾಗಿದ್ದು, ಇದೀಗ ಸತತ 6 ಗಂಟೆಗಳ ಕಾಲ ಚಂದನ್ ಕುಮಾರ್ ಎನ್ನುವ ಮತ್ತೊರ್ವ ಕಾರ್ಮಿಕನನ್ನು ಸಿಬ್ಬಂದಿಗಳು ರಕ್ಷಿಸಿದ್ದಾರೆ ಆದರೆ ಚಂದನ್ ಕುಮಾರ್ ಕೊನೆಯುಸಿರೆಳೆದಿದ್ದಾನೆ ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ.

ಅವರು ರಕ್ಷಣಾ ಕಾರ್ಯಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಮಂಗಳೂರಿನ ಬಲ್ಮಠ ಪ್ರದೇಶದಲ್ಲಿ ಕಾಮಗಾರಿ ವೇಳೆ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣಿನಲ್ಲಿ ಬಿಹಾರ್ ಮೂಲದ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇಬ್ಬರು ಕಾರ್ಮಿಕರನ್ನು ಇದೀಗ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಚಂದನ್ ಕುಮಾರ್ ಎನ್ನುವ ಕಾರ್ಮಿಕರನ್ನು ಸಿಬ್ಬಂದಿಗಳು ಹೊರತೆಗೆದಿದ್ದರು. ಆದರೆ ಮಣ್ಣಿನ ಅಡಿಯಲ್ಲಿ ನಿತ್ರಾಣಗೊಂಡಿದ್ದ ಚಂದನ್ ಕುಮಾರ್ ಇದೀಗ ಸಾವನ್ನಪ್ಪಿದ್ದಾನೆ.

ಹೊರಕ್ಕೆ ತೆಗೆದ ನಂತರ ಕಾರ್ಮಿಕ ಚಂದನ್ ಕುಮಾರ್ ವೈದ್ಯರು ಆತನ ಆರೋಗ್ಯ ತಪಾಸಣೆ ನಡೆಸುತ್ತಿದರು. ಚಂದನ್ ಹೃದಯ ಭಾಗದಲ್ಲಿ ಸಿಪಿಆರ್ ಮಾಡುತ್ತಿದ್ದಾರೆ. ಸಿಪಿಆರ್ ಅಂದರೆ ಕಾರ್ಡಿಯೋ ಪಲ್ಮಾನರಿ ಪುನರುಜ್ಜೀವನ ಎಂದು ಹೇಳಲಾಗುತ್ತಿದೆ. ಆತನ ಪಲ್ಸ್ ಚೆಕ್ ಮಾಡಿದ ನಂತರ ಆತ ಮೃತಪಟ್ಟಿರುವುದು ದೃಢಪಡಿಸಿದರು.ಇದಕ್ಕೂ ಮೊದಲು ಮತ್ತೊರ್ವ ಕಾರ್ಮಿಕರನ್ನು ಹೊರ ತೆಗೆದಿದ್ದರು ಈ ಕಾರ್ಮಿಕರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ.ಆದರೆ ನಿತ್ರಾಣಗೊಂಡಿದ್ದರಿಂದ ಚಂದನ್ ಕುಮಾರ್ ಸಾವನಪ್ಪಿದ್ದಾನೆ.

Share.
Exit mobile version