*ಅವಿನಾಶ್ ಆರ್ ಭೀಮಸಂದ್ರ
ಕೆಎನ್ಎನ್ಡಿಜಿಟಲ್ಡೆಸ್ಕ್: ಬಿಗ್ ಬಾಸ್ ಕನ್ನಡ ಓಟಿಟಿ ಶೋ ಶುರುವಾಗಿದ್ದು, ಮನೆಯಲ್ಲಿರುವ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಇವೆಲ್ಲದರ ನಡುವೆ ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಮಂದಿ ಇನ್ನೊಬ್ಬರ ಜೊತೆಗಿನ ಅಕ್ರಮ ಸಂಬಂಧಗಳ ಬಗ್ಗೆ ಮಾತನಾಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಹೌದು, ಕೆಲ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದು, ಲೈಂಗಿಕ ವಿಚಾರಗಳನ್ನು ಕೂಡ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದಲ್ಲದೇ ಕೆಲವು ಮಂದಿ ಮದುವೆಯದ ವ್ಯಕ್ತಿ ಜೊತೆಗಿನ ಸಂಬಂಧವನ್ನು ಹೇಳಿಕೊಳ್ಳುತ್ತಿರುವುದು ನೈತಿಕಕತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ ನೋಡುಗರು. ಬಿಗ್ ಬಾಸ್ ಮನೆಯಲ್ಲಿರುವ ಹುಡುಗಿಯೊಬ್ಬಳ ನಗ್ನ ವಿಡಿಯೋ ವೈರಲ್ ಕೂಡ ಆಗಿತ್ತು, ಆಕೆ ಈಗ ತನ್ನ ಇನ್ನೊಂದು ವಿಡಿಯೋ ಕೂಡ ಇದೇ ಅಂತ ಹೇಳಿದ್ದು, ಆಕೆಯ ನೈತಿಕತೆಯನ್ನು ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವ ಡ್ರಗ್ಸ್ ಬಗ್ಗೆ ಪುಖಾನು ಪುಖವಾಗಿ ಮಾತನಾಡಿರುವ ನಟನೊಬ್ಬ ಸಮಾಜಕ್ಕೆ ಮಾರಕ ಎನ್ನುತ್ತಿದ್ದಾರೆ.
ಇದಲ್ಲದೇ ಕಿಚ್ಚ ಸುದೀಪ್ ಗೆ ಕೂಡ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದು, ಇಂತಹವರನ್ನು ಮನೆಗೆ ಕಳುಹಿಸಿ ನೀವು ದುಡ್ಡು ಮಾಡಬೇಕಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ನಲ್ಲಿ ಇರೋರು ಮೂರು ಬಿಟ್ಟವರು ಅನ್ನೋದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕ ಮಂದಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸಮಾಜಕ್ಕೆ ಇಂತಹವರಿಂದ ಏನು ಪ್ರಯೋಜನ, ಇವರಿಂದ ಯುವ ಪೀಳಿಗೆ ನಾಶವಾಗುವುದು ಖಂಡಿತ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಇರುವ ಮಂದಿಗೆ ಸೆಕ್ಸ್, ಡ್ರಗ್ಸ್, ಆಫೇರ್ಗಳನ್ನು ಪ್ರಮೋಟ್ ಮಾಡಲು ಬಂದಿದ್ದಾರ? ಇದರಿಂದ ಕಾರ್ಯಕ್ರಮವನ್ನು ನಡೆಸಿಕೊಡುವವರು ಬದುಕಬೇಕಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ.